ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರ ಶರಣಾಗತಿ
Team Udayavani, Nov 1, 2020, 8:13 PM IST
ರಾಯ್ ಪುರ: ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರು ಪೊಲೀಸರಿಗೆ ಶರಣಾಗತರಾಗಿದ್ದಾರೆ. ಇವರಲ್ಲಿ ಐವರ ಸುಳಿವು ಕೊಟ್ಟವರಿಗೆ ಪೊಲೀಸರು ಈ ಹಿಂದೆ ನಗದು ಬಹುಮಾನವನ್ನೂ ಕೂಡ ಘೋಷಿಸಿದ್ದರು.
ಮಾವೋವಾದಿ ಸಿದ್ದಾಂತಗಳಿಂದ ಬೇಸತ್ತು ಈ 29 ಮಂದಿ ನಕ್ಷಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜೂನ್ ನಲ್ಲಿ ನಕ್ಷಲರ ಪುನರ್ವಸತಿಗಾಗಿ ‘ಲಾನ್ ವರ್ರಾಟು’ ( ಗ್ರಾಮ/ ಮನೆಗಳಿಗೆ ಹಿಂದಿರುಗಿ) ಎಂಬ ಯೋಜನೆಯನ್ನು ಪೊಲೀಸರು ರೂಪಿಸಿದ್ದರು. ಇದಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಒಟ್ಟಾರೆ 177 ನಕ್ಷಲರು ಶರಣಾಗಿದ್ದರು.
ಭಾನುವಾರ (ನ.1) 6 ಮಹಿಳೆಯರು ಸೇರಿದಂತೆ ಸುಮಾರು 27 ಮಂದಿ ಬಾರ್ಸೂರ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಇವರಲ್ಲಿ 11 ಮಂದಿ ಗುಫಾ ಗ್ರಾಮಕ್ಕೆ ಸೇರಿದವರು. 7 ಜನರು ಬೆದ್ಮಾ, ಐವರು ಮಂಗ್ನಾರ್, ಮೂವರು ಹಿತವಾಡ, ಓರ್ವ ಹಂದ್ವಾಡ ಗ್ರಾಮದ ನಿವಾಸಿಗಳು ಎಂದು ದಾಂತೇವಾಡ ಎಸ್ ಪಿ ಅಭಿಷೇಕ್ ಪಲ್ಲವ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಜ್ಬುಲ್ ಸಂಘಟನೆಯ ಕಾಶ್ಮೀರ ಮುಖ್ಯಸ್ಥನನ್ನು ಎನ್ ಕೌಂಟರ್ ಮೂಲಕ ಹತ್ಯೆಗೈದ ಭದ್ರತಾಪಡೆಗಳು
ಈ 27 ಮಂದಿ ಕೂಡ ದಂಡಕಾರಾಣ್ಯ ಅದಿವಾಸಿ ಕಿಸಾನ್ ಮಸ್ದೂರ್ ಸಂಘ, ಕ್ರಾಂತಿಕಾರಿ ಮಹಿಳಾ ಅದಿವಾಸಿ ಸಂಘ ಮುಂತಾದ ಸಂಘಗಳ ಸಕ್ರಿಯ ಸದಸ್ಯರಾಗಿದ್ದರು. ಇವರು ಪೊಲೀಸರ ಮೇಲೆ ದಾಳಿ ಪ್ರಕರಣದಲ್ಲಿ ಹಾಗೂ ಐಇಡಿ ಸ್ಪೋಟ ಪ್ರಕರಣದಲ್ಲಿ ಭಾಗಿಯಾಗಿದ್ದರು. ಇವರಲ್ಲಿ ಐವರ ಸುಳಿವು ನೀಡಿದವರಿಗೆ ಪೊಲೀಸರು ಈ ಹಿಂದೆ 1 ಲಕ್ಷ ಬಹುಮಾನ ಘೋಷಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು