ಚೆನ್ನೈ: ಗ್ರಾಮಸ್ಥರ ಶ್ರಮದಿಂದ 45 ವರ್ಷಗಳ ಬಳಿಕ ಕಾಲುವೆಯಲ್ಲಿ ಹರಿದ ನೀರು.!
Team Udayavani, Dec 25, 2021, 10:00 PM IST
ಚೆನ್ನೈ: ಕಸ-ಕಡ್ಡಿ, ಮಣ್ಣಿನಿಂದ ಮುಚ್ಚಿದ್ದ ತಮಿಳುನಾಡಿನ ವಿಳ್ಳುಪುರಂ ಕಾಲುವೆಯಲ್ಲಿ 45 ವರ್ಷಗಳ ಬಳಿಕ ನೀರು ಹರಿಯಲಾರಂಭಿಸಿದೆ. ಸ್ಥಳೀಯರು ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವುದಕ್ಕೆ ಈ 22 ಕಿ.ಮೀ ಉದ್ದದ ಕಾಲುವೆ ಸಾಕ್ಷಿಯಾಗಿದೆ.
ತೆಲಿಮೇಡುವಿನ ತೆನ್ಪೆನ್ನಾಯರ್ನಿಂದ ಇರುವ ವಿಳ್ಳುಪುರಂ ಕಾಲುವೆ 8 ಕೆರೆಗಳಿಗೆ ನೀರು ತುಂಬಿಸುತ್ತಿತ್ತು. ಆದರೆ 45 ವರ್ಷಗಳ ಹಿಂದೆ ಕಾಲುವೆ ಕಸ, ಕಡ್ಡಿ, ಮಣ್ಣು ತುಂಬಿ ನೀರು ಹರಿಯಲು ಅಸಾಧ್ಯವಾಗಿತ್ತು. 2003ರಲ್ಲಿ ವಿಲ್ಲುಪರಂ- ಚೆನ್ನೈ ನಡುವಿನ ರಾಷ್ಟ್ರೀಯ ಹೆದ್ದಾರಿಯನ್ನು 4 ಪಥ ಮಾಡಿದಾಗ, ಚಾನೆಲ್ನ ಕೆಲ ಭಾಗವನ್ನು ಮುಚ್ಚಿ ಹಾಕಲಾಗಿತ್ತು. 8 ಕೆರೆಗಳು ಖಾಲಿಯಾಗಿದ್ದರಿಂದಾಗಿ ಹತ್ತಾರು ಹಳ್ಳಿಗಳು ನೀರಿಗಾಗಿ ಪರದಾಡುವಂತಾಗಿತ್ತು.
ವಿಲ್ಲುಪುರ ಮತ್ತು ನನ್ನಾಡು, ವಿರಟಿಕುಪ್ಪಂ ಮತ್ತು ಆಲತ್ತೂರು ಗ್ರಾಮಸ್ಥರು, 2015ರಲ್ಲಿ ತಂಡ ರಚಿಸಿ, ಹಣ ಸಂಗ್ರಹಿಸಿ ಕಾಲುವೆ ಮಾಡಲಾರಂಭಿಸಿದ್ದರು. ಅದಕ್ಕೆ ಪೂರಕವಾಗಿ ತಮಿಳುನಾಡು ಸರ್ಕಾರದಿಂದ 35 ಲಕ್ಷ ರೂ. ಬಿಡುಗಡೆಯಾಯಿತು. ಇದೀಗ ಕಾಲುವೆ ಪುನರ್ ನಿರ್ಮಾಣಗೊಂಡಿದ್ದು, ನೀರು ಹರಿಯಲಾರಂಭಿಸಿದೆ ಎಂದು “ದ ಹಿಂದೂ’ ವರದಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!