ಮುಂದುವರಿದ ಕದನ ವಿರಾಮ ಉಲ್ಲಂಘನೆ
ಪಾಕ್ ಸೇನೆಯ ಶೆಲ್ ದಾಳಿಗೆ ಸೇನಾಧಿಕಾರಿ, ಬಾಲಕಿ ಬಲಿ
Team Udayavani, Apr 2, 2019, 6:00 AM IST
ಜಮ್ಮು: ಕಣಿವೆ ರಾಜ್ಯದ ಪೂಂಛ… ಜಿಲ್ಲೆಯ ಸಮೀಪದ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತದ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಸೇನೆ ನಡೆಸಿದ ಶೆಲ್ ದಾಳಿಗೆ ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಅಧಿಕಾರಿ ಹಾಗೂ ಸೋಬಿಯಾ (5) ಎಂಬ ಬಾಲಕಿಯೊಬ್ಬಳು ಬಲಿಯಾಗಿದ್ದಾರೆ.
ಘಟನೆಯಲ್ಲಿ 6 ಬಿಎಸ್ಎಫ್ ಯೋಧರು ಸಹಿತ 11 ಜನರು ಪ್ರಾಣ ತೆತ್ತಿತ್ತು, ಕೆಲವು ಮನೆಗಳಿಗೂ ಹಾನಿಯಾಗಿದೆ. ದಾಳಿಗೆ 120 ಎಂಎಂ ಗಾತ್ರದ ಮಾರಣಾಂತಿಕ ಬಾಂಬ್ಗಳನ್ನು ಬಳಸಲಾಗಿತ್ತು. ಕೃಷ್ಣಗಾಟಿ, ಕೇರ್ನಿ, ಮಂಕೋಟೆ, ಗುಲ್ಪುರ್, ದೇಗ್ವಾರ್ ಶಹಾಪುರ್ ಮತ್ತು ಪೂಂಚ್ ಪ್ರಾಂತ್ಯಗಳಲ್ಲಿ ದಾಳಿ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ಶುರುವಾದ ಮೊದಲ ಹಂತದ ದಾಳಿಯಲ್ಲಿ ಮೂವರು ನಾಗರಿಕರು ಹಾಗೂ ಒಬ್ಬ ಯೋಧ ಗಾಯಗೊಂಡಿದ್ದರು.
ಜೈಶ್ ಉಗ್ರನ ಬಂಧನ: ಜೈಶ್-ಎ- ಮೊಹಮ್ಮದ್ ಸಂಘಟನೆಯ ಉಗ್ರ ಫಯಾಜ್ ಅಹಮದ್ ಲೋನ್ ಎಂಬಾತನನ್ನು ದೆಹಲಿ ಪೊಲೀಸರ ತಂಡ ಶ್ರೀನಗರದಲ್ಲಿ ಬಂಧಿಸಿದೆ. ಕುಪ್ವಾರದ ನಿವಾಸಿ ಫಯಾಜ್ ಬಗ್ಗೆ ಸುಳಿವು ನೀಡಿದವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು, ಜಾಮೀನುರಹಿತ ವಾರಂಟನ್ನೂ ಹೊರಡಿಸಲಾಗಿತ್ತು. 2015ರಿಂದ ಈತ ತಲೆಮರೆಸಿ ಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಫಲ ಸ್ಫೋಟ: ಸಿಕ್ಕಿಬಿದ್ದ ಶಂಕಿತ ಉಗ್ರ
ರಾಂಬನ್ ಜಿಲ್ಲೆಯ ಬನಿಹಾಲ್ ಬಳಿಯ ಜವಾಹರ್ ಸುರಂಗ ಮಾರ್ಗದ ಬಳಿ ಶನಿವಾರ ಬೆಳಗ್ಗೆ ಸಿಆರ್ಪಿಎಫ್ ಭದ್ರತಾ ವಾಹನಗಳ ಬಳಿ ಸ್ಫೋಟವಾಗಿದ್ದ ಕಾರಿನ ಚಾಲಕ ಹಾಗೂ ಶಂಕಿತ ಉಗ್ರನನ್ನು ಬನಿಹಾಲ್ ನಗರದಲ್ಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಸಿಆರ್ಪಿಎಫ್ ಸಿಬ್ಬಂದಿಯಿಂದ ಕಾವಲು ವಾಹನಗಳು ಜವಾಹಾರ್ ಸುರಂಗ ಮಾರ್ಗವನ್ನು ದಾಟಿ ಬಂದ ಕೆಲವೇ ಕ್ಷಣಗಳಲ್ಲಿ ಸನಿಹದಲ್ಲೇ ಸಾಗುತ್ತಿದ್ದ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಇದರಲ್ಲಿದ್ದ ಎರಡು ಎಲ್ಪಿಜಿ ಸಿಲಿಂಡರ್ಗಳಲ್ಲಿ ಒಂದು ಸ್ಫೋಟಗೊಂಡಿತ್ತು. ಘಟನೆಯ ನಂತರ, ಚಾಲಕ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ. ಜತೆಗೆ, ಕಾರಿನಲ್ಲಿ ಮತ್ತೂಂದು ಸಿಲಿಂಡರ್, ಪೆಟ್ರೋಲ್ ತುಂಬಿದ ಕ್ಯಾನು, ಜಿಲೆಟಿನ್ ಕಡ್ಡಿಗಳು, ಇತರ ಸ್ಫೋಟಕ ಸಾಮಗ್ರಿಗಳು ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆಯ ಪತ್ರವೊಂದು ಸಿಕ್ಕಿದ್ದು ಅದರಿಂದ ಆತ ಆ ಸಂಘಟನೆಯ ವ್ಯಕ್ತಿಯೆಂಬುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್