ಡಿ.15ಕ್ಕೆ ಅಗ್ನಿ-5 ಪರೀಕ್ಷೆ? ಬಂಗಾಲ ಕೊಲ್ಲಿಯಲ್ಲಿ ವಿಮಾನ ಹಾರಾಟಕ್ಕೆ ನಿಷೇಧ
Team Udayavani, Dec 12, 2022, 6:55 AM IST
ಹೊಸದಿಲ್ಲಿ: ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಡಿ.15 ಅಥವಾ 16ರಂದು ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಬಂಗಾಲ ಕೊಲ್ಲಿಯಲ್ಲಿ ವಿಮಾನಗಳು ಹಾರಾಡದಂತೆ ನೋಟಿಸ್ ಟು ಏರ್ಮನ್/ನೋಟಿಸ್ ಟು ಏರ್ ಮಿಷನ್ಸ್ ನೀಡಲಾಗಿದೆ.
ನಾರ್ವೆಯ ಮಾರಿಟೈಮ್ ಆಪ್ಟಿಮಾ ಕಂಪೆನಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನದ ಗೂಢಚರ್ಯೆ ಹಡಗು “ಯುವಾನ್ ವಾಂಗ್ 5′ ಪ್ರವೇಶ ಮಾಡಿದೆ ಎಂಬ ಮಾಹಿತಿಯ ನಡುವೆಯೇ ಈ ಪರೀಕ್ಷೆ ನಡೆಯಲಿದೆ. ಅಗ್ನಿ-5 ಉಡಾವಣೆಯ ಮಾಹಿತಿ ತಿಳಿದೇ ವಿವಿಧ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಿರುವ ಚೀನದ ಪತ್ತೆದಾರಿ ಹಡಗು ಹಿಂದೂ ಮಹಾಸಾಗರ ಪ್ರವೇಶಿಸಿದೆ ಎಂದು ಹೇಳಲಾಗಿದೆ.
ವಿಶೇಷತೆಗಳೇನು?
ಅಗ್ನಿ-5 ಮೇಲ್ಮೈ ಯಿಂದ ಮೇಲ್ಮೆ„ಗೆ ಚಲಿಸುವ ಬ್ಯಾಲಿಸ್ಟಿಕ್ ಕ್ಷಿಪಣಿ. 5,000 ಕಿ.ಮೀ. ವರೆಗಿನ ಗುರಿಯನ್ನು ನಿಖರವಾಗಿ ಕ್ರಮಿಸುವ ಸಾಮರ್ಥ್ಯ
ಚೀನದ ಯಾವುದೇ ಪ್ರದೇಶಕ್ಕೆ ಸುಲಭವಾಗಿ ಕ್ರಮಿಸಬಹುದಾಗಿದೆ.
1,500 ಕೆ.ಜಿ.- ಇಷ್ಟು ತೂಕದ ಸಿಡಿತಲೆ ಹೊತ್ತೂಯ್ಯುವ ಸಾಮರ್ಥ್ಯ
50,000 ಕೆ.ಜಿ. ತೂಕ ಒಯ್ಯುವ ಸಾಮರ್ಥ್ಯ
1989 ಅಗ್ನಿ ಕ್ಷಿಪಣಿ ಸರಣಿ ಪರೀಕ್ಷೆ ಆರಂಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bihar: 2025ರ ಚುನಾವಣೆಗೂ ಮುನ್ನ 10 ಲಕ್ಷ ಮಂದಿಗೆ ಉದ್ಯೋಗದ ಭರವಸೆ ನೀಡಿದ ಬಿಜೆಪಿ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ