![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
ಎಐಎಡಿಎಂಕೆ ಚಿಹ್ನೆಗಾಗಿ ಲಂಚ: ದಿನಕರನ್ ವಿರುದ್ಧ FIR
Team Udayavani, Apr 17, 2017, 11:27 AM IST
![TTV Dinakaran-700.jpg](https://www.udayavani.com/wp-content/uploads/2017/04/17/TTV Dinakaran-700-620x354.jpg)
ಹೊಸದಿಲ್ಲಿ : ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿ ಟಿ ವಿ ದಿನಕರನ್ ವಿರುದ್ಧ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಲಂಚದ ಕೇಸೊಂದನ್ನು ದಾಖಲಿಸಿಕೊಂಡಿದೆ.
ಎಐಎಡಿಎಂಕೆ ಪಕ್ಷದ ಎರಡೆಲೆಗಳ ಚುನಾವಣಾ ಚಿಹ್ನೆಗಾಗಿ ನಡೆಯತ್ತಿರುವ ಸಮರದ ಮೇಲೆ ಪ್ರಭಾವ ಬೀರುವುದಕ್ಕಾಗಿ ಬಳಸಲು ಉದ್ದೇಶಿಸಲಾಗಿದ್ದ 1.5 ಕೋಟಿ ನಗದು ವಶ ಪಡಿಸಿಕೊಳ್ಳಲಾಗಿರುವುದನ್ನು ಅನುಸರಿಸಿ ದಿಲ್ಲಿ ಪೊಲೀಸ್ ಕ್ರೈಮ್ ಬ್ರ್ಯಾಂಚ್ ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್ ಅವರನ್ನು ಎಫ್ಐಆರ್ನಲ್ಲಿ ಹೆಸರಿಸಿರುವುದಾಗಿ ಎಎನ್ಐ ಸುದ್ದಿ ಮೂಲಗಳು ತಿಳಿಸಿವೆ.
ದಿಲ್ಲಿ ಪೊಲೀಸರು ಇಂದು ಬೆಳಗ್ಗೆ ಮಧ್ಯ ದಿಲ್ಲಿಯಲ್ಲಿನ ಹೊಟೇಲ್ ಒಂದರಿಂದ ಎಸ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿ ಆತನ ಬಳಿ ಇದ್ದ 1.5 ಕೋಟಿ ರೂ. ನಗದನ್ನು ಹಾಗೂ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ ಕಾರನ್ನು ವಶಪಡಿಸಿಕೊಂಡಿದ್ದರು.
ಎಐಎಡಿಎಂಕೆ ಪಕ್ಷದ ಎರಡೆಲೆಯ ಚುನಾವಣಾ ಚಿಹ್ನೆಗಾಗಿ ಓ ಪನ್ನೀರಸೆಲ್ವಂ ಮತ್ತು ತಮಿಳು ನಾಡಿನ ಆಳುವ ಪಕ್ಷವಾಗಿರುವ ವಿ ಕೆ ಶಶಿಕಲಾ ಬಣದ ನಡುವೆ ತೀವ್ರವಾದ ಸಮರ ಏರ್ಪಟ್ಟಿರುವ ನಡುವೆಯೇ ಈ ಬಂಧನ ಹಾಗೂ 1.5 ಕೋಟಿ ರೂ. ವಶೀಕರಣ ನಡೆದಿರುವುದು ಗಮನಾರ್ಹವಾಗಿದೆ.
ಆರ್ ಕೆ ನಗರ ಉಪಚುನಾವಣೆಗೆ ಮುನ್ನವೇ ಕಳೆದ ತಿಂಗಳಲ್ಲಿ ಚುನಾವಣಾ ಆಯೋಗವು ಸ್ತಂಭನಗೊಳಿಸಿದ್ದ ಎಐಎಡಿಎಂಕೆ ಪಕ್ಷದ ಎರಡೆಲೆಗಳ ಚುನಾವಣಾ ಚಿಹ್ನೆ ಶಶಿಕಲಾ ಬಣಕ್ಕೆ ಸಲ್ಲುವಂತೆ ಮಾಡಲು 60 ಕೋಟಿ ರೂ.ಗಳ ಲಂಚವನ್ನು ನೀಡಬೇಕಾಗಿದೆ ಎಂದು ದಿನಕರನ್ ತನ್ನಲ್ಲಿ ಹೇಳಿರುವುದಾಗಿ ಮಧ್ಯವರ್ತಿ ಎಸ್ ಚಂದ್ರಶೇಖರ್ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಶಶಿಕಲಾ ಅವರ ಸೋದರ ಸಂಬಂಧಿಯಾಗಿರುವ ದಿನಕರನ್ ಅವರು ಆರ್ ಕೆ ನಗರ ಉಪ ಚುನಾವಣೆಯಲ್ಲಿ ಶಶಿಕಲಾ ಬಣದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿಯಾಗಿದ್ದರು.
ಟಾಪ್ ನ್ಯೂಸ್
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ](https://www.udayavani.com/wp-content/uploads/2024/07/reels-150x105.jpg)
Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ
![kupwara](https://www.udayavani.com/wp-content/uploads/2024/07/kupwara-150x98.jpg)
Encounter in Kupwara: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿದಂತೆ ನಾಲ್ವರಿಗೆ ಗಾಯ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
MUST WATCH
ಹೊಸ ಸೇರ್ಪಡೆ
![Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ](https://www.udayavani.com/wp-content/uploads/2024/07/chikka-150x83.jpg)
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
![ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!](https://www.udayavani.com/wp-content/uploads/2024/07/Dubai1-150x84.jpg)
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
![Screenshot (7) copy](https://www.udayavani.com/wp-content/uploads/2024/07/Screenshot-7-copy-150x83.jpg)
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
![ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು](https://www.udayavani.com/wp-content/uploads/2024/07/poorna-150x83.jpg)
Hubli; ಡೆಂಗ್ಯೂ ಜ್ವರದಿಂದ ಐದು ವರ್ಷದ ಬಾಲಕಿ ಸಾವು
![gajanur3](https://www.udayavani.com/wp-content/uploads/2024/07/gajanur3-150x84.jpg)
ತುಂಗಾ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳ… ಮತ್ತೆ ಜಲಾವೃತಗೊಂಡ ಪತ್ತೆಪೂರ್ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.