ಅಜಯ್ ಮಿಶ್ರಾ ರಾಜೀನಾಮೆ ಬೇಕು: ಪ್ರಿಯಾಂಕಾ ವಾದ್ರಾ
Team Udayavani, Oct 11, 2021, 6:24 AM IST
ವಾರಾಣಸಿ/ಲಕ್ನೋ: ಲಖೀಂಪುರ ಖೇರಿಯಲ್ಲಿ ಅ.3ರಂದು ನಡೆದ ಹಿಂಸಾತ್ಮಕ ಘಟನೆಗಳಿಗೆ ಹೊಣೆ ಹೊತ್ತು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಅಜಯ ಕುಮಾರ್ ಮಿಶ್ರಾ ರಾಜೀ ನಾಮೆ ನೀಡಲೇಬೇಕು. ಈ ಬೇಡಿಕೆ ಈಡೇ ರುವ ವರೆಗೆ ಹೋರಾಟ ಮುಂದುವರಿಯಲಿದೆ. ಹೀಗೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಎಚ್ಚರಿಕೆ ನೀಡಿದ್ದಾರೆ.
ವಾರಾಣಸಿಯಲ್ಲಿ ರವಿವಾರ ಆಯೋ ಜಿಸಲಾಗಿದ್ದ “ಕಿಸಾನ್ ನ್ಯಾಯ ರ್ಯಾಲಿ’ಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿಯ ನಾಯಕರು ಮತ್ತವರ ಕೋಟ್ಯಧಿಪತಿ ಸ್ನೇಹಿತರನ್ನು ಬಿಟ್ಟು ಬೇರೆ ಯಾರೂ ಸುರಕ್ಷಿತವಾಗಿಲ್ಲ ಎಂದು ದೂರಿದ್ದಾರೆ. ಸಚಿವರ ಮಗ ರೈತರ ಮೇಲೆ ಕಾರು ಹರಿಸಿದ್ದಾನೆ. ಸರಕಾರ ಅವನನ್ನು ಕಾಪಾಡಲು ಯತ್ನಿಸುತ್ತಿದೆ. ಆರೋಪಿಗೆ ತನಿಖೆಗೆ ಹಾಜರಾಗಲು ಪೊಲೀಸರು ಆಹ್ವಾನ ನೀಡುವುದು ನಮ್ಮ ದೇಶದಲ್ಲಿ ಮಾತ್ರ ಸಾಧ್ಯ ಎಂದರು. ಲಕ್ನೋಗೆ ಆಗಮಿಸಲು ಸಮಯ ಇರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಲಖೀಂಪುರ ಖೇರಿಗೆ ಭೇಟಿ ನೀಡಿ, ನೊಂದವರಿಗೆ ಸಾಂತ್ವನ ಹೇಳಲು ವೇಳೆ ಇಲ್ಲ ಎಂದು ಆಕ್ಷೇಪಿಸಿದರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ.
ಇದನ್ನೂ ಓದಿ:ಐಪಿಎಲ್ ಕ್ವಾಲಿಫೈಯರ್-1: 9ನೇ ಸಲ ಫೈನಲ್ ತಲುಪಿದ ಚೆನ್ನೈ
ಉಪವಾಸ: ನವರಾತ್ರಿ ನಿಮಿತ್ತ ಉಪ ವಾಸದಲ್ಲಿ ಇರುವ ಅಂಶವನ್ನು ಪ್ರಿಯಾಂಕ ವಾದ್ರಾ ಬಹಿರಂಗಪಡಿಸಿದರು. ಹೀಗಾಗಿ ದೇವಿ ದುರ್ಗೆಯನ್ನು ನೆನೆಯುವ ಮೂಲಕ ಭಾಷಣ ಆರಂಭಿಸುವುದಾಗಿ ಹೇಳಿದರು. ದುರ್ಗಾ ದೇವಿಯ ಸ್ತುತಿ ಮಾಡುವ ಮೂಲಕ ಭಾಷಣ ಆರಂಭಿಸಿದರು ವಾದ್ರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur; ಚುನಾವಣೆ ಕರ್ತವ್ಯನಿರತ ಬಿಎಲ್ಒ ಸಾವು
Koratagere: ಪಟ್ಟಣಕ್ಕೆ 10 ದಿನಕ್ಕೊಮ್ಮೆ ನೀರು ಸರಬರಾಜು
G. T. Devegowda; ಲೈಂಗಿಕ ದೌರ್ಜನ್ಯ ಪ್ರಕರಣ ಗೊತ್ತಿದ್ದರೆ ಟಿಕೆಟ್ ನೀಡುತ್ತಿರಲಿಲ್ಲ
Dharwad; ಮತದಾನಕ್ಕಾಗಿ ತವರಿಗೆ ಮರಳಿದ ವಿನಯ್ ಕುಲಕರ್ಣಿ; ಸಪ್ತಾಪೂರದಲ್ಲಿ ಕಿಕ್ಕಿರಿದ ಜನರು
Prajwal Revanna ಪ್ರಕರಣವನ್ನು ಸಿಬಿಐಗೆ ವಹಿಸಲಿ: ಜಗದೀಶ್ ಶೆಟ್ಟರ್