ಹಳಿಯಲ್ಲೇ ನಿಂತ ಕಾರು: ದುರಂತ ತಪ್ಪಿಸಿದ ಜಾಗೃತ ರೈಲು ಚಾಲಕ
Team Udayavani, Dec 25, 2017, 5:09 PM IST
ಹೊಸದಿಲ್ಲಿ : ರೈಲ್ವೆ ಕ್ರಾಸಿಂಗ್ನಲ್ಲಿ ರೈಲು ಪಾಸಾಗುವುದನ್ನು ಕಾಯುತ್ತಾ ವಾಹನಗಳು ನಿಂತಿರುವ ದೃಶ್ಯ ವಿಶ್ವದೆಲ್ಲೆಡೆ ಸರ್ವ ಸಾಮಾನ್ಯ. ಆದರೆ ಗ್ವಾಲಿಯರ್ನಲ್ಲಿ ಇಂದು ಸೋಮವಾರ ತದ್ವಿರುದ್ದ ಸ್ಥಿತಿ ಕಂಡು ಬಂತು !
ಸುಮಾವಾಲಿ ಮತ್ತು ಗ್ವಾಲಿಯರ್ ನಡುವೆ ನ್ಯಾರೋ ಗೇಜ್ನಲ್ಲಿ ಸಾಗಿ ಬರುತ್ತಿದ್ದ ರೈಲಿನ ಚಾಲಕನಿಗೆ ರಾಮದಾಸ್ ಘಾಟಿಯಲ್ಲಿ ಇನ್ನೊಂದು ಟ್ರ್ಯಾಕಿನ ಮೇಲೆ ಎಸ್ಯುವಿ ಕಾರೊಂದನ್ನು ನಿಲ್ಲಿಸಲಾಗಿರುವುದು ಕಂಡು ಬಂತು.
ಒಡನೆಯೇ ಜಾಗೃತೆ ವಹಿಸಿದ ನ್ಯಾರೋ ಗೇಜ್ ರೈಲು ಚಾಲಕ ಸರಿಯಾಗಿ ಆ ತಾಣದಲ್ಲೇ ತನ್ನ ರೈಲನ್ನು ನಿಲ್ಲಿಸಿದ. ಟ್ರ್ಯಾಕ್ ನಡುವೆ ಎಸ್ಯುವಿ ಕಾರೊಂದನ್ನು ನಿಲ್ಲಿಸಲಾಗಿದೆ ಎಂಬ ವಿಷಯವನ್ನು ಆತ ರೈಲಲ್ಲೇ ಇದ್ದ ರೈಲ್ವೇ ಪೊಲೀಸ್ ಪಡೆಗೆ ತಿಳಿಸಿದ.
ರೈಲು ಟ್ರ್ಯಾಕ್ ಮೇಲೆಯೇ ಎಸ್ಯುವಿ ಕಾರನ್ನು ನಿಲ್ಲಿಸಿದ್ದ ಚಾಲಕ ಮಹಾಶಯನಿಗಾಗಿ ರೈಲ್ವೇ ಅಧಿಕಾರಿಗಳು ಮತ್ತು ಸಿಬಂದಿಗಳು ತಾಸುಗಟ್ಟಲೆ ಹುಡುಕಾಡಿಯೂ ಪ್ರಯೋಜನವಾಗಲಿಲ್ಲ. ಇದರಿಂದ ಇತರ ರೈಲುಗಳ ಸಂಚಾರಕ್ಕೂ ಧಕ್ಕೆ ಉಂಟಾಯಿತು. ತಾಸುಗಟ್ಟಲೆ ವಿಳಂಬಕ್ಕೆ ಕಾರಣವಾಯಿತು. ಪ್ರಯಾಣಿಕರು ಆಕ್ರೋಶಿತರಾದರು.
ಕೊನೆಗೆ ರೈಲ್ವೇ ಅಧಿಕಾರಿಗಳು ಮತ್ತು ಸಿಬಂದಿಗಳು, ಈ ಪ್ರಹಸನವನ್ನು ಕುತೂಹಲದಿಂದ ಅವಲೋಕಿಸುತ್ತಾ ಜಮಾಯಿಸಿದ ಜನರ ನೆರವು ಪಡೆದು ಕಾರನ್ನು ಟ್ರ್ಯಾಕಿನಿಂದ ಸರಿಸಿ ತೆರವುಗೊಳಿಸಿದರು.
ರೈಲ್ವೇ ಪೊಲೀಸರೀಗ ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದರ ಮಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ