ಪೆಹಲ್ಗಾಂವ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಪುನರಾರಂಭ
Team Udayavani, Jul 6, 2018, 12:15 PM IST
ಶ್ರೀನಗರ : ಎರಡು ದಿನಗಳ ಬಳಿಕ ಅಮರನಾಥ ಯಾತ್ರೆ ಇಂದು ಪೆಹಲ್ಗಾಂವ್ ಮಾರ್ಗದ ಮೂಲಕ ಪುನರಾರಂಭಗೊಂಡಿದೆ.
ಇದೇ ವೇಳೆ ಭೂಕುಸಿತದ ಕಾರಣಕ್ಕೆ ಅಮಾನತುಗೊಂಡಿದ್ದ ಬಲ್ತಾಲ್ ಮಾರ್ಗದ ಮೂಲಕ ಸಾಗಿದ್ದ ಅಮರನಾಥ ಯಾತ್ರೆ ಇಂದು ನಿರಂತರ ಮೂರನೇ ದಿನ ಕೂಡ ಸ್ಥಗಿತಗೊಂಡೇ ಇದೆ.
ಈ ಎರಡೂ ಮಾರ್ಗಗಳ ಮೂಲಕ ಸಾಗಿದ್ದ ಅಮರನಾಥ ಯಾತ್ರೆಯನ್ನು ಕಳೆದ ಬುಧವಾರ ಅನೇಕ ಕಡೆಗಳಲ್ಲಿನ ಭೂಕುಸಿತ ಮತ್ತು ಬೆಟ್ಟಗಳಿಂದ ಬಂಡೆ ಕಲ್ಲುಗಳು ಜಾರಿ ಉರುಳಿಕೊಂಡು ರಸ್ತೆಗೆ ಬರುತ್ತಿದ್ದ ಕಾರಣ ಸ್ಥಗಿತಗೊಳಿಸಲಾಗಿತ್ತು.
ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿನ ಪೆಹಲ್ಗಾಂವ್ ಮಾರ್ಗದ ಮೂಲಕ ಅಮರನಾಥ ಯಾತ್ರೆ ಇಂದು ಬೆಳಗ್ಗೆ ಪುನರಾರಂಭಗೊಂಡಿತು ಎಂದು ಶ್ರೀ ಅಮರನಾಥ ದೇವಾಲಯ ಮಂಡಳಿ (ಎಸ್ಎಎಸ್ಬಿ) ವಕ್ತಾರ ಹೇಳಿದರು.
ಆದರೆ ಗುಂದರ್ಬಾಲ್ ಜಿಲ್ಲೆಯ ಬಲ್ತಾಲ್ ಮಾರ್ಗದ ಮೂಲಕ ಸಾಗುತ್ತಿದ್ದ ಅಮರನಾಥ ಯಾತ್ರೆ ಇಂದು ನಿರಂತರ ಮೂರನೇ ದಿನ ಕೂಡ ಸ್ಥಗಿತಗೊಂಡ ಸ್ಥಿತಿಯಲ್ಲೇ ಉಳಿದಿದೆ ಎಂದವರು ಹೇಳಿದರು.
ಬಲ್ತಾಲ್ ಮಾರ್ಗದಲ್ಲಿ ಬ್ರಾರಿಮಾರ್ಗ್ ಮತ್ತು ರಾಯಿಲ್ಪಾತ್ರಿ ನಡುವೆ ಸಂಭವಿಸಿದ ಭೂಕುಸಿತದಿಂದಾಗಿ ಕಳೆದ ಮಂಗಳವಾರ ಮೂವರು ಯಾತ್ರಿಕರು ಮೃತಪಟ್ಟು ಇತರ ನಾಲ್ವರು ಗಾಯಗೊಂಡರೆಂದು ವಕ್ತಾರ ತಿಳಿಸಿದರು.
ಪಶ್ಚಿಮ ಬಂಗಾಲದ ಸಂಜಯ್ ಸಾಂತ್ರಾ ಎಂಬವರು ಅಮರನಾಥ ದೇಗುಲಕ್ಕೆ ಸಮೀಪವೇ ಹೃತ್ಕ್ರಿಯೆ ನಿಂತು ನಿಧನಹೊಂದಿದರು ಎಂದು ಅಧಿಕಾರಿ ತಿಳಿಸಿದರು. ಈ ವರ್ಷ ಜೂನ್ 28ರಿಂದ ಅಮರನಾಥ ಯಾತ್ರೆ ಆರಂಭಗೊಂಡ ಬಳಿಕದಲ್ಲಿ ಈ ವರೆಗೆ ಆರು ಮಂದಿ ಹೃತ್ಕ್ರಿಯೆ ನಿಂತು ಮೃತಪಟ್ಟಿದ್ದಾರೆ; ಆ ಮೂಲಕ ಮೃತರ ಒಟ್ಟು ಸಂಖ್ಯೆ 12 ಆಗಿದೆ ಎಂದವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ