ಅಮಿತಾಭ್ಗೆ ನೋಟಿಸ್
Team Udayavani, Nov 3, 2018, 8:05 AM IST
ಹೊಸದಿಲ್ಲಿ: ಭಾರತದ ಮಸಾಲಾ ಪುಡಿ ತಯಾರಿಕಾ ಕಂಪನಿಯೊಂದರ ಜಾಹೀರಾತೊಂದರಲ್ಲಿ ವಕೀಲರ ದಿರಿಸಿನಲ್ಲಿ ಕಾಣಿಸಿಕೊಂಡಿರುವ ನಟ ಅಮಿತಾಭ್ ಬಚ್ಚನ್ ವಿರುದ್ಧ ದಿಲ್ಲಿಯ ಬಾರ್ ಕೌನ್ಸಿಲ್ ನೋಟಿಸ್ ಜಾರಿಗೊಳಿಸಿದೆ. ವಕೀಲರ ಪಾತ್ರವನ್ನು ರೂಪಿಸುವ ವಿಚಾರದಲ್ಲಿ ಜಾಹೀರಾತಿಗೆ ಸಂಬಂಧಪಟ್ಟವರು ಶಿಷ್ಟಾಚಾರ ಉಲ್ಲಂಘಿಸಿದ್ದಾರೆಂದು ಆರೋಪಿಸಿರುವ ಕೌನ್ಸಿಲ್, ತಕ್ಷಣದಿಂದಲೇ ಈ ಜಾಹೀರಾತಿನ ಪ್ರಸಾರ ನಿಲ್ಲಿಸಬೇಕು ಹಾಗೂ ಇನ್ನು ಮುಂದೆ ವಕೀಲರ ದಿರಿಸನ್ನು ಉಪಯೋಗಿಸುವುದಿಲ್ಲ ಎಂದು ದಿಲ್ಲಿ ಬಾರ್ ಕೌನ್ಸಿಲ್, ಭಾರತೀಯ ಬಾರ್ ಕೌನ್ಸಿಲ್ ಹಾಗೂ ಎಲ್ಲಾ ರಾಜ್ಯಗಳ ಬಾರ್ ಕೌನ್ಸಿಲ್ಗಳಿಗೆ 10 ದಿನಗಳೊಳಗೆ ಮುಚ್ಚಳಿಕೆ ಬರೆದುಕೊಡಬೇಕು ಎಂದು ಸೂಚಿಸಿದೆ. ಜಾಹೀರಾತು ಪ್ರಸಾರ ಮಾಡಿರುವ ಮಾಧ್ಯಮಗಳಿಗೂ, ಯುಟ್ಯೂಬ್ಗೂ ನೋಟಿಸ್ ಜಾರಿಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ