ಆಡಿನ ಮೇಲೆ ಹರಿದ ಶಾಲಾ ಬಸ್ಸಿಗೆ ಕಲ್ಲೆಸೆತ; 9 ವಿದ್ಯಾರ್ಥಿಗಳಿಗೆ ಗಾಯ
Team Udayavani, Mar 2, 2019, 2:02 PM IST
ಇಂದೋರ್ : ಶಾಲಾ ಬಸ್ಸೊಂದು ಆಡಿನ ಮೇಲೆ ಹರಿದು ಅದರ ಸಾವಿಗೆ ಕಾರಣವಾದುದಕ್ಕೆ ಸಿಟ್ಟಿಗೆದ್ದ ಗ್ರಾಮಸ್ಥರು ಬಸ್ಸಿಗೆ ಕಲ್ಲು ಹೊಡೆದ ಕಾರಣ ಒಂಬತ್ತು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂದೋರ್ ಜಿಲ್ಲೆಯ ಕಾಜಿ ಪಲಾಸಿಯಾ ಗ್ರಾಮದಲ್ಲಿ ನಡೆದಿದೆ.
ಶಾಲಾ ಬಸ್ಸಿನ ಬ್ರೇಕ್ ಫೇಲ್ ಆದ ಕಾರಣ ಅದರ ಚಾಲಕನಿಗೆ ನಿಯಂತ್ರಣ ತಪ್ಪಿತ್ತು. ಆದ ಕಾರಣ ಅದು ಆಡಿನ ಮೇಲೆ ಹರಿದಾಗ ಅದು ಅಪ್ಪಚ್ಚಿಯಾಯಿತು. ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಬಸ್ ಚಾಲಕನೊಡನೆ ಮಾತಿನ ಜಗಳಕ್ಕಿಳಿದು ಅದರ ಪರಾಕಾಷ್ಠೆಯಲ್ಲಿ ಬಸ್ಸಿಗೆ ಕಲ್ಲು ಹೊಡೆದರು.
ಇದರ ಪರಿಣಾಮವಾಗಿ ಗಾಯಗೊಂಡ 9 ಮಂದಿ ವಿದ್ಯಾರ್ಥಿಗಳನ್ನು ಒಡನೆಯೇ ಮಹಾರಾಜ ಯಶವಂತ ರಾವ್ ಆಸ್ಪತ್ರೆಗೆ ಒಯ್ದು ಅಲ್ಲಿ ಚಿಕಿತ್ಸೆ ನೀಡಲಾಗಿ ಬಳಿಕ ಬಿಡುಗಡೆಗೊಳಿಸಲಾಯಿತು ಎಂದು ಆಸ್ಪತ್ರೆ ಸುಪರಿಂಟೆಂಡೆಂಟ್ ಪಿ ಎಸ್ ಠಾಕೂರ್ ತಿಳಿಸಿದರು.
ಪೊಲೀಸರು 13 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ