Indian Navy ಈಗ ಅಂಜದೀಪ್ ಶಕ್ತಿ: ಚೆನ್ನೈಯ ಕಟ್ಟು ಪಲ್ಲಿಯಲ್ಲಿ ಲೋಕಾರ್ಪಣೆ
ಜಲಾಂತರ್ಗಾಮಿ ನಿರೋಧಕ ನೌಕೆಗೆ ಕಾರವಾರದ ದ್ವೀಪದ ಹೆಸರು
Team Udayavani, Jun 15, 2023, 7:05 AM IST
ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈಯ ಕಟ್ಟುಪಲ್ಲಿ ಬಂದರಿನಲ್ಲಿ ಬುಧವಾರ ಜಲಾಂತರ್ಗಾಮಿ ನಿರೋಧಕ ನೌಕೆ “ಅಂಜದೀಪ್’ ಲೋಕಾರ್ಪಣೆಗೊಂಡಿದ್ದು, ಇದಕ್ಕೆ ಕರ್ನಾಟಕದ ಕಾರವಾರದಲ್ಲಿರುವ “ಅಂಜದೀಪ್’ ದ್ವೀಪದ ಹೆಸರನ್ನು ಇಡಲಾಗಿದೆ. ವ್ಯೂಹಾತ್ಮಕವಾಗಿ ಈ ದ್ವೀಪವು ಮಹತ್ತರವಾಗಿದ್ದು, ಪ್ರಸ್ತುತ ಈ ದ್ವೀಪವು ಭಾರತೀಯ ನೌಕಾ ಸೇನೆಯ ಸುಪರ್ದಿಯಲ್ಲಿದೆ. ಈ ನೌಕೆಯನ್ನು ಕೋಲ್ಕತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ ಮತ್ತು ಎಂಜಿ ನಿಯರ್ (ಜಿಆರ್ಎಸ್ಇ) ನಿರ್ಮಿಸಿದೆ.
2019ರ ಎಪ್ರಿಲ್ನಲ್ಲಿ ಎಂಟು ನೌಕೆಗಳ ನಿರ್ಮಾಣಕ್ಕೆ ರಕ್ಷಣ ಸಚಿವಾಲಯ ಮತ್ತು ಗಾರ್ಡನ್ ರೀಚ್ ಶಿಪ್ಬಿಲ್ಡರ್ ಮತ್ತು ಎಂಜಿನಿಯರ್ ನಡುವೆ ಒಪ್ಪಂದವಾಗಿದೆ. ಈ ಪೈಕಿ “ಅಂಜದೀಪ್’ ಮೂರನೆಯದ್ದು.
ಜಲಾಂತರ್ಗಾಮಿ ನಿಗ್ರ ಹ ಕಾರ್ಯಾಚರಣೆಗೆ ಬಳಕೆ
ಪ್ರಸ್ತುತ ಇರುವ “ಅಭಯ್’ ವರ್ಗದ ಜಲಾಂತರ್ಗಾಮಿ ನಿರೋಧಕ ನೌಕೆಗಳ ಬದಲಿಯಾಗಿ ಜಿಆರ್ಎಸ್ಇ ನಿರ್ಮಿಸಿರುವ “ಅರ್ನಾಲ’ ವರ್ಗದ ನೌಕೆಗಳು ಕಾರ್ಯಾಚರಿಸಲಿವೆ. ಇದು ಕಡಲಿನಲ್ಲಿ ಜಲಾಂತರ್ಗಾಮಿ ನಿಗ್ರಹ ಕಾರ್ಯಾಚರಣೆ, ಕಡಿಮೆ ತೀವ್ರತೆಯ ಕಾರ್ಯಾಚರಣೆಗಳನ್ನು ನಡೆಸಲಿವೆ. ಜತೆಗೆ ಕಣ್ಗಾವಲಿಗೂ ಬಳಸಲಾಗುತ್ತದೆ. ಈ ನೌಕೆಗಳನ್ನು ಶೇ.80ರಷ್ಟು ದೇಶೀಯವಾಗಿ ನಿರ್ಮಿಸಲಾಗಿದೆ.
“ಅಂಜದೀಪ್’ ನೌಕೆಯ ಲೋಕಾರ್ಪಣೆ ಸಮಾರಂಭದಲ್ಲಿ ವೈಸ್ ಅಡ್ಮಿರಲ್, ಸ್ಟ್ರಾéಟಜಿಕ್ ಫೋರ್ಸಸ್ ಕಮಾಂಡ್ನ ಕಮಾಂಡರ್ ಇನ್ ಚೀಫ್ ಆರ್.ಬಿ.ಪಂಡಿತ್ ಉಪಸ್ಥಿತರಿದ್ದರು.
ಐತಿಹಾಸಿಕ ಮಹತ್ವದ “ಅಂಜದೀಪ್’
“ಅಂಜದೀಪ್’ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರ್ಗಾ ಗ್ರಾಮದ ಸಮೀಪ ಅರಬಿ ಸಮುದ್ರದಲ್ಲಿರುವ ಒಂದು ದ್ವೀಪ. 15ನೇ ಶತಮಾನದ ಅಂತ್ಯದಲ್ಲಿ ಇಲ್ಲಿಗೆ ಪೋರ್ಚುಗೀಸ್ ಅನ್ವೇಷಕ ವಾಸ್ಕೋಡಗಾಮ ಕಾಲಿಟ್ಟು, ಕೆಲವು ದಿನ ನೆಲೆಸಿ ಬಳಿಕ ಗೋವಾಕ್ಕೆ ತೆರಳಿದ್ದ. ಇದು ಬಳಿಕ ಪೋರ್ಚುಗೀಸರ ನೆಲೆಯಾಗಿತ್ತು. ಭಾರತೀಯ ನೌಕಾಪಡೆಯು ಪೋರ್ಚುಗೀಸರ ವಿರುದ್ಧ ಯುದ್ಧ ಮಾಡಿ ಈ “ಅಂಜದೀಪ್’ ದ್ವೀಪವನ್ನು ವಶಕ್ಕೆ ತೆಗೆದುಕೊಂಡಿತು. ಈ ವೇಳೆ ನೌಕಾ ಸೇನೆಯ 8 ಯೋಧರು ಹುತಾತ್ಮರಾಗಿದ್ದರು. ಹುತಾತ್ಮರ ಹೆಸರಿರುವ ಶಿಲೆಯನ್ನು ಈ ದ್ವೀಪದಲ್ಲಿ ಸ್ಥಾಪಿಸಲಾಗಿದೆ.
ನೌಕಾ ಸೇನೆಯ ನೆಲೆಯಾಗುವ ಮುನ್ನ ಮೀನುಗಾರರು “ಅಂಜದೀಪ್’ ಸುತ್ತಮುತ್ತ ಮೀನುಗಾರಿಕೆ ನಡೆಸಿ, ಈ ದ್ವೀಪದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇಲ್ಲಿ ಚರ್ಚ್ ಕೂಡ ಇದ್ದು, ವರ್ಷಕ್ಕೊಮ್ಮೆ ಪೆಸ್ತ(ಕ್ರಿಸ್ತನ ಪ್ರಾರ್ಥನೆ)ಯೂ ನಡೆಯುತ್ತಿತ್ತು. 1998-99ರ ಅವಧಿಯಲ್ಲಿ ಈ ದ್ವೀಪದಲ್ಲಿ ಕೊನೆಯ ಪೆಸ್ತ ಜಾತ್ರೆ ನಡೆಯಿತು. ಅಲ್ಲದೆ ಇದೊಂದು ಪ್ರವಾಸಿ ತಾಣವೂ ಆಗಿತ್ತು. ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವುದರಿಂದ ಬಳಿಕ ಈ ದ್ವೀಪವನ್ನು ಭಾರತೀಯ ನೌಕಾ ಸೇನೆ ತನ್ನ ವಶಕ್ಕೆ ಪಡೆಯಿತು. ಇದು ಈಗ ನಿರ್ಬಂಧಿತ ಪ್ರದೇಶವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್