National Award ಕೈತಪ್ಪಿದ ರಾಷ್ಟ್ರಪ್ರಶಸ್ತಿ, ನಟ ಅನುಪಮ್ ಖೇರ್ ಬೇಸರ
Team Udayavani, Aug 25, 2023, 10:11 PM IST
ನವದೆಹಲಿ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ “ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಪ್ರತಿಷ್ಠಿತ ನರ್ಗೀಸ್ ದತ್ ಪ್ರಶಸ್ತಿಗೆ ಭಾಜನವಾದ ಹಿನ್ನೆಲೆಯಲ್ಲಿ ಸಿನಿಮಾದ ಪ್ರಮುಖ ಪಾತ್ರಧಾರಿಯಾಗಿರುವ ಹಿರಿಯ ನಟ ಅನುಪಮ್ ಖೇರ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ತಮಗೆ ರಾಷ್ಟ್ರಪ್ರಶಸ್ತಿ ಕೈತಪ್ಪಿರುವುದರ ಬಗ್ಗೆಯೂ ಖೇರ್ ಬೇಸರ ವ್ಯಕ್ತ ಪಡಿಸಿದ್ದಾರೆ. ಪ್ರಶಸ್ತಿ ಕುರಿತು ಟ್ವೀಟ್ ಮಾಡಿದ ಖೇರ್, ದಿ ಕಾಶ್ಮೀರಿ ಫೈಲ್ಸ್ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಅದರಲ್ಲೂ ರಾಷ್ಟ್ರೀಯ ಏಕೀಕರಣದ ಚಿತ್ರದ ಸಾಲಿನಲ್ಲಿ ಗುರುತಿಸಿಕೊಂಡಿದ್ದರ ಬಗ್ಗೆ ಹೆಮ್ಮೆ ಇದೆ. ನಟನಾಗಿ ಮಾತ್ರವಲ್ಲದೇ, ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿ ಈ ವಿಚಾರ ಬಹಳ ಸಂತಸ ತಂದಿದೆ. ಅದೇ ರೀತಿ ನನ್ನ ನಟೆನೆಗೂ ರಾಷ್ಟ್ರಪ್ರಶಸ್ತಿ ಬರಬಹುದೆಂದು ಭಾವಿಸಿದ್ದೆ! ಆದರೆ, ಅಂದುಕೊಂಡಿದ್ದೆಲ್ಲವೂ ಕೈಗೂಡಿಬಿಟ್ಟರೇ ಮುಂದೆ ಕೆಲಸ ಮಾಡಲು ಉತ್ಸಾಹ ಎಲ್ಲಿಂದ ಬರಬೇಕು? ಇರಲಿ, ಮುಂದಿನ ಬಾರಿ ನೋಡೋಣ..ಪ್ರಶಸ್ತಿಯ ಪ್ರತಿ ವಿಜೇತರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ