Manipur ಬರಲು ಮೋದಿಗೆ ಮನವಿ: ಕುಸ್ತಿಪಟು ವೇದಿಕೆಯಲ್ಲೇ ಕಣ್ಣೀರು
Team Udayavani, Mar 12, 2024, 1:00 AM IST
ಹೊಸದಿಲ್ಲಿ: ಮಣಿಪುರ ಹಿಂಸಾಚಾರ ಕುರಿತಂತೆ ಹಾಗೂ ಅಲ್ಲಿನ ಸಂತ್ರಸ್ತರ ನಿವಾಸಕ್ಕೆ ಒಮ್ಮೆಯಾದರೂ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಣಿಪುರ ಮೂಲದ ಮಿಕ್ಸಡ್ ಮಾರ್ಷಲ್ ಆರ್ಟ್ಸ್ನ ಕುಸ್ತಿಪಟು ಒಬ್ಬರು ಪಂದ್ಯದ ವೇದಿಕೆಯಲ್ಲೇ ಮನವಿ ಮಾಡಿರುವುದು ವರದಿಯಾಗಿದೆ.
ಮ್ಯಾಟ್ರಿಕ್ಸ್ ಫಿಕ್ಸ್ ನೈಟ್ ಸಂಸ್ಥೆಯಿಂದ ನಡೆಸಲಾಗುವ ಮಾರ್ಷಲ್ ಆರ್ಟ್ಸ್ ಪಂದ್ಯದಲ್ಲಿ ಚಾಂಪಿಯನ್ ಶಿಪ್ ಬೆಲ್ಟ್ ಅನ್ನು ಎದೆಗಿರಿಸಿಕೊಂಡಿದ್ದ ಕುಸ್ತಿಪಟು ಚುಂಗ್ರೆಂಗ್ ಕೊರೇನ್ ಮಾಧ್ಯಮಗಳ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ. ” ಮಣಿಪು ರದಲ್ಲಿ ಹಿಂಸಾಚಾರವಾಗಿ ವರ್ಷವಾಗುತ್ತಾ ಬಂದಿದೆ. ಜನರು ದಿನವೂ ಸಾಯುತ್ತಿದ್ದಾರೆ. ಹಲವರು ನಿರಾಶ್ರಿತ ಶಿಬಿರಗಳಲ್ಲಿದ್ದಾರೆ. ಮಕ್ಕಳಿಗೆ ಓದಲಾಗು ತ್ತಿಲ್ಲ.ನಮಗೆ ಭವಿಷ್ಯದ ಚಿಂತೆ ಕಾಡುತ್ತಿದೆ. ಮೋದಿ ಜೀ ನಿಮ್ಮಲ್ಲಿ ಇದು ನನ್ನ ಕಳಕಳಿಯ ವಿನಂತಿ ಒಮ್ಮೆ ಮಣಿಪುರಕ್ಕೆ ಭೇಟಿ ನೀಡಿ, ರಾಜ್ಯದಲ್ಲಿ ಶಾಂತಿ ಸ್ಥಾಪಿಸಿ’ ಎಂದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?