Manipur ಅಪಹರಣಕ್ಕೀಡಾದ ಸೇನಾಧಿಕಾರಿಯನ್ನು ರಕ್ಷಿಸಿದ ಸೇನೆ
Team Udayavani, Mar 9, 2024, 12:59 AM IST
ಇಂಫಾಲ: ಗಲಭೆಗ್ರಸ್ತ ಮಣಿಪುರದಲ್ಲಿ ಅಪಹಣಕ್ಕೀಡಾಗಿದ್ದ ಸೇನಾಧಿಕಾರಿಯನ್ನು ಶುಕ್ರವಾರ ಸಂಜೆ ಹೊತ್ತಿಗೆ ರಕ್ಷಿಸಲಾಗಿದೆ. 2023ರ ಮೇಯಲ್ಲಿ ಜನಾಂಗೀಯ ಗಲಭೆ ಶುರುವಾದ ಬಳಿಕ ಮಣಿಪುರದಲ್ಲಿ ಸೇನಾಧಿಕಾರಿಗಳ ಅಪಹರಣದ ನಾಲ್ಕನೇ ಘಟನೆ ಇದಾಗಿದೆ. ಜ್ಯೂನಿಯರ್ ಕಮಿಷನ್x ಅಧಿಕಾರಿ ಕೊನ್ಸಾಮ್ ಖೇಡಾ ಸಿಂಗ್ ವಾಸವಾಗಿದ್ದ ಮನೆಗೆ ನುಗ್ಗಿ ಈ ಕೃತ್ಯ ಎಸಗಲಾಗಿದೆ. ಈ ಹಿನ್ನೆಲೆಯಲ್ಲಿ ಮಣಿಪುರ ಪೊಲೀಸರು ಮತ್ತು ಸೇನಾ ಸಿಬಂದಿ ತೀವ್ರ ಕಾರ್ಯಾಚರಣೆ ಕೈಗೊಂಡು, ಅಧಿಕಾರಿಯನ್ನು ರಕ್ಷಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 102ರಲ್ಲಿ ಸಂಚರಿಸುವ ವಾಹನಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದಾರೆ.