ಸಿಎಂ ಯೋಗಿ ಮೊದಲು ಯುಪಿ ಬಗ್ಗೆ ಕಾಳಜಿ ವಹಿಸಲಿ: ಮಮತಾ ಆಕ್ರೋಶ
Team Udayavani, Feb 5, 2019, 10:09 AM IST
ಕೋಲ್ಕತ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಂದು ಮಂಗಳವಾರ ಪಶ್ಚಿಮ ಬಂಗಾಲದ ಪುರೂಲಿಯಾ ದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು ಇದಕ್ಕೆ ಮುನ್ನವೇ ಅವರ ಮೇಲೆ ಮುಗಿಬಿದ್ದಿರುವ ಸಿಎಂ ಮಮತಾ ಬ್ಯಾನರ್ಜಿ, “ಇತರ ರಾಜ್ಯಗಳ ಬಗ್ಗೆ ಕಮೆಂಟ್ ಮಾಡುವ ಮೊದಲು ನೀವು (ಯೋಗಿ ಆದಿತ್ಯನಾಥ್) ನಿಮ್ಮ ರಾಜ್ಯವನ್ನು ನೋಡಿಕೊಳ್ಳಿ’ ಎಂದು ಕಟಕಿಯಾಡಿದ್ದಾರೆ.
ಯುಪಿ ಸಿಎಂ ಯೋಗಿ ಅವರ ಹೆಲಿಕಾಪ್ಟರ್ ರಾಜ್ಯದಲ್ಲಿ ಇಳಿಯುವುದಕ್ಕೆ ಈ ಮೊದಲು ಅನುಮತಿ ನಿರಾಕರಿಸಲಾದುದರ ಬಗ್ಗೆ ಮಮತಾ ಬ್ಯಾನರ್ಜಿ ಅವರನ್ನು ಪತ್ರಕರ್ತರು ಪ್ರಶ್ನಿಸಿದಾಗ, “ಯೋಗಿ ಆದಿತ್ಯನಾಥ್ ಅವರಿಗೆ ಮೊದಲು ಅವರ ಉತ್ತರ ಪ್ರದೇಶವನ್ನು ನೋಡಿಕೊಳ್ಳುವಂತೆ ಕೇಳಿ’ ಎಂದು ಗುಡುಗಿದರು.
‘ಉತ್ತರ ಪ್ರದೇಶದಲ್ಲಿ ಲೆಕ್ಕವಿಲ್ಲದಷ್ಟು ಅಮಾಯಕ ಜನರನ್ನು ಕೊಲ್ಲಲಾಗಿದೆ; ಕರ್ತವ್ಯ ನಿರತ ದಕ್ಷ ಪೊಲೀಸರನ್ನು ಕೂಡ ಹತ್ಯೆ ಮಾಡಲಾಗಿದೆ; ಹಲವರನ್ನು ಚಚ್ಚಿ ಸಾಯಿಸಲಾಗಿದೆ. ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ವತಃ ಇವತ್ತು ಚುನಾವಣೆಗೆ ನಿಂತರೆ ಸೋಲುವುದು ಖಚಿತ; ಆತನಿಗೆ ಯುಪಿ ಯಲ್ಲಿ ನಿಲ್ಲಲು ಒಂದು ಜಾಗವೂ ಇಲ್ಲ; ಅದಕ್ಕಾಗಿ ಆತ ಪಶ್ಚಿಮ ಬಂಗಾಲದಲಿ ಅಲೆಯುತ್ತಿದ್ದಾರೆ’ ಎಂದು ಮಮತಾ ಬ್ಯಾನರ್ಜಿ, ಯೋಗಿ ಆದಿತ್ಯನಾಥ್ ವಿರುದ್ಧ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
MUST WATCH
ಹೊಸ ಸೇರ್ಪಡೆ
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ