ಹೈಟೆಕ್ ಪ್ರವಾಸೋದ್ಯಮ ತಾಣವಾಗಲಿದೆ ಅಯೋಧ್ಯೆ: ಕೇಂದ್ರದ ಯೋಜನೆ
Team Udayavani, May 29, 2017, 4:44 PM IST
ಲಕ್ನೋ : ಶ್ರೀರಾಮ ಜನ್ಮಭೂಮಿ ಎಂದೇ ತಿಳಿಯಲ್ಪಟ್ಟಿರುವ, ಪೌರಾಣಿಕ ಮಹತ್ವದ ಅಯೋಧ್ಯೆಯು ಈಗಿನ್ನು ಪ್ರವಾಸಿಗರ ಅತ್ಯಾಕರ್ಷಕ ತಾಣವಾಗಿ ಹೈಟೆಕ್ ಅಭಿವೃದ್ದಿಯನ್ನು ಕಾಣಲಿದೆ. ಅಂತೆಯೇ ಅಯೋಧ್ಯೆಯಲ್ಲಿನ್ನು ವೈಭವೋಪೇತ ಹೊಟೇಲುಗಳು, ಹೈಟೆಕ್ ರೈಲ್ವೆ ನಿಲ್ದಾಣ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಕ್ಯಾಂಪಸ್ ಮೈದಳೆಯಲಿವೆ.
ಅಯೋಧ್ಯೆಯನ್ನು ಈ ರೀತಿ ಅತ್ಯಾಧುನಿಕ ಹೈಟೆಕ್ ನಗರಿಯನ್ನಾಗಿ ರೂಪಿಸುವ ಯೋಜನೆಯನ್ನು ಕೇಂದ್ರ ಸರಕಾರ ರೂಪಿಸಿದೆ. ಅಂತೆಯೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಹಲವು ರೀತಿಯಲ್ಲಿ ನೆರವಾಗಲಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಹೈಟೆಕ್ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಹಲವಾರು ತಾಣಗಳನ್ನು ಆಯ್ಕೆ ಮಾಡಿದ್ದು ಅವುಗಳಲ್ಲಿ ಅಯೋಧ್ಯೆ ಕೂಡ ಒಂದಾಗಿದೆ.
ಅಯೋಧ್ಯೆಯಲ್ಲಿ 225 ಕೋಟಿ ರೂ. ವೆಚ್ಚದಲ್ಲಿ ಮೈದಳೆಯಲಿರುವ ರಾಮಾಯಣ ಮ್ಯೂಸಿಯಂ ಗೆ ಆವಶ್ಯವಿರುವ ಭೂಮಿಯನ್ನು ಆದಿತ್ಯನಾಥ್ ಸರಕಾರ ಮಂಜೂರು ಮಾಡಿದೆ.
ಅಯೋಧ್ಯೆಯ ಜತೆಗೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರಕಾರ ಆಯ್ಕೆ ಮಾಡಿರುವ ಇತರ ಪ್ರಸಿದ್ಧ ತಾಣಗಳೆಂದರೆ ಗಯಾ, ಮಥುರಾ, ವಾರಾಣಸಿ, ಸಾರನಾಥ್, ಗೋರಖ್ಪುರ, ಆಗ್ರಾ, ಅಮೃತಸರ, ಕನ್ಯಾಕುಮಾರಿ ಮತ್ತು ಗುವಾಹಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand 32 ಕೋಟಿ ಪತ್ತೆ ಪ್ರಕರಣ: ಇಬ್ಬರ ಸೆರೆ
Loksabha; 3ನೇ ಹಂತದಲ್ಲಿ ಶೇ.61.66ರಷ್ಟು ಮತದಾನ; ಶಾ ಕ್ಷೇತ್ರದಲ್ಲಿ ಮೋದಿ ವೋಟಿಂಗ್
Loksabha election; ಆಯೋಗದ ಮತದಾನ ಮಾಹಿತಿಯಲ್ಲಿ ಲೋಪವಿದೆ, ಧ್ವನಿಯೆತ್ತಿ: ಖರ್ಗೆ ಪತ್ರ
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ