ಅಮೃತಸರ ರೈಲು ದುರಂತ ಮರೆತ ಜನ: ಹಳಿಯಲ್ಲೇ ನಿಂತು ಛಾತ್ ಪೂಜೆ
Team Udayavani, Nov 16, 2018, 11:46 AM IST
ಹೊಸದಿಲ್ಲಿ : ಕಳೆದ ತಿಂಗಳಲ್ಲಿ ಪಂಜಾಬಿನ ಅಮೃತಸರ ಸಮೀಪ ರೈಲು ಹಳಿಯಲ್ಲೇ ನಿಂತು ರಾವಣ ದಹನ ನೋಡುತ್ತಿದ್ದವರ ಪೈಕಿ ಕನಿಷ್ಠ 61 ಮಂದಿ ರೈಲಿನಡಿ ಬಿದ್ದು ಮೃತಪಟ್ಟ ಘಟನೆಯನ್ನು ಪೂರ್ತಿಯಾಗಿ ಮರತಂತಿರುವ ಜನರು, ಭಟಿಂಡಾ ಸಮೀಪ ರೈಲು ಹಳಿಯಲ್ಲೇ ಛಾತ್ ಪೂಜಾ ಆಚರಿಸಿದ್ದಾರೆ. ಕೇವಲ ತಿಂಗಳ ಹಿಂದಷ್ಟೇ ನಡೆದಿದ್ದ ಆ ದಾರುಣ ಘಟನೆಯನ್ನು ಇಷ್ಟು ಬೇಗನೆ ಜನರು ಮರೆತಿರುವುದು ಅಚ್ಚರಿಗೆ ಕಾರಣವಾಗಿದೆ.
ಈ ವಾರದ ಆರಂಭದಲ್ಲಿ ಭಟಿಂಡಾ ಸಮೀಪ ಸ್ಥಳೀಯರು ಛಾತ್ ಪೂಜಾ ಆಚರಿಸಲು ಅತ್ಯಂತ ದಟ್ಟನೆಯ ರೈಲು ಹಳಿಯನ್ನು ಕ್ರಾಸ್ ಮಾಡಿ ಛಾತ್ ಪೂಜೆಯಲ್ಲಿ ಪಾಲ್ಗೊಳ್ಳಲು ನುಗ್ಗಿರುವುದು ಕಂಡು ಬಂದಿದೆ. ಸ್ಥಳೀಯಾಡಳಿತೆಯವರು ಜನರಿಗೆ ರೈಲು ಹಳಿಯ ಮೇಲೆ ನಿಲ್ಲದಂತೆ ಎಷ್ಟೇ ಮನವಿ ಮಾಡಿಕೊಂಡರೂ ಅವರದನ್ನು ಒಂದಿಷ್ಟೂ ಲೆಕ್ಕಿಸಲಿಲ್ಲ.
ಛಾತ್ ಪೂಜೆಗಾಗಿ ನಿರ್ದಿಷ್ಟ ಲೆವೆಲ್ ಕ್ರಾಸಿಂಗ್ ಗಳನ್ನು ಮಾತ್ರವೇ ಬಳಸಬೇಕು ಎಂಬ ಸ್ಥಳೀಯಾಡಳಿತೆಯ ಸೂಚನೆಗಳನ್ನು ಜನರು ಸಂಪೂರ್ಣವಾಗಿ ನಿರ್ಲಕ್ಷಿಸಿದರು.
ಸಣ್ಣ ಸಣ್ಣ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡ ಮಹಿಳೆಯರು ಕೂಡ ಅಧಿಕಾರಿಗಳ ಎಚ್ಚರಿಕೆಗೆ ಕವಡೆ ಕಿಮ್ಮತ್ತು ಕೂಡ ನೀಡದೆ ರೈಲು ಹಳಿಯ ಮೇಲೆ ನಿಂತೇ ಛಾತ್ ಪೂಜೆಯಲ್ಲಿ ಭಾಗಿಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ