Greater Noida: ಕಾಣೆಯಾಗಿದ್ದ 2 ವರ್ಷದ ಹೆಣ್ಣು ಮಗುವಿನ ಮೃತದೇಹ ನೆರೆಮನೆಯಲ್ಲೆ ಪತ್ತೆ!
Team Udayavani, Apr 10, 2023, 5:54 PM IST
ನೋಯ್ಡಾ: ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಎರಡು ವರ್ಷದ ಬಾಲಕಿಯ ಮೃತ ದೇಹ ಪಕ್ಕದ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಸೂರಜ್ಪುರ ಪ್ರದೇಶದ ದೇವ್ಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಗುವಿನ ಮೃತದೇಹ ಪತ್ತೆಯಾಗುತ್ತಿದ್ದಂತೆ ಪಕ್ಕದ ಮನೆಯವರು ಕೂಡಾ ನಾಪತ್ತೆಯಾಗಿದ್ದಾರೆ.
ಏನಿದು ಪ್ರಕರಣ: ದೇವ್ಲಾ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಶಿವಕುಮಾರ್ ಹಾಗೂ ಮಂಜು ದಂಪತಿಗೆ ಇಬ್ಬರು ಮಕ್ಕಳಿದ್ದು ಅದರಲ್ಲಿ ಎರಡು ವರ್ಷದ ಮಾನ್ಸಿ(೨) ಮೃತಪಟ್ಟ ಹೆಣ್ಣು ಮಗು.
ಎಪ್ರಿಲ್ 7 ರಂದು ಮಗುವಿನ ತಂದೆ ಶಿವಕುಮಾರ್ ಕೆಲಸಕ್ಕೆ ಹೋಗಿದ್ದು ತಾಯಿ ಮಾರುಕಟ್ಟೆಗೆ ಹೋಗಿ ಬರುವಷ್ಟರಲ್ಲಿ ಮಾನ್ಸಿ ಮನೆಯಲ್ಲಿ ಇರಲಿಲ್ಲ ಅಲ್ಲೇ ಅಕ್ಕ ಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ಯಾರಿಗೂ ಮಗುವಿನ ಮಾಹಿತಿ ಸಿಗಲಿಲ್ಲ ಅಲ್ಲದೆ ವಿಚಾರ ಗೊತ್ತಾಗುತ್ತಿದ್ದಂತೆ ನೆರೆಹೊರೆಯವರು ಸೇರಿ ಮಗುವಿನ ಹುಡುಕಾಟ ನಡೆಸಿದ್ದಾರೆ ಆದರೆ ಎಲ್ಲೂ ಮಗುವಿನ ಪತ್ತೆಯಾಗಲಿಲ್ಲ.
ಬಳಿಕ ಮಗುವಿನ ತಂದೆ ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿನ ಪತ್ತೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಆದರೆ ಭಾನುವಾರ ನೆರೆಮನೆಯ ಬಳಿ ದುರ್ವಾಸನೆ ಬರಲು ಆರಂಭವಾಗಿದೆ ಆದರೆ ಮನೆಯಲ್ಲಿ ಯಾರೂ ಇರಲಿಲ್ಲ ಗಾಬರಿಗೊಂಡ ಶಿವಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ದುರ್ವಾಸನೆ ಬರುತ್ತಿದ್ದ ಜಾಡು ಹಿಡಿದು ಹುಡುಕಾಡಿದಾಗ ನೆರೆಮನೆಯ ಬಾಗಿಲಿನ ಬಳಿ ನೇತು ಹಾಕಿದ ಬ್ಯಾಗ್ ನೊಳಗೆ ಮಗುವಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಷ್ಟುಮಾತ್ರವಲ್ಲದೆ ಮಗು ನಾಪತ್ತೆಯಾದ ದಿನದಿಂದ ನೆರೆಮನೆಯವರು ಕೂಡಾ ನಾಪತ್ತೆಯಾಗಿದ್ದು, ಈ ಕೃತ್ಯದ ಹಿಂದೆ ನೆರೆಮನೆಯವರೇ ಇದ್ದಿರಬಹುದು ಎಂದು ಹೆತ್ತವರು ಆರೋಪಿಸಿದ್ದಾರೆ. ಸದ್ಯ ಮಗುವನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಪೊಲೀಸರು ನೆರೆಮನೆಯವರ ಪತ್ತೆಗೆ ಜಾಲ ಬಿಸಿದ್ದು, ಯಾವ ಕಾರಣಕ್ಕೆ ಮುಗ್ದ ಮಗುವಿನ ಮೇಲೆ ಕೃತ್ಯ ನಡೆದಿರಬಹುದು ಎಂದು ತನಿಖೆ ಬಳಿಕವೇ ಗೊತ್ತಾಗಬೇಕಿದೆ.
ಇದನ್ನೂ ಓದಿ: Air India ಕ್ಯಾಬಿನ್ ಸಿಬಂದಿಯೊಂದಿಗೆ ಅಶಿಸ್ತು; ಕೆಳಗಿಳಿಸಿ ಪ್ರಯಾಣಿಕನ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ