ಗ್ರೇಟರ್ ನೋಯ್ಡಾ: ಬಾಕ್ಸರ್ ಶವ ಪತ್ತೆ; ಗುಂಡೆಸೆದು ಕೊಲೆ
Team Udayavani, Jan 13, 2018, 3:15 PM IST
ಗ್ರೇಟರ್ ನೋಯ್ಡಾ : ದಿಲ್ಲಿಯ ಮಾಜಿ ಬಾಕ್ಸರ್ 27ರ ಹರೆಯದ ಜಿತೇಂದ್ರ ಮಾನ್ ಅವರು ತಮ್ಮ ಇಲ್ಲಿನ ಅಪಾರ್ಟ್ಮೆಂಟ್ನಲ್ಲಿ ಗುಂಡೇಟಿನಿಂದ ಸತ್ತು ಬದ್ದಿರುವುದು ಪತ್ತೆಯಾಗಿದೆ.
ಮಾನ್ ಅವರು ಇಲ್ಲಿನ ಆಲ್ಫಾ ಸೆಕ್ಟರ್ನಲ್ಲಿನ ಜಿಮ್ ಒಂದರಲ್ಲಿ ತರಬೇತುದಾರರಾಗಿದ್ದರು. ಇವರು ಈ ಹಿಂದೆ ಉಜ್ಬೆಕಿಸ್ಥಾನ್, ಫ್ರಾನ್ಸ್ ಮತ್ತು ರಶ್ಯಗಳಲ್ಲಿ ನಡೆದಿದ್ದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಹರಿಯಾಣದಲ್ಲಿ ಇವರು 2008ರಲ್ಲಿ ಬಾಕ್ಸರ್ ಆಗಿ ನೋಂದಾಯಿಸಿಕೊಂಡಿದ್ದರು. ಆದರೆ ಕೆಲ ವರ್ಷಗಳಿಂದೀಚೆಗೆ ಬಾಕ್ಸಿಂಗ್ನಿಂದ ನಿವೃತ್ತರಾಗಿ ಜಿಮ್ ಟ್ರೈನರ್ ಆಗಿ ದುಡಿಯುತ್ತಿದ್ದರು.
ಜನವರಿ 10ರಂದು ಜಿಮ್ಗೆ ಹೋಗಿದ್ದ ಮಾನ್ ಆ ಬಳಿಕ ನಾಪತ್ತೆಯಾಗಿದ್ದರು. ಅಂದಿನಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮಾನ್ ಜತೆಗೆ ಈ ಹಿಂದೆ ಅವರ ಫ್ಲ್ಯಾಟ್ನಲ್ಲಿ ವಾಸವಾಗಿದ್ದ ಪ್ರೀತಂ ಟೋಕಾಸ್ ಎಂಬಾಕೆಯ ಬಳಿ ಆತನ ಫ್ಲ್ಯಾಟಿನ ಕೀ ಇತ್ತು. ಮಾನ್ಗಾಗಿ ಹುಡುಕಾಡುತ್ತಾ ಆಕೆ ಕೊನೆಗೆ ಆತನ ಫ್ಲ್ಯಾಟ್ ಪ್ರವೇಶಿಸಿದಾಗ ಆತ ಅಲ್ಲಿ ಗುಂಡೇಟಿನಿಂದ ಸತ್ತು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಳು; ಒಡನೆಯೇ ವಿಷಯವನ್ನು ಪೊಲೀಸರಿಗೆ ತಿಳಿಸಿದಳು.
ಮಾನ್ನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತನನ್ನು ಗುಂಡಿಕ್ಕಿ ಸಾಯಿಸಿದ ಹಂತಕರು ಆತನ ಮೊಬೈಲ್ ಒಯ್ದಿದ್ದಾರೆ ಮಾತ್ರವಲ್ಲ ಆತನ ಫ್ಲ್ಯಾಟಿನ ಕೀಯನ್ನು ಕೂಡ ಒಯ್ದು, ಹೋಗುವಾಗ ಹೊರಗಿನಿಂದ ಲಾಕ್ ಮಾಡಿದ್ದಾರೆ ಎಂದು ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಸುಪರಿಂಟೆಂಡೆಂಟ್ ಸುನೀತಿ ಸಿಂಗ್ ತಿಳಿಸಿದ್ದಾರೆ. ಮಾನ್ ನ ತಂದೆ ಸತ್ಯ ಪ್ರಕಾಶ್ ಮತ್ತು ತಾಯಿ ರಾಜಬಾಲಾ ದಿಲ್ಲಿಯಲ್ಲಿ ವಾಸವಾಗಿದ್ದಾರೆ.
ಪೊಲೀಸರು ಸಿಸಿಟಿವಿ ಚಿತ್ರಿಕೆಗಳನ್ನು ಆಧರಿಸಿಕೊಂಡು ಹಂತಕನ ಶೋಧದಲ್ಲಿದ್ದಾರೆ. ತನಿಖೆ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ