![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
ದೇಶದ ಹಲವೆಡೆ ಎಟಿಎಂ ಖಾಲಿ; 3 ದಿನದಲ್ಲಿ ಸರಿಯಾಗುತ್ತದೆ: ಕೇಂದ್ರ
Team Udayavani, Apr 17, 2018, 12:24 PM IST
![ATM-No-cash-700.jpg](https://www.udayavani.com/wp-content/uploads/2018/04/17/ATM-No-cash-700-620x348.jpg)
ಹೊಸದಿಲ್ಲಿ : ನೋಟು ಅಮಾನ್ಯದ ಕರಾಳ ದಿನಗಳನ್ನು ನೆನಪಿಸುವ ರೀತಿಯಲ್ಲಿ ತೆಲಂಗಾಣ, ಹೈದರಾಬಾದ್, ವಾರಾಣಸಿ, ವಡೋದರ, ಭೋಪಾಲ್, ಪಟ್ನಾ, ದಿಲ್ಲಿಯ ಕೆಲವು ಪ್ರದೇಶಗಳು ಸೇರಿದಂತೆ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿನ ಎಟಿಎಂಗಳಲ್ಲಿ ಹಣ ಬರಿದಾಗಿದೆ; ನಗದು ಕೊರತೆ ತೀವ್ರವಾಗಿದೆ; ಸಾಮಾನ್ಯ ಆರ್ಥಿಕ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಗಳು ತಿಳಿಸಿದೆ.
ಇಂದು ಬೆಳಗ್ಗಿನಿಂದಲೇ ದೇಶದ ಅನೇಕ ರಾಜ್ಯಗಳು ಮತ್ತು ನಗರಗಳಲ್ಲಿ ಜನರು ಎಟಿಎಂ ಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂದಿದೆ. ಅನೇಕ ಎಟಿಎಂಗಳ ಮುಂದೆ “ನೋ ಕ್ಯಾಶ್’ ಎಂಬ ಫಲಕವನ್ನು ತೂಗು ಹಾಕಲಾಗಿರುವುದು ಕಂಡು ಬಂದಿದೆ. ಇನ್ನೂ ಅನೇಕ ಎಟಿಎಂಗಳು ತಾಂತ್ರಿಕ ಕಾರಣಗಳಿಂದಾಗಿ ಮುಚ್ಚಿವೆ.
ಜನರು ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನಗದಿಗಾಗಿ ಮುಗಿ ಬೀಳುವಾಗ ಅದನ್ನು ನಿಭಾಯಿಸುವ ಮೂಲ ಸೌಕರ್ಯ ಬ್ಯಾಂಕುಗಳಲ್ಲಿ ಇಲ್ಲ ಎಂದು ಅನೇಕ ಬ್ಯಾಂಕುಗಳ ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.
ಈ ನಡುವೆ ಕೇಂದ್ರ ಹಣಕಾಸು ಸಹಾಯಕ ಸಚಿವ ಎಸ್ ಪಿ ಶುಕ್ಲಾ ಅವರು “ಈಗ ಈ ಹೊತ್ತಿನಲ್ಲಿ ನಮ್ಮ ಬಳಿಕ 1,25,000 ಕೋಟಿ ನಗದು ಲಭ್ಯತೆ ಇದೆ. ಈಗ ವಿಷಯವೇನೆಂದರೆ ಕೆಲವು ರಾಜ್ಯಗಳಲ್ಲಿ ಅತ್ಯಧಿಕ ನಗದು ಇದೆ; ಕೆಲವು ರಾಜ್ಯಗಳಲ್ಲಿ ನಗದು ಕೊರತೆ ಇದೆ. ಆದುದರಿಂದ ಸರಕಾರ ರಾಜ್ಯ ವಾರ ಸಮಿತಿಯನ್ನು ರೂಪಿಸಿದೆ; ಆರ್ಬಿಐ ಕೂಡ ಸಮಿತಿಗಳನ್ನು ರಚಿಸಿದೆ. ಇವುಗಳ ಮೂಲಕ ನಗದು ಇಲ್ಲದ ರಾಜ್ಯಗಳಿಗೆ ನಗದು ಪೂರೈಸುವ ಕೆಲಸ ಆರಂಭಿಸಲಾಗಿದೆ; ಇನ್ನು ಮೂರು ದಿನಗಳ ಒಳಗೆ ದೇಶಾದ್ಯಂತ ನಗದು ಲಭ್ಯತೆ ಮಾಮೂಲಿ ಸ್ಥಿತಿಗೆ ಮರಳುತ್ತದೆ’ ಎಂದು ಹೇಳಿದರು.
ಟಾಪ್ ನ್ಯೂಸ್
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.