ಸಹಪಾಠಿಗಳ ರಾಗಿಂಗ್: ಬಿಎಎಂಎಸ್ ವಿದ್ಯಾರ್ಥಿ ಆತ್ಮಹತ್ಯೆ
Team Udayavani, Apr 17, 2018, 12:36 PM IST
ಮುಜಫರನಗರ : ತನ್ನ ಸಹಪಾಠಿಗಳಿಂದ ರಾಗಿಂಗ್ ಕಿರುಕುಳ ತಡೆಯಲಾಗದ 23ರ ಹರೆಯದ ಬಿಎಎಂಎಸ್ ವಿದ್ಯಾರ್ಥಿ ಸತ್ಯಂ ಕುಮಾರ್ ಬಿಜನೂರ್ ಜಿಲ್ಲೆಯಲ್ಲಿ ಧಾವಿಸಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
ತನ್ನ ಈ ಕೃತ್ಯದ ಹಿಂದಿನ ಕಾರಣವನ್ನು ಸತ್ಯಂ ಕುಮಾರ್ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದು ಅದು ಪೊಲೀಸರಿಗೆ ಸಿಕ್ಕಿದೆ.
ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.