ಏರ್ಸೆಲ್ ಭ್ರಷ್ಟಾಚಾರ ಕೇಸ್: ಕಾರ್ತಿಗೆ ಸಿಬಿಐ ಸಮನ್ಸ್
Team Udayavani, Sep 13, 2017, 7:14 PM IST
ಹೊಸದಿಲ್ಲಿ : ಏರ್ಸೆಲ್ ಮ್ಯಾಕ್ಸಿಸ್ ಭ್ರಷ್ಟಾಚಾರ ಹಗರಣದಲ್ಲಿ ಸಿಬಿಐ ಕಾರ್ತಿ ಚಿದಂಬರಂಗೆ ಇದೇ ಗುರುವಾರ ತನ್ನ ಮುಂದೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.
ಜಾರಿ ನಿರ್ದೇಶನನಾಲಯ ಈ ಮೊದಲು ಏರ್ಸೆಲ್ ಮ್ಯಾಕ್ಸಿಸ್ ವಹಿವಾಟಿನಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಜು.5ರಂದು ಕಾರ್ತಿ ಚಿದಂಬರಂ ಗೆ ಸಮನ್ಸ್ ನೀಡಿತ್ತು.
ಈ ವಾರದಲ್ಲಿ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ವೈಯಕ್ತಿಕ ಹಣಕಾಸು ದಾಖಲೆ ಪತ್ರಗಳನ್ನು ತನಗೆ ನೇರವಾಗಿ ಇಲ್ಲವೇ ತನ್ನ ಪ್ರತಿನಿಧಿಯ ಮೂಲಕ ಸಲ್ಲಿಸುವಂತೆ ಸಿಬಿಐ ಕಾರ್ತಿ ಚಿದಂಬರಂ ಗೆ ನೊಟೀಸ್ ಜಾರಿ ಮಾಡಿತ್ತು.
2015ರಿಂದ ತನಿಖೆಯಲ್ಲಿರುವ ಪ್ರಕರಣವೊಂದಕ್ಕೆ ಸಂಬಂಧಿಸಿ ಸಿಬಿಐ ಕಾರ್ತಿ ಚಿದಂಬರಂ ಗೆ ನೊಟೀಸ್ ಜಾರಿ ಮಾಡಿರುವುದು ಇದೇ ಮೊದಲ ಬಾರಿಯಾಗಿದೆ.