ಭಾರತ ಗಡಿ ಬಳಿ ಚೀನ ವಾಯು ಪಡೆ ಜಮಾವಣೆ: ಅಮೆರಿಕಕ್ಕೆ warning


Team Udayavani, Feb 5, 2018, 11:53 AM IST

Doklam-700.jpg

ಹೊಸದಿಲ್ಲಿ : ಭಾರತದ ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಂ ವಿವಾದ  “ಶಾಂತಿಯುತ’ವಾಗಿ ಬಗೆಹರಿದ ಕೆಲವು ತಿಂಗಳ ಬಳಿಕ ಇದೀಗ ಚೀನ ಪುನಃ ತನ್ನ ಮಿಲಿಟರಿ ಶಕ್ತಿಯನ್ನು  ಚೀನ-ಟಿಬೆಟ್‌ ಗಡಿಯಲ್ಲಿ ಪ್ರದರ್ಶಿಸುವುದಕ್ಕೆ ಸಜ್ಜಾಗಿದೆ.

ಈ ಬಾರಿ ಚೀನ ತನ್ನ ವಾಯು ಪಡೆಯ ಶಕ್ತಿಯನ್ನು ಜಗತ್ತಿಗೆ ಜಾಹೀರು ಪಡಿಸುವುದಕ್ಕೆ ಮುಂದಾಗಿದ್ದು ಇದು ಬಹುತೇಕ ಅಮೆರಿಕಕ್ಕೆ ಸೆಡ್ಡು ಹೊಡೆಯವ ಉದ್ದೇಶವನ್ನು ಹೊಂದಿರುವಂತಿದೆ ಎಂದು ಅಂದಾಜಿಸಲಾಗಿದೆ. ಹಾಗಿದ್ದರೂ ಭಾರತದ ಗಡಿ ನೆಮ್ಮದಿ ಚೀನದ ಈ ಕೃತ್ಯದಿಂದ ಈಗ ಪುನಃ ಕದಡುವಂತಾಗಿದೆ.

ಚೀನ-ಟಿಬೆಟ್‌ ಗಡಿಯಲ್ಲಿ ಬೀಜಿಂಗ್‌ ಮಾಮೂಲಿಗಿಂತ ಶೇ.20ರಷ್ಟು ಹೆಚ್ಚು, ಎಂದರೆ ಒಟ್ಟು 51 ಫೈಟರ್‌ ಜೆಟ್‌ಗಳನ್ನು ಸಜ್ಜು ಗೊಳಿಸಿದೆ. ಲ್ಹಾಸಾ ಗೊಂಗರ್‌ ಪ್ರದೇಶದಲ್ಲಿ ಎಂಟು ಫೈಟರ್‌ ಜೆಟ್‌ಗಳನ್ನು ಇರಿಸಲಾಗಿದೆ. 

ಇದಲ್ಲದೆ 22 ಎಂಐ-017 ಹೆಲಿಕಾಪ್ಟರ್‌ ಗಳನ್ನು ತಂದು ನಿಲ್ಲಿಸಿದೆ. ಇವುಗಳ ಜತೆಗೆ ಚೀನ ಏರ್‌ ಮಿಸೈಲ್‌ ವ್ಯವಸ್ಥೆಯನ್ನೂ ಅಣಿಗೊಳಿಸಿದೆ. 

ರಿಕಾಜೆ ಭಾಗದಲ್ಲಿ 17 ಯುದ್ಧ ವಿಮಾನಗಳು, 11 ಎಂಐ-17 ಮಾನವ ರಹಿತ ವಿಮಾನಗಳನ್ನು  ಇರಿಸಲಾಗಿದೆ. ಸಿಕ್ಕಿಂ ವಲಯಕ್ಕೆ ಸನಿಹದಲ್ಲೇ ಜೆಟ್ಸ್‌ಗಳನ್ನು ಕೂಡ ಚೀನ ಸಮರ ಸನ್ನದ್ದ  ಸ್ಥಿತಿಯಲ್ಲಿ ಇರಿಸಿದೆ. 

ಇಷ್ಟಕ್ಕೂ ಚೀನ – ಟಿಬೆಟ್‌ ಗಡಿ ಪ್ರದೇಶ ಸಮರ ವಿಮಾನ ಹಾರಾಟದ ವಲಯವಲ್ಲ; ಅಂತಾಷ್ಟ್ರೀಯವಾಗಿ ಅದು ನಿಷಿದ್ಧ ಎನ್ನಲಾಗಿದೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಯಲ್ಲಿ ಚೀನ ಅಮೆರಿಕಕ್ಕೆ ಹಿಂದಿನ ಶೀತಲ ಸಮರ ಕಾಲದ ಮನೋಭಾವದಿಂದ ಹೊರ ಬರುವಂತೆ ನಿಷಿದ್ಧ  ಬುದ್ಧಿವಾದ ಹೇಳಿದೆ. ತನ್ನ ವಾಯುಪಡೆ ಬಲವನ್ನು ಕೀಳಂದಾಜು ಮಾಡದಂತೆಯೂ ಅಮೆರಿಕಕ್ಕೆ ಅದು ತಾಕೀತು ಮಾಡಿದೆ. 

ಹಾಗಿದ್ದರೂ ಇದೇ ವೇಳೆ ಚೀನದ ರಕ್ಷಣಾ ಸಚಿವಾಲಯ ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಚೀನವು ಶಾಂತಿ ಮತ್ತು ಅಭಿವೃದ್ಧಿಯನ್ನು ಪೋಷಿಸುವಂತೆ ಅಮೆರಿಕಕ್ಕೆ ಕರೆ ನೀಡಿದೆ ! 

ಅಮೆರಿಕ ಈಚೆಗೆ ತನ್ನಲ್ಲಿನ ಅಣ್ವಸ್ತ್ರಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವುದೇ ಚೀನದ ಈ ಅತಿರೇಕದ ಪ್ರತಿಕ್ರಿಯೆಗೆ ಕಾರಣವೆಂದು ತಿಳಿಯಲಾಗಿದೆ. 

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.