ಒಡಿಶಾ : 4,000 ರೂ. ಲಂಚ ಪಡೆದ ಖಜಾನೆ ಗುಮಾಸ್ತ ಅರೆಸ್ಟ್
Team Udayavani, Aug 25, 2018, 3:36 PM IST
ಭುವನೇಶ್ವರ : ಒಡಿಶಾದ ಜರ್ಸುಗುಡ ಜಿಲ್ಲೆಯ ಖಜಾನೆ ಕಾರ್ಯಾಲಯದಲ್ಲಿ ವ್ಯಕ್ತಿಯೋರ್ವರಿಂದ 4,000 ರೂ. ಲಂಚ ಪಡೆಯುತ್ತಿದ್ದ ಹಿರಿಯ ಗುಮಾಸ್ತನನ್ನು ಜಾಗೃತ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ತನ್ನ ತಂದೆಯ ಗ್ರ್ಯಾಚುಯಿಟಿ ಬಾಕಿ ಪಾವತಿ ಪಡೆಯಲು ತನ್ನಿಂದ ಗುಮಾಸ್ತನು 4,000 ರೂ. ಲಂಚ ಕೇಳಿರುವುದಾಗಿ ದೂರುದಾರ ವ್ಯಕ್ತಿ ನೀಡಿದ್ದ ದೂರಿನ ಅನ್ವಯ ಜಾಗೃತ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗುಮಾಸ್ತನನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದರು.
ಲಂಚವಾಗಿ ಪಡೆದ 4,000 ರೂ. ಗಳನ್ನು ಗುಮಾಸ್ತನು ತನ್ನ ಡ್ರಾಯರ್ನಲ್ಲಿ ಇರಿಸಿದ್ದುದನ್ನು ಜಾಗೃತ ದಳದವರು ಪತ್ತೆ ಹಚ್ಚಿ ವಶಪಡಿಸಿಕೊಂಡರು; ಬಳಿಕ ಜರ್ಸಾಗುಡ ಪಟ್ಟಣದಲ್ಲಿನ ಆತನ ನಿವಾಸದ ಮೇಲೂ ದಾಳಿ ನಡೆಸಿದರು. ಪ್ರಕರಣವು ಈಗ ತನಿಖೆಯಲ್ಲಿದೆ.