ಲವ್,ತಿರುಗಾಟ &.. ಪ್ರಿಯಕರನನ್ನು ದೂರ ಮಾಡಲು ಈಕೆ ಮಾಡಿದ್ದು ಖತರ್ ನಾಕ್ ಪ್ಲ್ಯಾನ್!
ನಾವು ಮದುವೆಯಾದರೆ ಜಾತಕದ ಪ್ರಕಾರ ಗಂಡ ಸಾಯುತ್ತಾನೆ ಎಂದು ಹೇಳಿದ್ದಳು
Team Udayavani, Oct 31, 2022, 12:47 PM IST
ಪ್ರೇಯಸಿಯೊಬ್ಬಳು ತನ್ನ 23 ವರ್ಷದ ಪ್ರಿಯಕರನನ್ನು ದೂರ ಮಾಡುವ ಸಲುವಾಗಿ ಪ್ಲ್ಯಾನ್ ಮಾಡಿಕೊಂಡು ಆತನ ಜೀವವನ್ನೇ ಕೊನೆಗಾಣಿಸಿರುವ ದುರಂತ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಶರೋನ್ ರಾಜ್ (23) ಪ್ರೇಯಸಿಯ ಮೋಹಕ್ಕೆ ಒಳಗಾಗಿ ಸಾವಿಗೀಡಾದ ಯುವಕ. ಗ್ರೀಷ್ಮಾ ಪ್ರಿಯತಮೆ.
ಘಟನೆ ಹಿನ್ನೆಲೆ: ಶರೋನ್ ರಾಜ್ – ಗ್ರೀಷ್ಮಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಶರೋನ್ ರೇಡಿಯೋಲಜಿ ವಿದ್ಯಾರ್ಥಿ. ಅನೋನ್ಯವಾಗಿದ್ದ ಇಬ್ಬರಲ್ಲಿ ಸಣ್ಣಪುಟ್ಟ ವಿಚಾರಕ್ಕೆಇದೇ ವರ್ಷದ ಫೆಬ್ರವರಿಯಲ್ಲಿ ಮನಸ್ತಾಪ ಉಂಟಾಗಿತ್ತು. ಇದಾದ ಬಳಿಕ ಗ್ರೀಷ್ಮಾಳಿಗೆ ಮನೆಯಲ್ಲಿ ಬೇರೊಂದು ಸಂಬಂಧ ಹುಡುಕಿ ಮದುವೆ ನಿಗದಿ ಮಾಡಲಾಗಿತ್ತು. ಆದರೆ ಇದರ ಹೊರತಾಗಿಯೂ ಇಬ್ಬರು ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಹೀಗಿರುವಾಗಲೇ ಮತ್ತೆ ಮನಸ್ತಾಪ ಉಂಟಾಗಿದೆ. ಸಂಬಂಧವನ್ನು ಕೊನೆಗೊಳಿಸುವ ಸಲುವಾಗಿ ಗ್ರೀಷ್ಮಾ ಎರಡು ಮೂರು ಬಾರಿ ಶರೋನ್ ಗೆ ಹೇಳಿದ್ದರೂ ಆತ ಅದಕ್ಕೆ ಒಪ್ಪಿರಲಿಲ್ಲ.
ಅ.14 ರಂದು ಗ್ರೀಷ್ಮಾ ಪ್ಲ್ಯಾನ್ ಮಾಡಿಕೊಂಡು ಶರೋನ್ ರನ್ನು ಕೊಲ್ಲಲು ಮನೆಗೆ ಕರೆಯಿಸಿಕೊಂಡಿದ್ದಳು. ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕ ಔಷಧವನ್ನು ಹಾಕಿ ಅದನ್ನು ಶರೋನ್ ಗೆ ಕೊಟ್ಟಿದ್ದಾಳೆ. ಇದನ್ನು ಕುಡಿದ ಕೂಡಲೇ ವಾಂತಿ ಮಾಡಿಕೊಂಡ ಶರೋನ್ ಅಸ್ವಸ್ಥನಾಗಿ ಕೆಲ ಸಮಯದ ಬಳಿಕ ಅಲ್ಲಿಂದ ಹೊರಟಿದ್ದಾನೆ. ಅ.25 ರಂದು ಶರೋನ್ ಸಾವನ್ನಪ್ಪಿದ್ದಾನೆ ಎಂದು ಎಡಿಜಿಪಿ ಅಜಿತ್ ಕುಮಾರ್ ಹೇಳಿದ್ದಾರೆ.
ಅ.21 ರಂದು ಆಸ್ಪತ್ರೆಯಲ್ಲಿದ್ದ ಶರೋನ್ ರಲ್ಲಿ ಪೊಲೀಸರು ಕೇಳಿದಾಗ ಆತ ತನಗೆ ಯಾರ ಮೇಲೂ ಸಂಶಯವಿಲ್ಲವೆಂದು ಹೇಳಿದ್ದಾನೆ. ಕುಟುಂಬಸ್ಥರು ಶರೋನ್ ನಿಧನರಾದ ಬಳಿಕ ಇದನ್ನು ಪ್ಲ್ಯಾನ್ ಮಾಡಿಕೊಂಡು ಶರೋನ್ ಪ್ರಿಯತಮೆಯೇ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಪೊಲೀಸರು ಗ್ರೀಷ್ಮಾಳನ್ನು ಕರೆದು ಸತತ 8 ಗಂಟೆ ವಿಚಾರಣೆ ನಡೆಸಿದ ಬಳಿಕ ಸತ್ಯ ಬಾಯಿ ಬಿಟ್ಟಿದ್ದಾಳೆ. ತಾನು ಅವನಿಂದ ದೂರವಾಗಬೇಕು. ಅದನ್ನು ಆತನಿಗೆ ತುಂಬಾ ಬಾರಿ ಹೇಳಿದ್ದೆ ಆದರೂ ಆತ ಕೇಳಲಿಲ್ಲ ಅದರಿಂದ ಈ ಕೃತ್ಯ ಎಸಗಿದೆ ಎಂದು ಹೇಳಿದ್ದಾಳೆ.
ಇದಲ್ಲದೆ ಹಿಂದೆಯೂ ಶರೋನ್ ರನ್ನು ಮುಗಿಸಲು ಬೇರೆ -ಬೇರೆ ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಳು. ನಾವು ಮದುವೆಯಾದರೆ ಜಾತಕದ ಪ್ರಕಾರ ಗಂಡ ಸಾಯುತ್ತಾನೆ ಎಂದು ಶರೋನ್ ಬಳಿ ಗ್ರೀಷ್ಮಾ ಸುಳ್ಳು ಹೇಳಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಗ್ರೀಷ್ಮಾ ಪೊಲೀಸರ ಸುಪರ್ದಿಯಲ್ಲಿರುವಾಗ ವಾಶ್ ರೂಮ್ ಗೆಂದು ಹೋಗಲು ಅನುಮತಿ ಕೇಳುವ ವೇಳೆ ಅಲ್ಲಿ ಕ್ರಿಮಿನಾಶಕವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ಬಳಿಕ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ʼಮಾತೃಭೂಮಿʼ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್