ಕಮಾಂಡೋ ಪಡೆ ನಿಗಾದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ
Team Udayavani, Nov 29, 2018, 6:52 AM IST
ಪಂಪಾ: ಮಹಿಳೆಯರಿಗೆ ಅಯ್ಯಪ್ಪ ದೇಗುಲ ಪ್ರವೇಶ ವಿವಾದದ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಈಗ ಶಸ್ತ್ರಧಾರಿ ಕಮಾಂಡೋ ಪಡೆಗಳದ್ದೇ “ಹವಾ’. ಅಯ್ಯಪ್ಪ ದರ್ಶನಕ್ಕೆ ಬರುವ ಭಕ್ತರ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.ಹೀಗಾಗಿ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯೂ ತೀವ್ರ ಕಡಿಮೆಯಾಗಿದ್ದು, ಮಂಡಲಪೂಜೆ ವೇಳೆ ಲಕ್ಷಾಂತರ ಭಕ್ತರಿಂದ ತುಂಬಿ ತುಳುಕುತ್ತಿದ್ದ ಶಬರಿಮಲೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ “ಖಾಲಿ ಖಾಲಿ’ ಎನಿಸುತ್ತಿದೆ. ವಾರಕ್ಕೆ ಕನಿಷ್ಠ 5 ಲಕ್ಷ ಭಕ್ತರ ದರ್ಶನವಾಗುತ್ತಿದ್ದ ಶಬರಿಮಲೆಯಲ್ಲಿ ಈ ವಾರ ಆ ಸಂಖ್ಯೆ ಎರಡು ಲಕ್ಷಕ್ಕೆ ಇಳಿದಿದೆ.
ಮಹಿಳೆಯರ ಪ್ರವೇಶ ವಿವಾದದ ಅನಂತರ ರಾತ್ರಿ ದೇವಾಲಯ ಆವರಣದಲ್ಲಿ ಭಕ್ತರು ಉಳಿಯಲು ಬಿಡದೆ ಭದ್ರತಾ ಪಡೆ ಜತೆ ಮಾತಿನ ಚಕಮಕಿ ಉಂಟಾಗಿ ಲಾಠಿ ಚಾರ್ಜ್ ನಡೆದ ಘಟನೆ ಭಕ್ತರನ್ನು ಘಾಸಿಗೊಳಿಸಿದ್ದು, ಅಲ್ಲಿನ ಪರಿಸ್ಥಿತಿ ಏನೋ.. ಹೇಗೋ… ಎಂಬ ಆತಂಕ ಇರುವುದರಿಂದ ಈ ವರ್ಷ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನಲ್ಲಿ ಅಯ್ಯಪ್ಪ ಮಾಲೆ ಹಾಕಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.
ಮಕರ ಜ್ಯೋತಿ ವೇಳೆಗೆ ಆತಂಕ ನಿವಾರಣೆಯಾಗಿ ಭಕ್ತರ ಸಂಖ್ಯೆ ಹೆಚ್ಚಾಗಬಹುದು ಎಂದು ಅಯ್ಯಪ್ಪ ದೇವಾಲಯದ ಗುರುಸ್ವಾಮಿಗಳು ಅಭಿಪ್ರಾಯಪಡುತ್ತಾರೆ. ಅಯ್ಯಪ್ಪನಿಗೆ ತುಪ್ಪದ ಅಭಿಷೇಕ ಈ ಹಿಂದೆ ಬೆಳಗ್ಗೆ 9 ಗಂಟೆಗೆ ಮುಗಿಯುತ್ತಿದಾರೂ ಇದೀಗ 12 ಗಂಟೆವರೆಗೂ ಸಮಯ ವಿಸ್ತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smriti ಇರಾನಿ ಎದುರು ಗೆಲುವು ಅಸಾಧ್ಯ ಎಂದು ಗೊತ್ತಾಗಿದೆ: ರಾಹುಲ್ ಗೆ ಬಿಜೆಪಿ ತಿರುಗೇಟು
Campaign: ಮತದಾರರನ್ನು ಸೆಳೆಯಲು ಪ್ಯಾರಾ ಗ್ಲೈಡರ್ ಮೂಲಕ ಅಭಿಯಾನ
Lok Sabha Election: ಬೃಜ್ ಭೂಷಣ್ ಸಿಂಗ್ ಬದಲಿಗೆ ಪುತ್ರನಿಗೆ ಟಿಕೆಟ್ ನೀಡಿದ ಬಿಜೆಪಿ
ಕಾಂಗ್ರೆಸ್ನಿಂದ ಮತ ಬ್ಯಾಂಕ್ ರಾಜಕಾರಣ; ನೇಹಾ ಹತ್ಯೆ ಲವ್ ಜೆಹಾದ್:ಅಮಿತ್ ಶಾ ಆರೋಪ
ಮಣಿಪುರ ಹಿಂಸಾಚಾರಕ್ಕೆ ವರ್ಷ; ಕುಕಿ ಪತ್ನಿ, ಮೈತೇಯಿ ಪತಿ ವರ್ಷದಿಂದ ಭೇಟಿ ಇಲ್ಲ!
MUST WATCH
ಹೊಸ ಸೇರ್ಪಡೆ
Dharwad; ವಾರಂಟಿ ಇಲ್ಲದ ಕಾಂಗ್ರೆಸ್ ನ ಗ್ಯಾರಂಟಿ ನಂಬಬೇಡಿ: ಅಣ್ಣಾಮಲೈ
Shobha Karandlaje; 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ಗೆ ಪ್ರಧಾನಿ ಅಭ್ಯರ್ಥಿ ಸಿಗ್ತಿಲ್ಲ
Honnavar; ಖಾಸಗಿ ಬಸ್ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ
Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು
CD ಮಾಡುವುದರಲ್ಲಿ ಡಿಕೆಶಿ ನುರಿತವರು: ಬಿಜೆಪಿ ಅಭ್ಯರ್ಥಿ ರಾಜುಗೌಡ ವ್ಯಂಗ್ಯ