TMC ‘ಬಲ’ಕೈಗೆ ಬೇಕಿದೆ: ‘ಎಡ’ದ ಕಡೆ ಚೌಧರಿ ಚಿತ್ತ
Team Udayavani, Feb 26, 2024, 12:42 AM IST
ಕೋಲ್ಕತಾ: ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿಯನ್ನು ಒಲಿಸಿಕೊಳ್ಳಲು ಒಂದೆಡೆ ಕಾಂಗ್ರೆಸ್ ಹೈಕಮಾಂಡ್ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದರೆ, ಮತ್ತೂಂದೆಡೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು ಇದರ ಪರಿವೆಯೇ ಇಲ್ಲದಂತೆ “ಎಡಪಕ್ಷ’ ಗಳೊಂದಿಗೆ ಮೈತ್ರಿ ಮಾತುಕತೆಯಲ್ಲಿ ನಿರತರಾಗಿದ್ದಾರೆ!.
“ನಾನು ಬಂಗಾಳದಲ್ಲಿ ಎಡಪಕ್ಷಗಳೊಂದಿಗೆ ಲೋಕಸಭೆ ಚುನಾವಣೆ ಎದುರಿಸಲು ಮುಂದಾಗಿದ್ದೇನೆ. ಈಗಾಗಲೇ ಸಿಪಿಎಂ ನಾಯಕ ಸಲೀಂರೊಂದಿಗೆ ಮಾತುಕತೆ ಆರಂಭಿಸಿದ್ದೇನೆ’ ಎಂದು ಚೌಧರಿ ರವಿವಾರ ಹೇಳಿದ್ದಾರೆ.