ಸದ್ದಿಲ್ಲದೇ ಆಯ್ತು 81 ಸಾವಿರ ಕೋಟಿ ಸಾಲ ಮಾಫಿ!


Team Udayavani, Aug 8, 2017, 6:20 AM IST

Ban08081701Medn.jpg

ನವದೆಹಲಿ: ಸಾಲ ಪಡೆದು ವಾಪಸ್‌ ಕಟ್ಟಲಾಗದೇ ಮನೆ ಬಿಟ್ಟು ಓಡಿ ಹೋದವರು, ತಲೆ ತಪ್ಪಿಸಿಕೊಂಡು ಓಡಾಡುತ್ತಿರುವವರು, ಏನ್‌ ಮಾಡ್ತಿರೋ ಮಾಡ್ಕೊಳಿ ಎಂದು ಬಹಿರಂಗವಾಗಿಯೇ ಅವಾಜ್‌ ಹಾಕಿಕೊಂಡು ಭಂಡ ಧೈರ್ಯದಿಂದ ತಿರುಗಾಡುತ್ತಿರುವವರ “ವಾಪಸ್‌ ಬರಲಾಗದ ಸಾಲವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಅನಾಮತ್ತಾಗಿ ಮನ್ನಾ ಅಥವಾ ಮಾಫಿ ಮಾಡಿವೆ.

ಈ ಮೊತ್ತ ಕೇವಲ ಸಾವಿರ ಲೆಕ್ಕದಲ್ಲೋ, ಲಕ್ಷಗಳ ಲೆಕ್ಕದಲ್ಲೋ ಅಥವಾ ಕೋಟಿಗಳ ಲೆಕ್ಕದಲ್ಲೋ ಇಲ್ಲ. ಇದು ಸಾವಿರ ಸಾವಿರ ಕೋಟಿಗಳನ್ನು ಮೀರಿದೆ. ಮಾರ್ಚ್‌ಗೆ ಅಂತ್ಯವಾದ 2017ರ ವಿತ್ತೀಯ ವರ್ಷದಲ್ಲಿ 81,683 ಕೋಟಿಯಷ್ಟು ಸಾಲವನ್ನು ಮಾಫಿ ಮಾಡಲಾಗಿದೆ.

ಸತತ ಬರದಿಂದ ಕಂಗೆಟ್ಟು ಸಾಲ ಮರುಪಾವತಿ ಮಾಡಲಾಗದೇ ಆತ್ಮಹತ್ಯೆ ದಾರಿ ಹಿಡಿಯುತ್ತಿರುವ ರೈತನ ಕೇವಲ ಸಾವಿರ ಅಥವಾ ಲಕ್ಷಗಳ ಲೆಕ್ಕದಲ್ಲಿರುವ ಸಾಲವನ್ನು ಮನ್ನಾ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ, ಇದೀಗ ಉದ್ಯಮಪತಿಗಳ ಸಾಲವನ್ನು ತಮ್ಮ ಖಾತೆಯಿಂದಲೇ ತೆಗೆದುಹಾಕಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಬೇಕು ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಆಗ್ರಹಿಸಿದ್ದಾರೆ.

ವಸೂಲಾಗದ ಸಾಲವನ್ನು ಮಾಫಿ ಮಾಡಿರುವ ಬಗ್ಗೆ ಹಣಕಾಸು ಇಲಾಖೆಯಿಂದಲೇ ಮಾಹಿತಿ ಸಿಕ್ಕಿದೆ. ದೇಶದಲ್ಲಿರುವ ಸರ್ಕಾರಿ ವಲಯದ ಬ್ಯಾಂಕುಗಳು ಎದುರಿಸುತ್ತಿರುವ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಈಡೇರಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಹಣಕಾಸು ವರ್ಷವೊಂದರಲ್ಲಿ ಭಾರಿ ಪ್ರಮಾಣದ ವಸೂಲಾಗದ ಸಾಲವನ್ನು ಮಾಫಿ ಮಾಡಲಾಗಿದೆ.

2016 ಹಣಕಾಸು ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.41 ರಷ್ಟು ಹೆಚ್ಚಳವಾಗಿದೆ. ಪ್ರತಿ ಬಾರಿಯೂ ಬ್ಯಾಂಕ್‌ಗಳ ಆದಾಯ ಮೇಲೆ ಭಾರಿ ಪ್ರಮಾಣದ ಹೊಡೆತ ನೀಡುತ್ತಿದ್ದ ಈ ವಸೂಲಾಗದ ಸಾಲ ಅಥವಾ ಅನುತ್ಪಾದಕ ಆಸ್ತಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಆರ್‌ಬಿಐ ಕಠಿಣ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ಸಾಲದ ಹಣವನ್ನೇ “ಮಾಯಾ’ ಮಾಡುವ ನಿರ್ಧಾರ ತೆಗೆದುಕೊಳ್ಳುತ್ತಿವೆ.

ಇದಷ್ಟೇ ಅಲ್ಲ, ಕಳೆದ ಐದು ವರ್ಷಗಳಿಂದ ಸಾಲದ ಹಣವನ್ನು ಮಾಯ ಅಥವಾ ಮಾಫಿ ಮಾಡುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಅಂದರೆ ಈ ಅವಧಿಯಲ್ಲಿ 2.46 ಲಕ್ಷ ಕೋಟಿ ರೂ. ಸಾಲದ ಹಣವನ್ನು ಮಾಫಿ ಮಾಡಲಾಗಿದೆ. 2012-13ನೇ ಸಾಲಿನಲ್ಲಿ 27,231 ಕೋಟಿ ರೂ. ಮಾಫಿ ಮಾಡಿದ್ದರೆ, ಆ ವರ್ಷ ಒಟ್ಟಾರೆಯಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ನಿವ್ವಳ ಲಾಭ 45,849 ಕೋಟಿ ರೂ.ನಷ್ಟಾಗಿತ್ತು. ಆದರೆ 2017ನೇ ಹಣಕಾಸು ವರ್ಷದಲ್ಲಿ 81,683 ಕೋಟಿ ರೂ. ಮಾಫಿ ಮಾಡಿದ್ದರೆ, ಇದೇ ಬ್ಯಾಂಕುಗಳ ನಿವ್ವಳ ಲಾಭ ಕೇವಲ 474 ಕೋಟಿ ಮಾತ್ರ ಬಂದಿದೆ.

ಕಳೆದ ಮೂರು ವರ್ಷಗಳಿಂದ ಅನುತ್ಪಾದಕ ಆಸ್ತಿ ಮೇಲೆ ಕೆಂಗಣ್ಣು ಬೀರಿರುವ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ, ಇದರ ಪರಿಹಾರಕ್ಕಾಗಿ ಕೆಲವೊಂದು ಮಾರ್ಗೋಪಾಯ ಕಂಡು ಹಿಡಿದಿವೆ. ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ದಿವಾಳಿತನ ಸಂಹಿತೆ ಜಾರಿಗೆ ತಂದಿದೆ. ಅಲ್ಲದೆ ಆರ್‌ಬಿಐ ಕೂಡ ಸುಸ್ತಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಬ್ಯಾಂಕುಗಳಿಗೆ ಕಾನೂನಿನ ಅಸ್ತ್ರವನ್ನು ನೀಡಿದೆ. ಹೀಗಾಗಿಯೇ ಬ್ಯಾಂಕುಗಳು ಭಾರಿ ಮೊತ್ತದ ಸಾಲ ಉಳಿಸಿಕೊಂಡ 12 ಕಂಪನಿಗಳ ವಿರುದ್ಧ ಪ್ರಕರಣವನ್ನೂ ದಾಖಲಿಸಿದೆ. ಈ ಕಂಪನಿಗಳ ಒಟ್ಟಾರೆ ಸಾಲದ ಮೊತ್ತವೇ 2.5 ಲಕ್ಷ ಕೋಟಿ ಇದೆ.

ದೇಶದಲ್ಲಿನ ಒಟ್ಟಾರೆ ಅನುತ್ಪಾದಕ ಆಸ್ತಿ
9.64 ಲಕ್ಷ ಕೋಟಿ
ಮಾಫಿ ಮಾಡಿದ ಸಾಲದ ಮೊತ್ತ
– 81,683 ಕೋಟಿ
ಕಳೆದ ವರ್ಷದ ಮೊತ್ತ
– 57, 586 ಕೋಟಿ
ಐದು ವರ್ಷದ ಮಾಫಿ ಮೊತ್ತ
– 2.46 ಲಕ್ಷ ಕೋಟಿ

ದೇಶದ ರೈತರು ಹೊಂದಿರುವ ಒಟ್ಟಾರೆ ಮೊತ್ತ
– 12.6 ಲಕ್ಷ ಕೋಟಿ ರೂ.
90 ಕೋಟಿ – ಸಾಲ ಪಡೆದಿರುವ ರೈತರ ಸಂಖ್ಯೆ
46 ಕೋಟಿ – ಸಾಲ ಕಟ್ಟದೇ ಇರುವ ರೈತರ ಸಂಖ್ಯೆ
47,000 ರೂ. – ಪ್ರತಿ ರೈತ ಕುಟುಂಬದ ಮೇಲಿನ ಸಾಲದ ಮೊತ್ತ
3,097 – ಸಾಲದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ

ಸಾಲ ಮಾಫಿ ಮಾಡೋದು ಅಂದ್ರೆ ಏನು?
ಉದ್ಯಮಿಗಳು ಮಾಡಿದ 81 ಸಾವಿರ ಕೋಟಿ ರೂ. ಮನ್ನಾ ಅಲ್ಲ. ಆದರೆ, ಇದನ್ನು ಬ್ಯಾಂಕಿನ ಬ್ಯಾಲೆನ್ಸ್‌ಶೀಟ್‌ನಿಂದಲೇ ತೆಗೆದು ಹಾಕಲಾಗುತ್ತದೆ. ಅಂದರೆ, ಬ್ಯಾಂಕುಗಳು ತಾವು ಕೊಡುವ ಸಾಲವನ್ನು “ಆಸ್ತಿ’ ಎಂದು ಪರಿಗಣಿಸಿದರೆ, ಇದರಿಂದ ಬರುವ ಬಡ್ಡಿಯನ್ನು “ಆದಾಯ’ವೆಂದು ಲೆಕ್ಕ ಹಾಕುತ್ತವೆ. ಸಾಲ ಸರಿಯಾಗಿ ಕಟ್ಟುತ್ತಿದ್ದಾಗ, ಆದಾಯ ಚೆನ್ನಾಗಿಯೇ ಬರುತ್ತದೆ. ಆದರೆ ಸಾಲ ಕಟ್ಟದೇ ಹೋದಲ್ಲಿ ಆದಾಯ ಬರುವುದೇ ಇಲ್ಲ. ಆಗ ಈ ಸಾಲವನ್ನು ಬ್ಯಾಂಕುಗಳು “ಅನುತ್ಪಾದಕ ಆಸ್ತಿ’ ಎಂದು ಪರಿಗಣಿಸುತ್ತವೆ. ತುಂಬಾ ವರ್ಷಗಳ ವರೆಗೆ ಇಂಥ ಅನುತ್ಪಾದಕ ಆಸ್ತಿ ಇಟ್ಟುಕೊಂಡಿದ್ದರೆ ಬ್ಯಾಂಕುಗಳ ಆದಾಯ ಇಳಿಕೆಯಾಗುತ್ತದೆ. ಹೀಗಾಗಿ ಬ್ಯಾಂಕುಗಳು ಈ ಹಣವನ್ನೇ ಬ್ಯಾಲೆನ್ಸ್‌ ಶೀಟ್‌ನಿಂದ ತೆಗೆಯುತ್ತವೆ. ಆದರೆ, ವಸೂಲು ಮಾಡುವ ಕೆಲಸ ಮಾತ್ರ ನಿಲ್ಲಿಸುವುದಿಲ್ಲ. ಬ್ಯಾಲೆನ್ಸ್‌ ಶೀಟ್‌ನಿಂದ ತೆಗೆಯುವ ಉದ್ದೇಶ, ಸದರಿ ಬ್ಯಾಂಕಿನಲ್ಲಿ ಅನುತ್ಪಾದಕ ಆಸ್ತಿಯೇ ಹೆಚ್ಚಾಗಿದೆ. ಆದಾಯದ ಮೂಲಗಲೇ ಇಲ್ಲ ಎಂಬ ಭಾವನೆ ಬರಬಾರದು ಎಂಬ ದೃಷ್ಟಿಯಿಂದ ಈ ಕೆಲಸ ಮಾಡಲಾಗುತ್ತದೆ.

ನಾವು ಕಾರ್ಪೊರೇಟ್‌ಗಳ ಪರ ಇಲ್ಲ ಎಂದು ಹೇಳುತ್ತಿದ್ದ ಬಿಜೆಪಿ ಇದೀಗ ಅವರು ಮಾಡಿದ್ದ ಸಾಲವನ್ನು ಮಾಫಿ ಮಾಡಿದೆ. ಹೀಗಾಗಿ ಅದು ಯಾರ ಪರ ಇದೆ ಎಂಬುದನ್ನು ಬಹಿರಂಗಗೊಳಿಸಬೇಕು.
– ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.