ಮೈಸೂರಿನಲ್ಲಿ ಶಿಲಾಶಾಸನಗಳ ಡಿಜಿಟಲೀಕರಣ: ಜಗತ್ತಿನ ಎಲ್ಲರಿಗೂ ಲಭ್ಯವಾಗಲಿವೆ ಶ್ರೀಮಂತ ಶಾಸನಗಳು


Team Udayavani, Jul 17, 2022, 7:13 AM IST

ಮೈಸೂರಿನಲ್ಲಿ ಶಿಲಾಶಾಸನಗಳ ಡಿಜಿಟಲೀಕರಣ: ಜಗತ್ತಿನ ಎಲ್ಲರಿಗೂ ಲಭ್ಯವಾಗಲಿವೆ ಶ್ರೀಮಂತ ಶಾಸನಗಳು

ಹೊಸದಿಲ್ಲಿ: ಭಾರತೀಯ ಪ್ರಾಚ್ಯ ವಸ್ತು ಇಲಾಖೆ (ಎಎಸ್‌ಐ)ಯ ಸಂಗ್ರಹ ದಲ್ಲಿರುವ ಶ್ರೀಮಂತ ಶಿಲಾಶಾಸನ ಸಂಗ್ರಹ ಶೀಘ್ರದಲ್ಲೇ ಡಿಜಿಟಲ್‌ ರೂಪದಲ್ಲಿ ಜಗತ್ತಿಗೆ ಲಭ್ಯವಾಗಲಿದೆ. ವಿಶೇಷವೆಂದರೆ, ಈ ಕೆಲಸ ಆರಂಭವಾಗಿರುವುದು ಮೈಸೂರಿನಲ್ಲಿ.

1887ರಿಂದೀಚೆಗೆ ಇಲ್ಲಿ ಸಂಗ್ರಹಿಸಿರುವ ಶಾಸನಗಳ ಡಿಜಿಟಲೀಕರಣಕ್ಕೆ ಪ್ರಕ್ರಿಯೆಗೆ ಮೈಸೂರಿನಲ್ಲಿ ಇರುವ ಪ್ರಾಚ್ಯವಸ್ತು ಇಲಾಖೆಯ ಶಿಲಾಶಾಸನ ವಿಭಾಗದ ಕಚೇರಿಯಲ್ಲಿ ಶನಿವಾರ ಎಎಸ್‌ಐ ಪ್ರಧಾನ ನಿರ್ದೇಶಕಿ ವಿದ್ಯಾವತಿ ಚಾಲನೆ ನೀಡಿದ್ದಾರೆ. ಈ ಪ್ರಕ್ರಿಯೆ ಪೂರ್ಣಗೊಂಡಾಗ ಆಸಕ್ತರ ಅಧ್ಯಯನಕ್ಕೆ ಲಭ್ಯವಾಗಲಿವೆ.

ಮೈಕ್ರೋಫಿಲ್ಮ್ ರೂಪ
ಡಿಜಿಟಲೀಕರಣಗೊಂಡ ದತ್ತಾಂಶವನ್ನು ಮೈಕ್ರೋಫಿಲ್ಮ್ ಗಳ ರೂಪದಲ್ಲಿ ಆರ್ಕ್‌ಟಿಕ್‌ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ)ನಲ್ಲಿ ವಿಶ್ವದ ನಾಗರಿಕತೆಯ ನೆನಪಾಗಿ ಶಾಶ್ವತವಾಗಿ ಇರಿಸಲಾಗುತ್ತದೆ. ಮೈಸೂರಿನ ಘಟಕವು 1887ರಿಂದ ಹಸ್ತಚಾಲಿತವಾಗಿ ತೆಗೆದಿರುವ ಶಾಸನಗಳ ಕಾಗದದ ಪ್ರತಿಗಳ ಭಂಡಾರ ವಾಗಿದೆ.

ಕನ್ನಡ ಸೇರಿ ಹಲವು ಭಾಷೆಗಳ ಶಾಸನ
ಕನ್ನಡ, ತಮಿಳು, ಸಂಸ್ಕೃತ, ಪಾಲಿ, ಪ್ರಾಕೃತ, ತೆಲುಗು, ಬಂಗಾಳಿ, ಅರೇಬಿಕ್‌, ಪರ್ಷಿಯನ್‌ ಸಹಿತ ಹಲವು ಭಾಷೆಗಳ ಸುಮಾರು ಒಂದು ಲಕ್ಷದಷ್ಟು ಶಿಲಾಶಾಸನಗಳು ಮೈಸೂರಿನಲ್ಲಿವೆ.

ಈಗ ಇಲ್ಲಿ ಸುಮಾರು 40 ಶಾಸನಶಾಸ್ತ್ರಜ್ಞರು ಮತ್ತು ಪುರಾತತ್ವಜ್ಞರು ಶಿಲಾಶಾಸನಗಳ ದೃಢೀಕರಣ ಕೆಲಸ ಆರಂಭಿಸಿದ್ದಾರೆ. 20 ಡೇಟಾ ಎಂಟ್ರಿ ಆಪರೇಟರ್‌ಗಳು ಇವುಗಳನ್ನು ಮೆಟಾ ಡೇಟಾ ಮಾದರಿಯಲ್ಲಿ ಲಭ್ಯವಾಗುವಂತೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಪಾರ್ಜೆಕ್ಟ್‌ನಲ್ಲಿ ಭಾರತೀಯರು ಮಾತ್ರವಲ್ಲದೆ ಐರೋಪ್ಯ ದೇಶಗಳ ತಜ್ಞರು ಕೂಡ ಭಾಗಿಯಾಗಿದ್ದಾರೆ.

ಏನಿದು ಆರ್ಕ್‌ಟಿಕ್‌ ವರ್ಲ್ಡ್ಆರ್ಕೈವ್?
2017ರಲ್ಲಿ ಸ್ಥಾಪನೆಯಾದ ಆರ್ಕ್‌ಟಿಕ್‌ ವರ್ಲ್ಡ್ ಆರ್ಕೈವ್ (ಎಡಬ್ಲ್ಯುಎ) ಸುಮಾರು 15ಕ್ಕೂ ಹೆಚ್ಚು ದೇಶಗಳ ಮೌಲ್ಯಯುತ ಡಿಜಿಟಲ್‌ ಕಲಾಕೃತಿಗಳು ಮತ್ತು ಮಾಹಿತಿಯ ಸಂಪತ್ತನ್ನು ಹೊಂದಿದೆ. ನಾರ್ವೆಯ ಸ್ವಾಲ್‌ಬಾರ್ಡ್‌ ದ್ವೀಪ ಸಮೂಹದಲ್ಲಿರುವ ಆರ್ಕ್‌ಟಿಕ್‌ ಪರ್ವತವೊಂದರ ಒಳಗೆ ಇದನ್ನು ನಿರ್ಮಿಸಲಾಗಿದೆ. ಈ ಪ್ರದೇಶವನ್ನು 42 ದೇಶಗಳು ಸೇನಾ ರಹಿತ ವಲಯವೆಂದು ಘೋಷಿಸಿವೆ. ಎಲ್ಲ ರೀತಿಯ ಸೈಬರ್‌ ಮತ್ತು ಪರಮಾಣು ದಾಳಿಯಿಂದ ಜಗತ್ತಿನ ದತ್ತಾಂಶ ಗಳನ್ನು ಸುರಕ್ಷಿತವಾಗಿಡುವ ಕೆಲಸವನ್ನು ಈ ಕೇಂದ್ರ ಮಾಡುತ್ತಿದೆ.

 

ಟಾಪ್ ನ್ಯೂಸ್

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.