Gurugram; ಗ್ಯಾಂಗ್ ಸ್ಟರ್ ಗಡೋಲಿ ಹತ್ಯೆ ಆರೋಪಿ ದಿವ್ಯಾ ಪಹುಜಾಳ ಬರ್ಬರ ಹತ್ಯೆ
ನಕಲಿ ಎನ್ಕೌಂಟರ್... ಮಾಜಿ ಮಾಡೆಲ್ ಜಾಮೀನು ಪಡೆದ ತಿಂಗಳ ನಂತರ...!!
Team Udayavani, Jan 3, 2024, 9:28 PM IST
ಗುರುಗ್ರಾಮ: ಮುಂಬೈನಲ್ಲಿ ನಡೆದ ನಕಲಿ ಪೊಲೀಸ್ ಎನ್ಕೌಂಟರ್ನಲ್ಲಿ ದರೋಡೆಕೋರರ ಹತ್ಯೆಯ ಆರೋಪಿಗಳಲ್ಲಿ ಒಬ್ಬಳಾಗಿದ್ದ ಮಾಜಿ ಮಾಡೆಲ್ ಜಾಮೀನು ಪಡೆದ ತಿಂಗಳ ನಂತರ ಇಲ್ಲಿನ ಹೋಟೆಲ್ನಲ್ಲಿ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಐವರು ಮಂಗಳವಾರ ರಾತ್ರಿ ದಿವ್ಯಾ ಪಹುಜಾಳನ್ನು ಹೋಟೆಲ್ಗೆ ಕರೆದೊಯ್ದು ಆಕೆಯ ತಲೆಗೆ ಗುಂಡು ಹಾರಿಸಿದ್ದಾರೆ. ಆಕೆಯ ಶವವನ್ನು ಹೋಟೆಲ್ನಿಂದ ಕಾರಿನಲ್ಲಿ ಎಸೆಯಲು ತೆಗೆದುಕೊಂಡು ಹೋಗುತ್ತಿದ್ದಾಗ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
2016 ಫೆಬ್ರವರಿ 7 ರಂದು ಮುಂಬೈನ ಹೋಟೆಲ್ನಲ್ಲಿ ಗ್ಯಾಂಗ್ಸ್ಟರ್ ಸಂದೀಪ್ ಗಡೋಲಿ ಹತ್ಯೆಗೆ ಸಂಬಂಧಿಸಿದಂತೆ ಸುಮಾರು ಏಳು ವರ್ಷಗಳ ನಂತರ ಕಳೆದ ವರ್ಷ ಜೂನ್ನಲ್ಲಿ ಬಾಂಬೆ ಹೈಕೋರ್ಟ್ ಪಹುಜಾಗೆ ಜಾಮೀನು ನೀಡಿತ್ತು.
ಮುಂಬೈ ಪೊಲೀಸರು ಪಹುಜಾ, ಆಕೆಯ ತಾಯಿ ಮತ್ತು ದರೋಡೆಕೋರನನ್ನು ಹತ್ಯೆಗೈದಿದ್ದ ಐವರು ಪೊಲೀಸರನ್ನು ಬಂಧಿಸಿದ್ದರು. ಗಡೋಲಿಯನ್ನು ಗೆಳತಿಯಾಗಿದ್ದ ಪಹುಜಾ ಸಹಾಯದಿಂದ ಬಲೆಗೆ ಬೀಳಿಸಿ ನಕಲಿ ಎನ್ಕೌಂಟರ್ನಲ್ಲಿ ಹತ್ಯೆಗೈಯಲಾಗಿತ್ತು. ಪ್ರತಿಸ್ಪರ್ಧಿ ಗ್ಯಾಂಗ್ ಅನ್ನು ನಡೆಸುತ್ತಿದ್ದ ವೀರೇಂದ್ರ ಕುಮಾರ್ ಅಲಿಯಾಸ್ ಬಿಂದರ್ ಗುಜ್ಜರ್, ಗಡೋಲಿಯನ್ನು ಮುಗಿಸಲು ಹರಿಯಾಣ ಪೊಲೀಸ್ ಅಧಿಕಾರಿಗಳೊಂದಿಗೆ ಸಂಚು ರೂಪಿಸಿದ್ದ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಎನ್ಕೌಂಟರ್ನ ಸಮಯದಲ್ಲಿ ಗುಜ್ಜರ್ ಜೈಲಿನಲ್ಲಿದ್ದ, ಆದರೆ ಅವನು ತನ್ನ ಸಹೋದರ ಮನೋಜ್ನ ಸಹಾಯದಿಂದ ಸಂಚು ರೂಪಿಸಿದ್ದ ಮತ್ತು ಪಹುಜಾವನ್ನು ಹನಿ ಟ್ರ್ಯಾಪ್ ರೂಪದಲ್ಲಿ ಬಲೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
” ಪಹುಜಾ ಹತ್ಯೆಯಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಭೂಪೇಂದರ್ ಸಿಂಗ್ ಸಾಂಗ್ವಾನ್ ಹೇಳಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಬಂಧಿತ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ