ನ್ಯಾಯವಾದಿ ಮೇಲೆ ಸಿಜೆಐ ಡಿ.ವೈ.ಚಂದ್ರಚೂಡ್ ಗರಂ
Team Udayavani, Apr 12, 2023, 6:45 AM IST
ನವದೆಹಲಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆಗೆ ಹತ್ತಿರದ ದಿನಾಂಕ ನೀಡುವಂತೆ ಒತ್ತಾಯಿಸಿದ ನ್ಯಾಯವಾದಿಯೊಬ್ಬರ ಮೇಲೆ ಸಿಜೆಐ ಡಿ.ವೈ.ಚಂದ್ರಚೂಡ್ ಗರಂ ಆದ ಘಟನೆ ನಡೆದಿದೆ.
ಸಿಜೆಐ ಡಿ.ವೈ.ಚಂದ್ರಚೂಡ್ ಅವರಿದ್ದ ನ್ಯಾಯಪೀಠದ ಎದುರು ಅರ್ಜಿಯೊಂದು ಬಂತು. ಇದರ ವಿಚಾರಣೆಯನ್ನು ಏ.17ಕ್ಕೆ ಸಿಜೆಐ ನಿಗದಿ ಮಾಡಿದರು. ಈ ವೇಳೆ ಅರ್ಜಿದಾರರ ಪರ ವಕೀಲರು, ಏ.17ಕ್ಕೂ ಮುನ್ನ ಶೀಘ್ರ ದಿನಾಂಕ ನಿಗದಿಪಡಿಸುವಂತೆ ಮನವಿ ಮಾಡಿದರು. ಅಷ್ಟಕ್ಕೆ ಸುಮ್ಮನಾಗದೇ, “ಅನುಮತಿ ನೀಡಿದರೆ ಮತ್ತೂಂದು ಪೀಠದ ಎದುರು ಅರ್ಜಿ ಸಲ್ಲಿಸುತ್ತೇನೆ,’ ಎಂದರು.
ಇದಕ್ಕೆ ಗರಂ ಆದ ಸಿಜೆಐ, “ನನ್ನೊಂದಿಗೆ ಈ ತಂತ್ರಗಳನ್ನು ಹೂಡಬೇಡಿ. ಇಲ್ಲಿ ನಮೂದಿಸಿ, ಶೀಘ್ರ ದಿನಾಂಕಕ್ಕಾಗಿ ಮತ್ತೊಂದು ಪೀಠದ ಎದುರು ಉಲ್ಲೇಖೀಸದಿರಿ. ನನ್ನ ಅಧಿಕಾರದಲ್ಲಿ ಮೂಗುತೂರಿಸದಿರಿ. ಏ.17ಕ್ಕೆ ದಿನಾಂಕ ನಿಗದಿಯಾಗಿರುವಾಗ, ಅಂದೇ ವಿಚಾರಣೆಗೆ ಬರಲಿದೆ,’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಸಿಜೆಐ ನೇತೃತ್ವದ ನ್ಯಾಯಪೀಠ, ಪ್ರತಿದಿನ ಬೆಳಗ್ಗೆ ತುರ್ತು ವಿಚಾರಣೆಯ ಸುಮಾರು 100 ಪ್ರಕರಣಗಳನ್ನು ಆಲಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
MUST WATCH
ಹೊಸ ಸೇರ್ಪಡೆ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ