ಇನ್ನು ಮುಂದೆ ಪಂಜಾಬ್ನಲ್ಲಿ ಮಾಜಿ ಶಾಸಕರಿಗೆ ಒಂದು ಅವಧಿಯ ಪಿಂಚಣಿ!
ಸಿಎಂ ಭಗವಂತ್ ಮಾನ್ರಿಂದ ಮಹತ್ವದ ನಿರ್ಧಾರ
Team Udayavani, Mar 26, 2022, 8:10 AM IST
ಚಂಡೀಗಡ: ಇನ್ನು ಮುಂದೆ ಪಂಜಾಬ್ನಲ್ಲಿ ಮಾಜಿ ಶಾಸಕರು ಕೇವಲ ಒಂದು ಅವಧಿಯ ಶಾಸಕತ್ವಕ್ಕೆ ಮಾತ್ರ ಪಿಂಚಣಿ ಪಡೆಯಲಿದ್ದಾರೆ!
ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ಅವರೇ ಇಂಥದ್ದೊಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಪ್ರತಿ ಬಾರಿ ಶಾಸಕನಾಗಿ ಸೇವೆ ಸಲ್ಲಿಸಿದ ಅವಧಿಗೂ ಪಿಂಚಣಿ ಪಡೆಯುವ ಅಭ್ಯಾಸಕ್ಕೆ ಮಾನ್ ಅಂತ್ಯಹಾಡಿದ್ದಾರೆ.
“ಪಂಜಾಬ್ನ ಮಾಜಿ ಶಾಸಕರು, ಅವರು 2 ಬಾರಿ ಗೆದ್ದಿದ್ದರೂ, 5 ಬಾರಿ ಅಥವಾ 10 ಬಾರಿ ಗೆದ್ದಿದ್ದರೂ ಇನ್ನು ಮುಂದೆ ಒಂದು ಅವಧಿಯ ಪಿಂಚಣಿಯನ್ನು ಮಾತ್ರ ಪಡೆಯಲಿದ್ದಾರೆ. ಇದರಿಂದ ಉಳಿತಾಯವಾಗುವ ಮೊತ್ತವನ್ನು ಜನರ ಕಲ್ಯಾಣಕ್ಕಾಗಿ ಬಳಸಲಾಗುವುದು’ ಎಂದು ಮಾನ್ ಘೋಷಿಸಿದ್ದಾರೆ.
ಒಬ್ಬ ಶಾಸಕ ಪ್ರತಿ ಅವಧಿಗೆ 75 ಸಾವಿರ ರೂ. ಪಿಂಚಣಿ ಪಡೆಯುತ್ತಾರೆ. 3 ಬಾರಿ, 4- 5 ಬಾರಿ ಶಾಸಕರಾಗಿ ಚುನಾಯಿತರಾದವರು, ನಂತರದಲ್ಲಿ ಚುನಾವಣೆಯಲ್ಲಿ ಸೋತಿದ್ದರೂ, ಟಿಕೆಟ್ ಪಡೆಯದಿದ್ದರೂ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಲಕ್ಷಾಂತರ ರೂ. ಗಳಿಸುತ್ತಿದ್ದಾರೆ. ಕೆಲವರು ತಿಂಗಳಿಗೆ 3.50 ಲಕ್ಷ ರೂ., ಇನ್ನೂ ಕೆಲವರು 4.50 ಲಕ್ಷ ರೂ, ಮತ್ತೆ ಕೆಲವರು 5.25 ಲಕ್ಷ ರೂ. ಪಡೆಯುತ್ತಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಹೊರೆಯಾಗುತ್ತಿದೆ. ಹೀಗಾಗಿ, ಇನ್ನು ಮುಂದೆ ಒಂದು ಅವಧಿಯ ಶಾಸಕತ್ವದ ಪಿಂಚಣಿಯನ್ನು ಮಾತ್ರವೇ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ :ಶೀನಾ ಬೋರಾ ಹತ್ಯೆ ಪ್ರಕರಣ: ಇಂದ್ರಾಣಿ ಜಾಮೀನಿಗೆ ಸಿಬಿಐ ವಿರೋಧ
ಜತೆಗೆ, ಅವರ ಕೌಟುಂಬಿಕ ಪಿಂಚಣಿಯ ಮೊತ್ತವನ್ನೂ ಕಡಿತ ಮಾಡಲಾಗುವುದು ಎಂದೂ ಆಪ್ ನಾಯಕ, ಸಿಎಂ ಮಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ