AIADMK; ಸರ್ವಾಧಿಕಾರಿ…: ಪಳನಿ ಸ್ವಾಮಿ ವಿರುದ್ಧ ಪನ್ನೀರಸೆಲ್ವಂ ಕಿಡಿ
Team Udayavani, Feb 5, 2024, 7:29 PM IST
ಮಧುರೈ(ತಮಿಳುನಾಡು) : ಸರ್ವಾಧಿಕಾರಿ ಎಡಪ್ಪಾಡಿ ಪಳನಿ ಸ್ವಾಮಿ ಬೋಗಸ್ ಮಹಾಸಭೆ ನಡೆಸಿ ಎಂಜಿಆರ್ ಅವರು ಎಐಎಡಿಎಂಕೆಯಲ್ಲಿ ತಂದಿದ್ದ ಪಕ್ಷದ ಬೈಲಾಗಳನ್ನು ತುಳಿದಿದ್ದಾರೆ ಎಂದು ಮಾಜಿ ಸಿಎಂ ಎಐಎಡಿಎಂಕೆ ಉಚ್ಚಾಟಿತ ನಾಯಕ, ಮಾಜಿ ಸಿಎಂ ಓ.ಪನ್ನೀರಸೆಲ್ವಂ ಅವರು ಸೋಮವಾರ ಕಿಡಿ ಕಾರಿದ್ದಾರೆ.
ಸಭೆಯಲ್ಲಿ ಮಾತನಾಡಿದ ಪನ್ನೀರಸೆಲ್ವಂ “1972ರಲ್ಲಿ ಎಂಜಿಆರ್ ಅವರು ಎಐಎಡಿಎಂಕೆಯನ್ನು ರಚಿಸಿದಾಗ, ಪಕ್ಷದ ಕೆಲವು ನಿಯಮಗಳು ಕಾಲಕ್ಕೆ ತಕ್ಕಂತೆ ಬದಲಾಗಬಹುದು ಎಂಬುದೂ ಸೇರಿದಂತೆ ಹಲವು ಉಪ-ಕಾನೂನುಗಳನ್ನು ರಚಿಸಿದ್ದರು. ಆದರೆ ಎಂಜಿಆರ್ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಕಾರ್ಯಕರ್ತರೇ ಆಯ್ಕೆ ಮಾಡಬೇಕು ಎಂದು ಆದೇಶ ಹೊರಡಿಸಿ ತಿದ್ದುಪಡಿ ಮಾಡದ ಉಪ ಕಾನೂನು ಉಳ್ಳ ಪಕ್ಷವನ್ನು ರಚಿಸಿದರು. ಸರ್ವಾಧಿಕಾರಿ ಎಡಪ್ಪಾಡಿ ಪಳನಿ ಸ್ವಾಮಿ ಬೋಗಸ್ ಮಹಾಸಭೆ ನಡೆಸಿ ಎಂಜಿಆರ್ ತಂದಿದ್ದ ಪಕ್ಷದ ಬೈಲಾಗಳನ್ನು ತುಳಿದಿದ್ದಾರೆ ಎಂದು ಕಿಡಿ ಕಾರಿದರು.
ಎಡಪ್ಪಾಡಿ ಪಳನಿಸ್ವಾಮಿ ಎಐಎಡಿಎಂಕೆ ಕಾರ್ಯಕರ್ತರಿಗೆ ನೀಡಿರುವ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಹಣ ಉಳ್ಳವರು ಮಾತ್ರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಬಹುದು ಎಂದು ಮಾಡಿ ತೋರಿಸಿದ್ದಾರೆ. ಕಾರ್ಯಕರ್ತರ ಹಕ್ಕನ್ನು ಕಸಿದುಕೊಂಡ ಎಡಪ್ಪಾಡಿ ಪಳನಿಸ್ವಾಮಿ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯಬಹುದೇ? ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ