ಕೋವಿಡ್ ಸಮಯದಲ್ಲಿ ದಾದಿಯರು ಮಾಡಿದ ತ್ಯಾಗಗಳು ಮನುಕುಲಕ್ಕೆ ಪ್ರೇರಣೆ: ಶಾ
Team Udayavani, May 12, 2023, 8:01 PM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ದಾದಿಯರ ದಿನವಾದ (ಮೇ 12 )ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಾದಿಯರನ್ನು ಶ್ಲಾಘಿಸಿದರು, ಅವರ ಕಠಿಣ ಪರಿಶ್ರಮ ಮತ್ತು ನಿಸ್ವಾರ್ಥ ಸಮರ್ಪಣೆ ದೇಶದ ಆರೋಗ್ಯ ವ್ಯವಸ್ಥೆಯ ಅಡಿಪಾಯವಾಗಿದೆ ಎಂದು ಹೇಳಿದರು.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾದ ಮೇ 12 ರಂದು ಅಂತರರಾಷ್ಟ್ರೀಯ ದಾದಿಯರ ದಿನವನ್ನಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
“ಅಂತಾರರಾಷ್ಟ್ರೀಯ ದಾದಿಯರ ದಿನದಂದು, ಅವರ ಕಠಿಣ ಪರಿಶ್ರಮ ಮತ್ತು ನಿಸ್ವಾರ್ಥ ಸಮರ್ಪಣೆ ನಮ್ಮ ಆರೋಗ್ಯ ವ್ಯವಸ್ಥೆಯ ಅಡಿಪಾಯವನ್ನು ರೂಪಿಸುವವರನ್ನು ನಾನು ಅಭಿನಂದಿಸುತ್ತೇನೆ. ಜೀವಗಳನ್ನು ಉಳಿಸಲು ವಿಶೇಷವಾಗಿ ಕೋವಿಡ್ ಸಮಯದಲ್ಲಿ ಅವರ ತ್ಯಾಗದ ಅಸಾಧಾರಣ ಉದಾಹರಣೆಗಳು ಮಾನವಕುಲವನ್ನು ಪ್ರೇರೇಪಿಸುತ್ತಲೇ ಇರುತ್ತವೆ ”ಎಂದು ಶಾ ಟ್ವೀಟ್ ಮಾಡಿದ್ದಾರೆ.