ಮುಂಬಯಿ ಗೋವಂಡಿಯಲ್ಲಿ ದಂಪತಿ ಮೇಲೆ ಗುಂಡು : ಐವರು ಅರೆಸ್ಟ್
Team Udayavani, Jun 9, 2018, 4:53 PM IST
ಮುಂಬಯಿ : ನಗರ ಹೊರವಲಯದ ಗೋವಂಡಿಯಲ್ಲಿನ ಆರೆಂಜ್ ಮಿಂಟ್ ಕಫೆಯಲ್ಲಿ ಊಟ ಮಾಡುತ್ತಿದ್ದ ದಂಪತಿ ರಾಕೇಶ್ ಸೋನಾವನೆ ಮತ್ತು ಶ್ವೇತಾ ಪಾಂಡೆ ಅವರ ಮೇಲೆ ಇಂದು ಶನಿವಾರ ನಸುಕಿನ 2 ಗಂಟೆಯ ಸುಮಾರಿಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತಿಳಿಸಿರುವ ಪ್ರಕಾರ ಸಯಾನ್ ನಿವಾಸಿ ದಂಪತಿ, ನವೀ ಮುಂಬಯಿಯ ನಿತಿನ್ ಅಹುಜಾ ಎಂಬವರಿಂದ ಕಾರೊಂದನ್ನು ಖರೀದಿಸಿದ್ದರು. ಆದರೆ ಅದರ ಹಣವನ್ನು ಪಾವತಿಸಿರಲಿಲ್ಲ. ಅಹುಜಾ ಅವರು ತಮ್ಮ ಪತ್ನಿ ಮತ್ತು ಕೆಲವು ಸ್ನೇಹಿತರೊಂದಿಗೆ ಅದೇ ಹೊಟೇಲ್ಗೆ ಬಂದು ದಂಪತಿ ಜತೆ ಹಣಕ್ಕಾಗಿ ಜಗಳವಾಡಿ ಕೊನೆಗೆ ಎರಡು ಸುತ್ತು ಗುಂಡು ಹಾರಿಸಿದರು. ಆದರೆ ಗುಂಡು ಹಾರಾಟದಲ್ಲಿ ಯಾರೂ ಗಾಯಗೊಳ್ಳಲಿಲ್ಲ.
ಗುಂಡು ಹಾರಾಟದಿಂದ ಹೊಟೇಲಲ್ಲಿ ಇದ್ದ ಇತರರು, ಹೊರಗಿನವರು ಭೀತರಾದರು. ಅದೇ ವೇಳೆ ಹೊರಗೆ ಗಸ್ತು ತಿರುಗುತ್ತಿದ್ದ ಪೊಲೀಸ್ ತಂಡ ಗುಂಡಿನ ಸದ್ದು ಕೇಳಿ ಹೊಟೇಲ್ ಒಳಗೆ ಬಂದು ಆರೋಪಿ ಅಹುಜಾ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ತೆಗೆದುಕೊಂಡಿತು. ಅಂತೆಯೇ ಅಹುಜಾ ಬಳಿ ಇದ್ದ ಪರವಾನಿಗೆ ರಹಿತವಾದ 7.65 ಎಂ ಎಂ ನಾಡ ಪಿಸ್ತೂಲನ್ನು ಕೂಡ ವಶಕ್ಕೆ ತೆಗೆದುಕೊಂಡು ಕೊಲೆ ಯತ್ನ, ಸುಲಿಗೆ, ದೊಂಬಿ ಕೃತ್ಯದ ಕೇಸು ದಾಖಲಿಸಿಕೊಂಡರು.
ಬಂಧಿತರನ್ನು ನಾಳೆ ಕೋರ್ಟಿಗೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ