ಗಣರಾಜ್ಯ ದಿನಕ್ಕೆ ಗಾಂಧಿ ತತ್ವ ಆಧಾರಿತ ಟ್ಯಾಬ್ಲೋ
Team Udayavani, Aug 23, 2018, 6:00 AM IST
ಹೊಸದಿಲ್ಲಿ: ಈ ವರ್ಷದ ಅ.2ರಿಂದ 2019ರ ಮಾರ್ಚ್ವರೆಗೆ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಆಯೋಜಿಸಿದೆ. ಅಂತಾರಾಷ್ಟ್ರೀಯ ಗಾಯಕರಿಂದ ಗಾಂಧಿ ಕುರಿತ ಹಾಡುಗಳ ಗಾಯನ, ವರ್ಚುವಲ್ ರಿಯಾಲಿಟಿ ಶೋಗಳು, ನೊಬೆಲ್ ಪುರಸ್ಕೃತರಿಂದ ಸಂವಾದ ಮತ್ತು ಧಾರ್ಮಿಕ ಹಾಗೂ ಆಧ್ಯಾತ್ಮಿಕ ಗುರುಗಳಿಂದ ಭಾಷಣ ಆಯೋಜಿಸಲಾಗುತ್ತದೆ ಹಾಗೂ ಸ್ಮರಣಾರ್ಥ ಸ್ಟಾಂಪ್ಗ್ಳ ಬಿಡುಗಡೆ ಮತ್ತು ಗಾಂಧಿ ಹೆಸರಿನಲ್ಲಿ ಬ್ಲ್ಯಾಕ್ ಬೆಲ್ಟ್ ಕೂಡ ನೀಡಲು ನಿರ್ಧರಿಸಲಾಗಿದೆ.
ಎಲ್ಲಾ ದೇಶಗಳಲ್ಲಿರುವ ಭಾರತೀಯ ರಾಯಭಾರ, ಹೈಕಮಿಷನ್ ಕಚೇರಿಗಳಲ್ಲಿ ಕೂಡ ವಿವಿಧ ರೀತಿಯ ಕಾರ್ಯಕ್ರಮ ಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ ಮುಂದಿನ ಗಣರಾಜ್ಯ ದಿನ ಪ್ರಯುಕ್ತ ಎಲ್ಲಾ ಟ್ಲಾಬ್ಲೋಗಳು ಮಹಾತ್ಮಾ ಗಾಂಧಿಯವರ ತತ್ವಾದರ್ಶಗಳನ್ನು ಒಳ ಗೊಂಡಿ ರಬೇಕು ಎಂದು ಸಮಿತಿಯೊಂದು ಶಿಫಾರಸು ಮಾಡಿದೆ. ಚಂಪಾರಣ್ ಸತ್ಯಾ ಗ್ರಹ, ದಂಡಿ ಯಾತ್ರೆಗಳನ್ನು ಒಳಗೊಂಡ ಸ್ತಬ್ದಚಿತ್ರ ರೂಪಿಸಲೂ ಸಲಹೆ ಮಾಡಿದೆ. ಇನ್ನೊಂದೆಡೆ ಫೆಬ್ರವರಿ 22 ರಂದು ಕಸ್ತೂರಬಾ 75ನೇ ಪುಣ್ಯಸ್ಮರಣೆ ಅಂಗವಾಗಿ ಕಸ್ತೂರಬಾ ದಿನ ಎಂಬುದಾಗಿ ಆಚರಣೆ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು “ದ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಗಾಂಧಿ ನೆನಪಿನ ಕಾರ್ಯಕ್ರಮಗಳು
nಸದ್ಗುರು ಜಗ್ಗಿ ವಾಸುದೇವ, ಶ್ರೀ ಶ್ರೀ ರವಿಶಂಕರ್, ಮುರಾರಿ ಬಾಪು ಮತ್ತು ಬ್ರಹ್ಮ ಕುಮಾರಿಯರಿಂದ ಗಾಂಧಿ ಕಥೆ
nಬೌದ್ಧ ಸಮುದಾಯಗಳಿಂದ ಗಾಂಧಿ ಕುರಿತ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಮಿನಾರ್
nಗಾಂಧಿ ಸ್ಮರಣಾರ್ಥ ಸ್ಟಾಂಪ್,ನಾಣ್ಯ ಬಿಡುಗಡೆ
nದೇಶದ ವಿವಿಧ ಸಾಂಸ್ಕೃತಿಕ ಸಂಸ್ಥೆಗಳಿಂದ ನಾಟಕ, ಪ್ರದರ್ಶನ, ಸೆಮಿನಾರ್, ಕಾರ್ಯಕ್ರಮಗಳು
nನೆಹರು ತಾರಾಲಯದಿಂದ ಗಾಂಧಿ ಕುರಿತ ವಿಚಾರ ಸಂಕಿರಣ
nನೊಬೆಲ್ ಪುರಸ್ಕೃತರು ಗಾಂಧಿ ಬಗ್ಗೆ ಬರೆದ 150 ಲೇಖನಗಳ ಸಂಪಾದಿತ ಕೃತಿ ಬಿಡುಗಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!