ತುರ್ತು ಸ್ಥಿತಿಯಲ್ಲಿ ಟೆಲಿಕಾಂ ಕಂಪೆನಿ ವಶಕ್ಕೆ ಪಡೆಯಲು ಸರಕಾರಕ್ಕೆ ಅವಕಾಶ: ಮಸೂದೆ ಮಂಡನೆ
ದೂರಸಂಪರ್ಕ ಜಾಲ ಸ್ಥಗಿತಗೊಳಿಸಲೂ ಟೆಲಿಕಮ್ಯೂನಿಕೇಷನ್ಸ್ ಮಸೂದೆಯಲ್ಲಿ ಅವಕಾಶ
Team Udayavani, Dec 19, 2023, 12:54 AM IST
ಹೊಸದಿಲ್ಲಿ: ಅತ್ಯಂತ ತುರ್ತು ಸಂದರ್ಭಗಳಲ್ಲಿ ದೂರಸಂಪರ್ಕ ಕಂಪೆನಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯುವ ಅಧಿಕಾರವನ್ನು ಸರಕಾರಕ್ಕೆ ನೀಡುವಂತಹ “ದೂರಸಂಪರ್ಕ ಮಸೂದೆ 2023′ ಅನ್ನು ಲೋಕಸಭೆಯಲ್ಲಿ ಸೋಮವಾರ ಮಂಡಿಸಲಾಗಿದೆ.
ಪ್ರಾಕೃತಿಕ ವಿಪತ್ತಿನ ನಿರ್ವಹಣೆ ಸೇರಿ ತುರ್ತು ಪರಿಸ್ಥಿತಿಯಲ್ಲಿ ರಕ್ಷಣೆಗಾಗಿ ಕೇಂದ್ರ ಅಥವಾ ರಾಜ್ಯ ಸರಕಾರದ ವತಿಯಿಂದ ನಿಗದಿಗೊಳಿಸಿದ ಅಧಿಕಾರಿ ದೂರಸಂಪರ್ಕ ಕಂಪೆನಿಗಳನ್ನು ತಾತ್ಕಾಲಿಕವಾಗಿ ವಶಕ್ಕೆ ಪಡೆಯಬಹುದು. ದೂರಸಂಪರ್ಕ ಜಾಲವನ್ನು ಕೂಡ ಸ್ಥಗಿತಗೊಳಿಸಬಹುದು. ಅಂತರಿಕ್ಷದಿಂದ ನೇರ ಇಂಟರ್ನೆಟ್ ಸೇವಾ ಸಂಸ್ಥೆಗಳಿಗೆ ಹರಾಜು ಇಲ್ಲದೆ ಸ್ಪೆಕ್ಟ್ರಂ ನೀಡಬಹುದು ಎಂಬ ಅಂಶಗಳು ಈ ಮಸೂದೆಯಲ್ಲಿವೆ. ಮಾನ್ಯತೆ ಪಡೆದಿರುವ ಮಾಧ್ಯಮ ಸಂಸ್ಥೆಗಳಿಗೆ ಕೊಂಚ ವಿನಾಯಿತಿ ಪ್ರಕಟಿಸಲಾಗಿದೆ. ರಾಷ್ಟ್ರೀಯ ಭದ್ರತಾ ನಿಯಮಗಳ ವ್ಯಾಪ್ತಿಯಲ್ಲಿ ನಿಷೇಧಕ್ಕೆ ಒಳಗಾ ಗದೇ ಇದ್ದರೆ, ನಿಗದಿತ ಸಂಸ್ಥೆ ಮತ್ತು ಸಿಬಂದಿಗೆ ಸಿಗುವ ಮಾಹಿತಿಯ ಪ್ರಸಾರಕ್ಕೆ ನಿಷೇಧ ಹೇರಲಾಗದು ಎಂದು ನಮೂದಿಸಲಾಗಿದೆ.
ಮಸೂದೆ ಅಂಗೀಕಾರ: ಭಾರತೀಯ ಅಂಚೆಯನ್ನು ನಾಗರಿಕ ಕೇಂದ್ರಿತ ಸೇವಾ ಜಾಲವಾಗಿ ಪರಿವರ್ತಿಸುವ ಉದ್ದೇಶವಿರುವ ಅಂಚೆ ಕಚೇರಿ ಕಾಯ್ದೆ ಸಂಸತ್ನಲ್ಲಿ ಅಂಗೀಕಾರಗೊಂಡಿದೆ. ಜತೆಗೆ ಪುದುಚೇರಿ, ಜಮ್ಮು – ಕಾಶ್ಮೀರದಲ್ಲಿ ಮಹಿಳಾ ಮೀಸಲಾತಿ ಕಾನೂನು ಅನ್ವಯಗೊಳ್ಳುವಂತೆ ಮಾಡುವ ಕೇಂದ್ರಾಡಳಿತ ಪ್ರದೇಶಗಳ ಸರಕಾರ ಮಸೂದೆ ಮತ್ತು ಜಮ್ಮು-ಕಾಶ್ಮೀರ ಮರುಸಂಘಟನೆ ಮಸೂದೆವೂ ಪಾಸ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…