ಜಿಎಸ್ಟಿ: ಇಡ್ಲಿ , ದೋಸೆ ಹಿಟ್ಟು ದರ ಇಳಿಕೆ
Team Udayavani, Sep 10, 2017, 6:40 AM IST
ಹೈದರಾಬಾದ್: ಇನ್ನು ಮುಂದೆ ಇಡ್ಲಿ, ದೋಸೆ ಹಿಟ್ಟು ದರ ಹೆಚ್ಚಾಗಲಿದೆ ಎಂಬ ಆತಂಕ ಬೇಡ. ಜತೆಗೆ ಸಣ್ಣ ಕಾರುಗಳ ದರ ಕೂಡ. ಏಕೆಂದರೆ, ಜಿಎಸ್ಟಿ ವಿಚಾರದಲ್ಲಿ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.
ಹೈದರಾಬಾದ್ನಲ್ಲಿ ಜೇಟ್ಲಿ ನೇತೃತ್ವ ದಲ್ಲಿ ಶನಿವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಹುರಿದ ಬೇಳೆ, ಇಡ್ಲಿ, ದೋಸೆ ಹಿಟ್ಟು, ರೈನ್ಕೋಟ್, ರಬ್ಬರ್ ಬ್ಯಾಂಡ್ ಸಹಿತ 30 ವಸ್ತುಗಳ ಜಿಎಸ್ಟಿ ದರವನ್ನು ಇಳಿಕೆ ಮಾಡಲಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ವತಿಯಿಂದ ಮಾರಾಟ ಮಾಡುವ ಖಾದಿಯನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಅಷ್ಟೇ ಅಲ್ಲ, ಜಿಎಸ್ಟಿ ಆರ್ ಫೈಲ್ ಮಾಡುವ ದಿನಾಂಕವನ್ನು ಮುಂದಿನ ತಿಂಗಳ (ಅಕ್ಟೋಬರ್ 31)ವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಸೆ. 10ರ ಗಡುವು ವಿಧಿಸಲಾಗಿತ್ತು. ಸಭೆ ಬಳಿಕ ಮಾತನಾಡಿದ ಸಚಿವ ಜೇಟ್ಲಿ, “ಜು. 1ರಿಂದ ಜಿಎಸ್ಟಿ ಜಾರಿಯಾದ ಬಳಿಕ ಇದುವರೆಗೆ ತೆರಿಗೆ ಸಂಗ್ರಹ ಉತ್ತಮವಾಗಿದೆ. ಶೇ. 70ರಷ್ಟು ಅರ್ಹ ತೆರಿಗೆದಾರರಿದ್ದು, ಅವರು 95 ಸಾವಿರ ಕೋಟಿ ರೂ.ಗಳ ರಿಟರ್ನ್ಸ್ ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದಾರೆ.
20 ಲಕ್ಷ ರೂ. ವಹಿವಾಟು ಇರುವ ಕುಶಲಕರ್ಮಿಗಳಿಗಿಲ್ಲ ಜಿಎಸ್ಟಿ: ಜಾನಪದ ಮತ್ತು ಕುಶಲಕರ್ಮಿಗಳಿಗೆ ಸಂತಸ ತರುವ ವಿಚಾರವೂ ಮಂಡಳಿ ಯಿಂದ ಹೊರಬಿದ್ದಿದೆ. ವಾರ್ಷಿಕ 20 ಲಕ್ಷ ರೂ. ವಹಿವಾಟು ಇರುವವರನ್ನು ಹೊಸ ತೆರಿಗೆಯಿಂದ ಹೊರ ಗಿಡಲಾಗಿದೆ. ಅಂತಾರಾಜ್ಯ ಮಟ್ಟ ದಲ್ಲಿನ ಕೆಲಸಗಳಿಗೆ ನೋಂದಣಿ ಮಾಡಿಸಿಕೊಳ್ಳುವ ಅಗತ್ಯ ಕೂಡ ಇಲ್ಲವೆಂದು ಹೇಳಿದೆ. ಸರಕಾರಿ ಕೆಲಸಗಳಿಗೆ ವಿಧಿಸಲಾಗಿರುವ ತೆರಿಗೆ ಪ್ರಮಾಣವನ್ನು ಶೇ. 18ರಿಂದ ಶೇ. 12ಕ್ಕೆ ಇಳಿಸಲಾಗಿದೆ. ಜಿಎಸ್ಟಿ ನೆಟ್ವರ್ಕ್ನ ತಾಂತ್ರಿಕ ವಿಚಾರಗಳನ್ನು ಪರಿಶೀಲಿಸಲು ಸಚಿವರ ಮಟ್ಟದ ಸಮಿತಿ ರಚಿಸಲಾಗಿದೆ. ಈ ಮೂಲಕ ಸದ್ಯ ಇರುವ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸಲಾಗು ತ್ತದೆ ಎಂದಿದ್ದಾರೆ ಪಶ್ಚಿಮ ಬಂಗಾಲ ಹಣಕಾಸು ಸಚಿವ ಅಮಿತ್ ಮಿತ್ರಾ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್ಗೆ ಮತಹಾಕಲಿ: ಯೋಗೇಂದ್ರ ಯಾದವ್
Manipal ಆಸ್ಪತ್ರೆಯ ಡಾ.ರಾಮದಾಸ್ ಪೈ ಬ್ಲಾಕ್; 161 ವಿಶೇಷ ಹಾಸಿಗೆಗಳ ವಾರ್ಡ್ ಸೇವೆ ಆರಂಭ
ರಜಿನಿಕಾಂತ್ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್ ನೋಟಿಸ್ ಕಳುಹಿಸಿದ ಇಳಯರಾಜ
Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ