ಜನಾದೇಶ ಒಪ್ಪಿದ್ದೇವೆ;ಚುನಾವಣೆ ನ್ಯಾಯಬದ್ಧ, ಮುಕ್ತ: ಕಾಂಗ್ರೆಸ್
Team Udayavani, Dec 18, 2017, 7:30 PM IST
ಅಹ್ಮದಾಬಾದ್ : ಗುಜರಾತ್ ಚುನಾವಣೆಯಲ್ಲಿ ಆಳುವ ಬಜೆಪಿ ಬಹುಮತವನ್ನು ಗಳಿಸಿರುವಂತೆಯೇ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಭರತ್ಸಿಂಗ್ ಸೋಳಂಕಿ ಅವರು “ಪಕ್ಷವು ಜನಾದೇಶವನ್ನು ಒಪ್ಪಿಕೊಂಡಿದೆ ಮತ್ತು ಈ ಸೋಲಿಗೆ ನಾನು ಹೊಣೆ ವಹಿಸುತ್ತೇನೆ’ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಮೇಲೆ ಪೂರ್ಣ ವಿಶ್ವಾಸ ಪ್ರಕಟಿಸಿರುವ ಸೋಳಂಕಿ, “ಚುನಾವಣೆಗಳು ನ್ಯಾಯಬದ್ಧ ಮತ್ತು ನ್ಯಾಯೋಚಿತವಾಗಿ ನಡೆದಿವೆ; ಆದರೂ ವಿದ್ಯುನ್ಮಾನ ಮತಯಂತ್ರಗಳು ಕೆಲವೆಡೆಗಳಲ್ಲಿ ಕೈಕೊಟ್ಟ ಬಗೆಗೆ ಎತ್ತಲಾಗಿರುವ ಪ್ರಶ್ನೆಗಳನ್ನು, ಸಂದೇಹಗಳನ್ನು ಚುನಾವಣಾ ಆಯೋಗ ಪರಿಹರಿಸಬೇಕು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸ ಅಚಲವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದಾರೆ.
ಬಿಜೆಪಿ ತಾನು ಈ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಿಕೊಂಡಿತ್ತು. ಆದರೆ ಅದು ಕಳೆದ 22 ವರ್ಷಗಳಲ್ಲೇ ಅತ್ಯಂತ ಕಡಿಮೆ ಸ್ಥಾನಗಳನ್ನು (99) ಗೆದ್ದಿದೆ ಎಂದು ಸೋಳಂಕಿ ಹೇಳಿದರು.