ಜ್ಞಾನವಾಪಿ ಪ್ರಕರಣ: ಶಿವಲಿಂಗದ ಕಾರ್ಬನ್ ಡೇಟಿಂಗ್: 14ಕ್ಕೆ ತೀರ್ಪು
Team Udayavani, Oct 11, 2022, 7:30 PM IST
ಲಕ್ನೋ: ಜ್ಞಾನವಾಪಿ ಮಸೀದಿಯ ವಝೂಖಾನಾದಲ್ಲಿ ಪತ್ತೆಯಾಗಿದೆ ಎನ್ನಲಾದ ಶಿವಲಿಂಗವನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕೇ, ಬೇಡವೇ ಎಂಬ ತೀರ್ಪನ್ನು ವಾರಾಣಸಿಯ ಜಿಲ್ಲಾ ನ್ಯಾಯಾಲಯ ಇದೇ ಶುಕ್ರವಾರ ನೀಡಲಿದೆ.
ಕೋರ್ಟ್ ಆದೇಶದಂತೆ ನಡೆದ ವಿಡಿಯೋ ಸರ್ವೇ ವೇಳೆ ವಝೂಖಾನಾದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಅದನ್ನು ಕಾರ್ಬನ್ ಡೇಟಿಂಗ್ಗೆ ಒಳಪಡಿಸಬೇಕು ಎನ್ನುವುದು ಹಿಂದೂ ಅರ್ಜಿದಾರರ ಆಗ್ರಹವಾಗಿದೆ.
ಆದರೆ, ಮಂಗಳವಾರದ ವಿಚಾರಣೆ ವೇಳೆ, “ಅದು ಶಿವಲಿಂಗವಲ್ಲ’ ಎಂದು ವಾದಿಸಿರುವ ಜ್ಞಾನವಾಪಿ ಮಸೀದಿ ಕಮಿಟಿ, “ಅದು ವಝೂಖಾನಾದ ಮಧ್ಯದಲ್ಲಿರುವ ಕಾರಂಜಿಯ ಭಾಗ’ ಎಂದು ಹೇಳಿ, ಕಾರ್ಬನ್ ಡೇಟಿಂಗ್ಗೆ ವಿರೋಧ ವ್ಯಕ್ತಪಡಿಸಿದೆ.
ಕೊನೆಗೆ ಕೋರ್ಟ್ ಅ.14ಕ್ಕೆ ವಿಚಾರಣೆ ಮುಂದೂಡಿದ್ದು, ಅಂದು ತೀರ್ಪು ಪ್ರಕಟವಾಗುವ ನಿರೀಕ್ಷೆಯಿದೆ.