ಮುಂಬಯಿಯಲ್ಲಿ ಜಡಿ ಮಳೆ, ಗುಡುಗು, ಸಿಡಿಲು, BMC ಕಟ್ಟೆಚ್ಚರ
Team Udayavani, Sep 19, 2017, 7:16 PM IST
ಮುಂಬಯಿ : ಮುಂಬಯಿ ಮಹಾ ನಗರದಲ್ಲಿ ಇಂದು ಮಂಗಳವಾರ ಮಧ್ಯಾಹ್ನದಿಂದ ಜಡಿ ಮಳೆ ಸುರಿಯಲು ಆರಂಭವಾಗಿದೆ. ಮಳೆಯ ಜತೆಗೆ ಗುಡುಗು, ಸಿಡಿಲಿನ ಆರ್ಭಟ ಕೂಡ ಮೇಳೈಸಿದ್ದು ಜನರಲ್ಲಿ ಅನಾಹುತಗಳ ಬಗ್ಗೆ ಭಯ, ಆತಂಕ ಆವರಿಸಿದೆ. ಬಿಎಂಸಿ ಮಹಾ ನಗರದ ಆದ್ಯಂತ ಕಟ್ಟೆಚ್ಚರ ವಹಿಸಿದೆ.
ಜಡಿ ಮಳೆ ಸುರಿಯುತ್ತಿರುವ ಹೊರತಾಗಿಯೂ ಎಲ್ಲಿಯ ಮಳೆ ನೀರು ತುಂಬಿಕೊಂಡ ಅಥವಾ ಸಾರಿಗೆ ಸೇವೆಗಳು ಬಾಧಿತವಾದ ವರದಿಗಳು ಇಲ್ಲ.
ಕಳೆದ ಆಗಸ್ಟ್ 29ರಂದು ಮುಂಬಯಿ ಮಹಾ ನಗರದಲ್ಲಿ 300 ಎಂಎಂ ಮಳೆ ಸುರಿದಿತ್ತು. ಪರಿಣಾಮವಾಗಿ ಸಾರಿಗೆ ಸೇವೆಗಳು ತೀವ್ರ ಅಡಚಣೆಗೆ ಗುರಿಯಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.
ಮೊನ್ನೆ ಭಾನುವಾರ ಹವಾಮಾನ ಇಲಾಖೆಯು ಮುಂಬಯಿ ಮತ್ತು ಕರಾವಳಿ ಕೊಂಕಣ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿತ್ತು. ಹಾಗಿದ್ದರೂ ನಿನ್ನೆ ಸೋಮವಾರ ದಿನ ಮಹಾನಗರದಲ್ಲಿ ಭಾರೀ ಮಳೆಯೇನೂ ಸುರಿದಿರಲಿಲ್ಲ.
ಇಂದು ಮಂಗಳವಾರ ಬೆಳಗಾಗುತ್ತಲೇ ಮುಂಬಯಿಗರು ದಟ್ಟನೆಯ ಮೋಡ ಕವಿದ ವಾತಾವರಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನದ ವೇಳೆಗೆ ಜಡಿ ಮಳೆ ಸುರಿಯಲಾರಂಭಿಸಿ ಅದರೊಂದಿಗೆ ಗುಡುಗು, ಸಿಡಿಲಿಯನ ಆರ್ಭಟ ಕೂಡ ಮೇಳೈಸಿತು.
ದಕ್ಷಿಣ ಮುಂಬಯಿ, ಬೊರಿವಲಿ, ಕಾಂದಿವಿಲಿ, ಅಂಧೇರಿ ಮತ್ತು ಭಾಂಡೂಪ್ ಸೇರಿದಂತೆ ಮಹಾನಗರದ ಹಲವು ಭಾಗಗಳಲ್ಲಿ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ
Panaji: ದಾರಿ ಮಧ್ಯೆ ಹೊತ್ತಿ ಉರಿದ ಟ್ರಕ್… 32 ಲಕ್ಷ ಮೌಲ್ಯದ ಸೊತ್ತು ನಷ್ಟ
Hamida Banu: ಭಾರತದ ಮೊದಲ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಗೂಗಲ್ ಡೂಡಲ್ ಗೌರವ
Loksabha; ಪ್ರಚಾರಕ್ಕೆ ಸಿಗದ ಹಣಕಾಸು ನೆರವು..: ಟಿಕೆಟ್ ಮರಳಿಸಿದ ಕಾಂಗ್ರೆಸ್ ಅಭ್ಯರ್ಥಿ
Mussoorie: ಭೀಕರ ರಸ್ತೆ ಅಪಘಾತ… 5 ವಿದ್ಯಾರ್ಥಿಗಳ ದುರಂತ ಅಂತ್ಯ, ಓರ್ವಳ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
ರಾಹುಲ್ ಸಾಮಾನ್ಯ ಜನರ ಕಷ್ಟ ಕೇಳಿದ್ದಾರೆ, ಆದರೆ ಮೋದಿ ಅರಮನೆಯಲ್ಲಿ ಕುಳಿತಿದ್ದಾರೆ:ಪ್ರಿಯಾಂಕಾ
Allu Arjun: ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿ ದಾಖಲೆ ಬರೆದ ʼಪುಷ್ಪ ಪುಷ್ಪʼ ಹಾಡು
ಗದಗ: ಸಂವಿಧಾನ ಧರ್ಮಗ್ರಂಥ ಎಂದವರು ಮೋದಿ- ಬೊಮ್ಮಾಯಿ
ಚಿನ್ನದ ನಾಡಿನ ಕಲಾವಿದೆ ವಿದ್ಯಾಶ್ರೀ ಪ್ರತಿಭೆ ಅನಾವರಣ-ನೃತ್ಯಗಂಗಾ ಪ್ರದರ್ಶನ
BJP ಕುರುಬ ಸಮುದಾಯಕ್ಕೆ ಒಂದೂ ಟಿಕೆಟ್ ಕೊಟ್ಟಿಲ್ಲ: ಸಿಎಂ ಸಿದ್ದರಾಮಯ್ಯ ಕಿಡಿ