ಪಾಕ್ ಪತಿಯಿಂದ ಹಿಂಸೆಗೆ ಗುರಿಯಾದ ಭಾರತೀಯ ಪತ್ನಿಗೆ ಸುಶ್ಮಾ ನೆರವು
Team Udayavani, Mar 21, 2017, 12:16 PM IST
ಹೊಸದಿಲ್ಲಿ : ಪಾಕಿಸ್ಥಾನದಲ್ಲಿ ತನ್ನ ಗಂಡ, ಅತ್ತೆ, ಮಾವನಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಗುರಿಯಾಗಿರುವ ಭಾರತದ ಹೈದರಾಬಾದಿನ ಮಹಿಳೆ, ತನ್ನನ್ನು ಈ ದಯನೀಯ ಸ್ಥಿತಿಯಿಂದ ಪಾರುಗೊಳಿಸುವಂತೆ ಕೋರಿ ಕಳುಹಿಸಿದ ವಿಡಿಯೋ ಸಂದೇಶಕ್ಕೆ ತತ್ಕ್ಷಣವೇ ಸ್ಪಂದಿಸಿರುವ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು ಇದೀಗ ಭಾರತೀಯ ಮಹಿಳೆಯನ್ನು ಭಾರತಕ್ಕೆ ಕರೆತರುತ್ತಿದ್ದಾರೆ.
ಮೊಹಮ್ಮದೀಯ ಬೇಗಂ ಗೆ 1996ರಲ್ಲಿ , ತಾನು ಒಮಾನ್ ನವನು ಎಂದು ಹೇಳಿಕೊಂಡಿದ್ದ ಮುಹಮ್ಮದ್ ಯೂನಿಸ್ ಎಂಬಾತನೊಂದಿಗೆ ಟೆಲಿಫೋನ್ ಮೂಲಕ ನಿಖಾಹ್ ಆಗಿತ್ತು. ಮದುವೆ ಆದೊಡನೆಯೇ ಮೊಹಮ್ಮದೀಯ ಬೇಗಂ, ಮಸ್ಕತ್ನಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಪತಿಯನ್ನು ಸೇರಿಕೊಂಡಳು. ಮದುವೆಯಾಗಿ 12 ವರ್ಷಗಳ ಬಳಿಕ, ತನ್ನ ಪತಿ ಯೂನಿಸ್ ಪಾಕಿಸ್ಥಾನದವನೆಂದು ಮೊಹಮ್ಮದೀಯಾಗೆ ಗೊತ್ತಾಗಿ ಆಕೆಗೆ ಆಘಾತವಾಯಿತು. ಅ ಸಂದರ್ಭದಲ್ಲಿ ಮಸ್ಕತ್ನಲ್ಲಿನ ತನ್ನ ಉದ್ಯೋಗವನ್ನು ಕಳೆದುಕೊಂಡಿದ್ದ ಆತ ಪಾಕಿಸ್ಥಾನಕ್ಕೆ ಮರಳಿದ.
ಯೂನಿಸ್ನಿಂದ ಐದು ಮಕ್ಕಳ ತಾಯಿಯಾದ ಮೊಹಮ್ಮದೀಯಳ ಕೊನೇ ಪುತ್ರ ಪಾಕಿಸ್ಥಾನದಲ್ಲಿ ಜನಿಸಿದ್ದಾನೆ. ಐದು ಮಂದಿ ಮಕ್ಕಳಲ್ಲಿ ಮೂವರು ಪುತ್ರರು, ಇಬ್ಬರು ಪುತ್ರಿಯರು. ಇಷ್ಟಾಗಿಯೂ ಯೂನಿಸ್ ಈಚೆಗೆ ಬೇರೊಬ್ಬ ಪಾಕ್ ಮಹಿಳೆಯನ್ನು ಮದುವೆಯಾಗಿದ್ದಾನೆ.
ಮೊಹಮ್ಮದೀಯಳ ತಂದೆ ಮೊಹಮ್ಮದ್ ಅಕ್ಬರ್ ಭಾರತದ ಹೈದರಾಬಾದ್ನಲ್ಲಿ ಸೈಕಲ್ ಮೆಕ್ಯಾನಿಕ್. ತಾಯಿ ಹಜಾರಾ ಬೇಗಂ ಗೆ ಮನೆವಾರ್ತೆ.
ಪಾಕಿಸ್ಥಾನದಲ್ಲಿ ತನ್ನ ಗಂಡ,ಅತ್ತೆ ಮತ್ತು ಮಾವ ತನಗೆ ನೀಡುತ್ತಿರುವ ಹಿಂಸೆ, ಯಾತನೆಯನ್ನು ತಡೆಯಲಾರದೆ ಮಗಳು ಕಳುಹಿಸಿದ್ದ ವಿಡಿಯೋ ಸಂದೇಶವನ್ನು ಮೊಹಮ್ಮದ್ ಅಕ್ಬರ್ ಅವರು ನೇರವಾಗಿ ಸುಶ್ಮಾ ಸ್ವರಾಜ್ ಅವರಿಗೆ ಕಳುಹಿಸಿ ನೆರವಿನ ಹಸ್ತ ನೀಡುವಂತೆ ಯಾಚಿಸಿದರು. ಸುಶ್ಮಾ ಸ್ವರಾಜ್ ಕೂಡಲೇ ಕಾರ್ಯ ಪ್ರವೃತ್ತರಾಗಿ ಇದೀಗ ಮೊಹಮ್ಮದೀಯಾ ಭಾರತಕ್ಕೆ ಮರಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮದುವೆಯಾದ ಬಳಿಕದ ಕಳೆದ 21 ವರ್ಷಗಳಲ್ಲಿ ಮೊಹಮ್ಮದೀಯ ಬೇಗಂ ಭಾರತಕ್ಕೆ ಬಂದದ್ದು ಒಂದೇ ಒಂದು ಬಾರಿ. 2012ರಲ್ಲಿ ಆಕೆ ಹೈದರಾಬಾದಿಗೆ ಬಂದು ತಂದೆ ತಾಯಿಯನ್ನು ಕಂಡಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
MUST WATCH
ಹೊಸ ಸೇರ್ಪಡೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ