ಎಂಜಿಆರ್ ಮಾದರಿ ಆಡಳಿತ ಕೊಡುವೆ: ಸೂಪರ್ಸ್ಟಾರ್ ರಜನಿಕಾಂತ್
Team Udayavani, Mar 6, 2018, 7:30 AM IST
ಚೆನ್ನೈ: “ನಾನು ಎಂ.ಜಿ. ರಾಮಚಂದ್ರನ್ ಅಲ್ಲ. ಆದರೆ ಅವರಂತೆ ಬಡವರ ಪರವಾಗಿರುವ ಆಡಳಿತ ನೀಡಬಲ್ಲೆ’.
ಹೀಗೆಂದು ಘೋಷಣೆ ಮಾಡಿದ್ದು ತಮಿಳು ಸೂಪರ್ಸ್ಟಾರ್ ರಜನಿಕಾಂತ್. ಚೆನ್ನೈನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಜಿ.ರಾಮಚಂದ್ರನ್ರ ಪುತ್ಥಳಿ ಅನಾವರಣಗೊಳಿಸಿ ಅವರು ಮಾತನಾಡಿದರು. ಇನ್ನು ಒಂದು ಸಾವಿರ ವರ್ಷ ಕಳೆದರೂ ತಮಿಳುನಾಡಿನಲ್ಲಿ ಅವರನ್ನು ಮೀರಿಸುವವರು ಇಲ್ಲ. ನಾನೂ ಅದಕ್ಕೆ ಹೊರತಾಗಿಲ್ಲ. ನಾನು ಎಂಜಿಆರ್ ಎಂದರೆ ಅದು ಹಾಸ್ಯಾಸ್ಪದವಾದೀತು ಎಂದು ಹೇಳಿದರು. ಎಂ.ಜಿ.ರಾಮಚಂದ್ರನ್ ತಮಿಳು ಚಿತ್ರರಂಗದಿಂದ ರಾಜಕೀಯ ಪ್ರವೇಶ ಮಾಡಿ ಯಶಸ್ಸು ಕಂಡಂತೆ ಇತರರಿಗೆ ಆ ಸಾಧನೆ ಮಾಡಲು ಸಾಧ್ಯವಿಲ್ಲವೆಂಬ ಆಡಳಿತಾರೂಢ ಎಐಎಡಿಎಂಕೆ ನಾಯಕರು ಮಾಡಿದ ಟೀಕೆಗೆ ಪ್ರತಿಯಾಗಿ ತಲೈವಾ ಈ ಮಾತುಗಳನ್ನಾಡಿದ್ದಾರೆ. ಬಡವರಿಗೆ ಅನುಕೂಲವಾಗುವ ಸರಕಾರ ಮಾಡುವ ಕನಸು ತಮ್ಮದು ಎಂದಿದ್ದಾರೆ. “ಈಗಿನ ಸರಕಾರ ಸರಿಯಾಗಿ ತನ್ನ ಕರ್ತವ್ಯ ಮಾಡುತ್ತಿಲ್ಲ. ನನಗೆ 67 ವರ್ಷ ವಯಸ್ಸಾಯಿತು. ಜಯಲಲಿತಾ ಅವರು ಇಲ್ಲ. ಕರುಣಾನಿಧಿ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ತಮಿಳುನಾಡಿನಲ್ಲಿ ಪ್ರಮುಖ ನಾಯಕನ ಕೊರತೆ ಇದೆ. ನಾಯಕರು ಇಲ್ಲವೆಂಬ ಕೊರತೆ ನೀಗಲು ಬಂದಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.
ಬ್ಯಾನರ್ಗೆ ಆಕ್ಷೇಪ: ತಮ್ಮ ಬೆಂಬಲಿಗರು ಬ್ಯಾನರ್ಗಳನ್ನು ಕಟ್ಟಿ, ಸಾರ್ವಜನಿಕರಿಗೆ ಸಿಹಿ ಹಂಚಿದಕ್ಕೆ ಆಕ್ಷೇಪಿಸಿದ ಸೂಪರ್ಸ್ಟಾರ್, ಇದು ಮದ್ರಾಸ್ ಹೈಕೋರ್ಟ್ ಆದೇಶದ ಉಲ್ಲಂಘನೆ. ಮುಂದೆ ಹೀಗೆ ಮಾಡಬೇಡಿ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು