ರೋಗಿಯ ವೈರ್ಲೆಸ್ ತಪಾಸಣೆ!
Team Udayavani, Jun 5, 2017, 3:45 AM IST
ಕೋಲ್ಕತಾ: ಇಲ್ಲಿನ ಖರಗಪುರ ಐಐಟಿ ಸಂಸ್ಥೆ ವೈದ್ಯಕೀಯ ಕ್ಷೇತ್ರಕ್ಕೆ ವರದಾನ ಎನ್ನುವಂತಹ ಸಂಶೋಧನೆಯನ್ನು ಮಾಡಿದೆ. ಆ್ಯಂಬುಲೆನ್ಸ್ ನಲ್ಲಿ ಸಾಗಿಸಲ್ಪಡುತ್ತಿರುವ ರೋಗಿಯ ಪೂರ್ಣ ಚಿತ್ರಣವನ್ನು ಪಡೆಯುವ, ಅವರ ಆರೋಗ್ಯದ ಪರಿಶೀಲನೆ ನಡೆಸುವ ಸಾಮರ್ಥ್ಯ ವಿರುವ ಆ್ಯಂಬುಸೆನ್ಸ್ ಎಂಬ ವೈರ್ಲೆಸ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಇದರ ಮೂಲಕ ವೈದ್ಯರು ಆಸ್ಪತ್ರೆಯಲ್ಲಿ ಕುಳಿತೇ ಯಾವುದೇ ಉಪಕರಣದ ಸಹಾಯವಿಲ್ಲದೇ ರೋಗಿಯ ಇಸಿಜಿ, ರಕ್ತದೊತ್ತಡ, ಹೃದಯ ಬಡಿತ, ಉಷ್ಣತೆಯ ಪರಿಶೀಲನೆ ಮಾಡಬಹುದು. ಇದರ ಪರೀಕ್ಷೆಯೂ ಯಶಸ್ವಿಯಾಗಿದೆ.
ಈವರೆಗೆ ಟೆಲಿಮೆಡಿಸಿನ್ ಎಂಬ ತಂತ್ರ ಜ್ಞಾನವಿತ್ತು. ಇದರ ಮೂಲಕ ವೈದ್ಯರು ಆ್ಯಂಬು ಲೆನ್ಸ್ನಲ್ಲಿರುವ ರೋಗಿಗಳನ್ನು ವೀಕ್ಷಿಸ ಬಹುದಿತ್ತು. ಆದರೆ ಆರೋಗ್ಯ ವಿಚಾರಣೆ ಸಾಧ್ಯವಿರಲಿಲ್ಲ. ಖರಗಪುರ ಐಐಟಿಯಲ್ಲಿ ಅಭಿವೃದ್ಧಿಪಡಿಸಿರುವ ಆ್ಯಂಬುಸೆನ್ಸ್ ಮೂಲಕ ಆ್ಯಂಬುಲೆನ್ಸ್ ನಲ್ಲಿರುವ ರೋಗಿಯ ಬಗ್ಗೆ ಪೂರ್ಣ ತಪಾ ಸಣೆ ಮಾಡಬಹುದು. ಮಾಹಿತಿ ರವಾನೆಗೆ ಅಂತರ್ಜಾಲದ ನೆರವು ಪಡೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಆಫ್ಲೈನ್ನಲ್ಲೂ ಇದು ಸಾಧ್ಯವಿದೆ ಎಂದು ಪ್ರೊ.ಸುದೀಪ್ ಮಿಶ್ರಾ ತಿಳಿಸಿದ್ದಾರೆ.
ಆ್ಯಂಬುಸೆನ್ಸ್ ಕಾರ್ಯಾಚರಣೆ ಹೇಗೆ?: ಆ್ಯಂಬು ಲೆನ್ಸ್ನಲ್ಲಿ ವೈರ್ಲೆಸ್ ಸೆನ್ಸರ್ ಅಳವಡಿ ಸಿರಲಾಗುತ್ತದೆ. ಇದನ್ನು “ಆ್ಯಂಬುಸೆನ್ಸ್’ ಎನ್ನುತ್ತಾರೆ. ಇದು ದೂರದಲ್ಲಿರುವ ವೈದ್ಯರು ರೋಗಿಯ ತಪಾಸಣೆ ನಡೆಸುವ ತಂತ್ರಜ್ಞಾನ ಹೊಂದಿರುತ್ತದೆ. ವೈರ್ಲೆಸ್ ಸೆನ್ಸರ್ಗಳು, ವೈಫೈ, ಕೌಡ್ ತಂತ್ರಜ್ಞಾನಗಳ ಮೂಲಕ ಈ ಪರಿಶೀಲನೆ ಮಾಡಬಹುದಾಗಿದೆ. ಆದರೆ, ಆ್ಯಂಬುಲೆನ್ಸ್, ವೈದ್ಯರು, ಆಸ್ಪತ್ರೆ ಎಲ್ಲರ ಬಳಿಯೂ ಅಂತರ್ಜಾಲ ಸಂಪರ್ಕವಿರುವ ಲ್ಯಾಪ್ಟಾಪ್ ಅಥವಾ ಟ್ಯಾಬ್ಲೆಟ್ಗಳು ಇರಬೇಕಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Goa ;ಬೀಚ್ ನಲ್ಲಿ ಸಿಡಿಲಿನ ಆಘಾತಕ್ಕೆ ಕೇರಳದ ಪ್ರವಾಸಿಗ ಮೃತ್ಯು
AAP Leader ಬಿಭವ್ ಕುಮಾರ್ ನನ್ನ ಕೆನ್ನೆಗೆ ಹೊಡೆದು, ಎದೆಗೆ ಒದ್ದರು..; ಸ್ವಾತಿ ಮಲಿವಾಲ್
PM Modi ಪತ್ರಿಕಾಗೋಷ್ಠಿ ಯಾಕೆ ನಡೆಸುವುದಿಲ್ಲ? ಉತ್ತರಿಸಿದ ಪ್ರಧಾನಿ ಮೋದಿ
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ
Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್