ಎಸ್ ಪಿಬಿ v/s ಇಳಯರಾಜ; ಹಾಡಿನ ಮೋಡಿಗೆ ಹಕ್ಕುದಾರ ಯಾರು ?


Team Udayavani, Mar 20, 2017, 2:30 AM IST

SPB-Ilayaraja-600.jpg

ಚೆನ್ನೈ: ದಕ್ಷಿಣ ಭಾರತದ ಇಬ್ಬರು ಸಂಗೀತ ದಿಗ್ಗಜರ ನಡುವೆ ಕಾಪಿರೈಟ್‌ ಸಮರ ಶುರುವಾಗಿದೆ. ತನ್ನ ಒಪ್ಪಿಗೆ ಇಲ್ಲದೆ, ತಾನು ಸಂಯೋಜನೆ ಮಾಡಿದ ಹಾಡುಗಳನ್ನು ಯಾವುದೇ ಕಾರ್ಯಕ್ರಮಗಳಲ್ಲಿ ಹಾಡುವಂತಿಲ್ಲ  ಎಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು, ಖ್ಯಾತ ಹಾಡುಗಾರ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರಿಗೆ ನೋಟಿಸ್‌ ನೀಡಿದ್ದಾರೆ. ಒಂದು ವೇಳೆ ಹಾಡಿದ್ದೇ ಆದರೆ, ಅದು ಕೃತಿಸ್ವಾಮ್ಯ ಕಾಯ್ದೆಯ ಉಲ್ಲಂಘನೆಯಾಗುತ್ತದೆ. ಆಗ ಕಾನೂನು ಪ್ರಕಾರ ಭಾರೀ ಮೊತ್ತದ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಇಳಯರಾಜ ನೋಟಿಸಿನಲ್ಲಿ ಎಚ್ಚರಿಸಿದ್ದಾರೆ. ಈ ಮಾಹಿತಿಯನ್ನು ಡಾ| ಎಸ್‌ಪಿಬಿ ಅವರೇ ಫೇಸ್‌ಬುಕ್‌ನಲ್ಲಿ ಬಹಿರಂಗಪಡಿಸಿದ್ದಾರೆ. ಹಿನ್ನೆಲೆ ಗಾಯನ ಕ್ಷೇತ್ರದಲ್ಲಿ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಎಸ್‌ಪಿಬಿ ಮತ್ತು ತಂಡ ಸದ್ಯ ಅಮೆರಿಕದ ಪ್ರಮುಖ ನಗರಗಳಲ್ಲಿ ‘ಎಸ್‌ಪಿಬಿ ಅಟ್‌ 50’ ಎಂಬ ಶಿರೋನಾಮೆ ಅಡಿಯಲ್ಲಿ ಕಾರ್ಯಕ್ರಮ ನೀಡುತ್ತಿದೆ. 2016ರ ಆಗಸ್ಟ್‌ನಲ್ಲಿ ಶುರುವಾಗಿರುವ ಈ ಕಾರ್ಯಕ್ರಮ ಈಗಾಗಲೇ ಹಲವಾರು ದೇಶಗಳನ್ನು ಮುಗಿಸಿದೆ. ಸದ್ಯ ಅಮೆರಿಕದತ್ತ ಹೊರಟಿದ್ದು, ಅಲ್ಲಿಗೆ ತಲುಪುವ ಮೊದಲೇ ಈ ನೋಟಿಸ್‌ ಜಾರಿಯಾಗಿದೆ.

ಡಾ| ಎಸ್‌ಪಿಬಿ ಬರೆದುಕೊಂಡಿರುವ ಪ್ರಕಾರ ‘ಸಂಗೀತ ಕಾರ್ಯಕ್ರಮಗಳಲ್ಲಿ ಇಳಯರಾಜ ರಾಗ ಸಂಯೋಜನೆ ಮಾಡಿದ ಗೀತೆಗಳನ್ನು ಅನುಮತಿ ಇಲ್ಲದೆ ಹಾಡುತ್ತಿರುವುದಕ್ಕೆ ಅವರು ನನಗೆ (ಎಸ್‌ಪಿಬಿ), ಗಾಯಕಿ ಕೆ.ಎಸ್‌. ಚಿತ್ರಾ, ತನ್ನ ಪುತ್ರ ಚರಣ್‌ ಹಾಗೂ ವಿವಿಧ ನಗರಗಳಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸುತ್ತಿರುವ ಸಂಘಟಕರಿಗೆ ನೋಟಿಸ್‌ ಕಳುಹಿಸಿಕೊಟ್ಟಿದ್ದಾರೆ’ ಎಂದಿದ್ದಾರೆ. ಸದ್ಯ ಈ ವಿಚಾರದ ಬಗ್ಗೆ ಹೆಚ್ಚಿನ ಚರ್ಚೆ ಮಾಡದಂತೆಯೂ ಮನವಿ ಮಾಡಿದ್ದಾರೆ. ಭಾರತಕ್ಕೆ ಬಂದ ಬಳಿಕ ಈ ಬಗ್ಗೆ  ಮಾತನಾಡುವುದಾಗಿ ಹಿರಿಯ ಗಾಯಕ ಬರೆದುಕೊಂಡಿದ್ದಾರೆ.

‘ಈ ಹಿಂದೆ ಇಳಯರಾಜ ಸರ್‌ ಸಂಯೋಜಿಸಿದ ಹಾಡುಗಳನ್ನು ಹಾಡುವಾಗ ಸಮಸ್ಯೆ ಉಂಟಾಗಿರಲಿಲ್ಲ. ಇದ್ದಕ್ಕಿದ್ದಂತೆ ನೋಟಿಸ್‌ ಕಳುಹಿಸಲು ಕಾರಣವೇನೆಂದು ತಿಳಿಯುತ್ತಿಲ್ಲ. ಅದೇನೇ ಇದ್ದರೂ ಇಂದಿನಿಂದ ನಮ್ಮ ತಂಡ ಇಳಯರಾಜ ಸಂಯೋಜಿಸಿದ ಗೀತೆಗಳನ್ನು ಹಾಡದಿರಲು ತೀರ್ಮಾನಿಸಿದೆ. ಆದರೆ ಅಮೆರಿಕದಲ್ಲಿ ನಮ್ಮ ಕಾರ್ಯಕ್ರಮಗಳು ಮುಂದುವರಿಯಲಿವೆ’ ಎಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ ರಷ್ಯಾ, ಮಲೇಷ್ಯಾ, ಶ್ರೀಲಂಕಾಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಇಳಯರಾಜ ಸಂಗೀತ ನಿರ್ದೇಶನ ಮಾಡಿದ್ದ ಗೀತೆಗಳನ್ನು ಹಾಡಲಾಗಿತ್ತು ಎಂದು ಎಸ್‌ಪಿಬಿ ಬರೆದುಕೊಂಡಿದ್ದಾರೆ.

ಗಮನಾರ್ಹ ಅಂಶವೆಂದರೆ ಹಿಂದಿನ ಹಲವು ಸಂದರ್ಭ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಗಾಯಕ ಎಸ್‌ಪಿಬಿ ಅವರೇ ಇಳಯರಾಜ ಸಂಗೀತ ನಿರ್ದೇಶನವನ್ನು ಬಹಿರಂಗವಾಗಿ ಕೊಂಡಾಡಿದ್ದರು. ಇಳಯರಾಜ ಅವರಂಥ ಸಂಗೀತ ನಿರ್ದೇಶಕರಿಂದಲೇ ತಾನು ವೇದಿಕೆ ಮೇಲೆ ಇರುವುದಾಗಿ ಬಾಲಸುಬ್ರಹ್ಮಣ್ಯಂ ಹೇಳಿಕೊಂಡಿದ್ದರು. ಜತೆಗೆ ಇವರಿಬ್ಬರು ಪ್ರಸಿದ್ಧಿಗೆ ಬರುವ ಮುಂಚಿನಿಂದಲೂ ಗಳಸ್ಯ-ಕಂಠಸ್ಯ ಸ್ನೇಹಿತರು.

ಸಂಗೀತಗಾರನಿಗೆ ಏನೂ ಸಿಗುವುದಿಲ್ಲ: ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿದ ಇಳಯರಾಜ ಅವರ ಕಾನೂನು ಸಲಹೆಗಾರ ಇ. ಪ್ರದೀಪ್‌ಕುಮಾರ್‌, ‘ಬಹಳಷ್ಟು ಮಂದಿ ಈ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಇಳಯರಾಜ 35 ವರ್ಷಗಳ ಕಾಲ ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರಯತ್ನ ನಡೆಸಿದ್ದಾರೆ. ಅನುಮತಿ ಇಲ್ಲದೆ ಅವರು ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡಬಾರದೆಂದು ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ಹೇಳಿದ್ದರು. ಗೌರವಧನ ನೀಡಿ, ಬಳಿಕ ಹಾಡುಗಳ ಬಳಕೆ ಮಾಡಬಹುದು ಎಂದಿದ್ದರು. ಆದರೆ ಎಸ್‌ಪಿಬಿ ಆ ರೀತಿ ಮಾಡದೆ ನೋಟಿಸ್‌ ತಂದುಕೊಂಡಿದ್ದಾರೆ’ ಎಂದರು.

ಇದು ಮೊದಲಲ್ಲ: ಇಳಯರಾಜ ಅವರು 2015ರಲ್ಲಿಯೂ ಐದು ಸಂಗೀತ ಕಂಪೆನಿ ಮತ್ತು ರೇಡಿಯೋಗಳ ವಿರುದ್ಧ ಇದೇ ರೀತಿಯಾಗಿ ಮನವಿ ಮಾಡಿಕೊಂಡಿದ್ದರು. ಜತೆಗೆ ಮದ್ರಾಸ್‌ ಹೈಕೋರ್ಟು ಕೂಡ ಐದು ಆಡಿಯೋ ಕಂಪೆನಿಗಳಿಗೆ ಇಳಯರಾಜ ಅನುಮತಿ ಇಲ್ಲದೆ ಅವರ ರಾಗ ಸಂಯೋಜನೆ ಮಾಡಿದ ಹಾಡುಗಳನ್ನು ಮಾರಾಟ ಮಾಡದಂತೆ ಸೂಚಿಸಿತ್ತು.

ಎರಡು ರೀತಿಯ ಕೃತಿ ಸ್ವಾಮ್ಯ ಹಕ್ಕುಗಳಿವೆ
ಸಂಗೀತ ನೀಡಿಕೆ

ಗೀತೆ ರಾಗ ಸಂಯೋಜನೆ ಮಾಡಿದರೆ ಅದರ ಹಕ್ಕು ಸಂಗೀತಗಾರನಿಗೆ ಇರುತ್ತದೆ.

ಧ್ವನಿ ಮುದ್ರಣ (ಸೌಂಡ್‌ ರೆಕಾರ್ಡಿಂಗ್‌)
ವಿಶೇಷ ರೀತಿಯ ಧ್ವನಿ ಮುದ್ರಣ ಮಾಡಿದರೆ ಅದು ಸೌಂಡ್‌ ರೆಕಾರ್ಡ್‌ ಮಾಡಿದವರಿಗೆ ಇರುತ್ತದೆ.

– ಒಪ್ಪಿಗೆ ಇಲ್ಲದೇ ತಮ್ಮ ರಾಗ ಸಂಯೋಜನೆಯ ಗೀತೆ ಹಾಡುವಂತಿಲ್ಲ

– ಒಂದು ವೇಳೆ ಹಾಡಿದ್ದೇ ಆದಲ್ಲಿ ಅದು ಕಾಪಿರೈಟ್‌ನ ಸ್ಪಷ್ಟ ಉಲ್ಲಂಘನೆ

– ಭಾರೀ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ ಎಂಬ ಎಚ್ಚರಿಕೆ

– ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ ಗಾಯಕ ಎಸ್‌.ಪಿ. ಬಾಲಸುಬ್ರಮಣ್ಯಂ

ಟಾಪ್ ನ್ಯೂಸ್

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.