ಅಖಾಡವೇ ಇಲ್ಲಿ ಕೋರ್ಟ್! ಸಮಸ್ಯೆ ಬಗೆಹರಿಯಬೇಕೆಂದರೆ ದಂಗಲ್ ಕಡ್ಡಾಯ
Team Udayavani, Apr 18, 2018, 8:45 AM IST
ನೋಯ್ಡಾ: ಎರಡು ವ್ಯಕ್ತಿಗಳ ಮಧ್ಯೆ ವಿವಾದ ಉಂಟಾದರೆ ಇಲ್ಲಿ ಕೋರ್ಟು ಕಚೇರಿ ಅಲೆಯುವುದಿಲ್ಲ. ಪಂಚಾಯತ್ ಮುಖಂಡರ ಎದುರು ಕೂತು ಸಮಸ್ಯೆ ಹೇಳಿಕೊಂಡು, ಅವರ ಮೂಲಕ ಸಮಸ್ಯೆ ಪರಿಹರಿಸಿ ಕೊಳ್ಳುವುದೂ ಇಲ್ಲ. ಬದಲಿಗೆ ಗ್ರಾಮದಲ್ಲಿ ಕುಸ್ತಿ ಅಖಾಡವೇ ಇವರಿಗೆ ಕೋರ್ಟ್. ಪರಸ್ಪರ ಅಖಾಡಕ್ಕಿಳಿದು ಕುಸ್ತಿ ಆಡುತ್ತಾರೆ. ಕುಸ್ತಿಯಲ್ಲಿ ಸೋತವರು ವಿವಾದದಲ್ಲೂ ಸೋತಂತೆ. ಗೆದ್ದವರು ವಿಜಯದ ನಗೆ ಬೀರುತ್ತಾರೆ.
ಇದು ನೋಯ್ಡಾದ ಸರ್ಫಾಬಾದ್ ಎಂಬ ಗ್ರಾಮದ ಕಥೆ. ಅಚ್ಚರಿಯೆಂದರೆ ಈ ಗ್ರಾಮದಲ್ಲಿ ಕನಿಷ್ಠ 200ರಿಂದ 250ಕ್ಕೂ ಹೆಚ್ಚು ಹವ್ಯಾಸಿ ಹಾಗೂ ವೃತ್ತಿಪರ ಕುಸ್ತಿಪಟುಗಳಿದ್ದಾರೆ. ಪ್ರತಿ ಆಗಸ್ಟ್ನಲ್ಲಿ ಇಲ್ಲಿ ದಂಗಲ್ ಸೀಸನ್ ನಡೆಯುತ್ತದೆ. ಆಗಂತೂ ಉತ್ತರ ಪ್ರದೇಶ ಹಾಗೂ ಹರ್ಯಾಣದಿಂದ ಇಲ್ಲಿಗೆ ಜನರು ಆಗಮಿಸಿ ಕುಸ್ತಿ ಪಟುಗಳ ಪಟ್ಟಿನ ಮೋಜು ನೋಡಿ ಮನೋರಂಜನೆ ಪಡೆಯುತ್ತಾರೆ. ಕುಸ್ತಿಗೆ ಇಲ್ಲಿ 275 ವರ್ಷಗಳ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆಧುನೀಕರಣ ಈ ಹಳ್ಳಿಗೂ ತಟ್ಟಿದೆ. ಇಲ್ಲಿ ಐಷಾ ರಾಮಿ ಕಾರುಗಳು ಬಂದಿವೆ. ಯುವಕರು ನಗರದ ವೈಟ್ ಕಾಲರ್ ಉದ್ಯೋಗಗಳಿಗೆ ಮರುಳಾಗುವ ಆತಂಕ ಎದುರಾಗಿದೆ. ಈಗಲೂ ಗ್ರಾಮದಲ್ಲಿ ಹಲವು ಕುಸ್ತಿ ಅಖಾಡಗಳಿವೆ. ನೂರಕ್ಕೂ ಹೆಚ್ಚು ಜನರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈ ಪೈಕಿ ಹಲವರು ನ್ಯಾಷನಲ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ನಲ್ಲಿ ಪ್ರತಿನಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ