ಪ್ರಪ್ರಥಮ ಜಂಟಿ ಸೇನಾ ಕವಾಯತಿನಲ್ಲಿ ಭಾಗವಹಿಸಲಿವೆ ಭಾರತ – ಪಾಕಿಸ್ಥಾನ
Team Udayavani, Apr 26, 2018, 7:20 PM IST
ಹೊಸದಿಲ್ಲಿ : 1947ರ ಬಳಿಕ ಇದೇ ಮೊದಲ ಬಾರಿಗೆ ವಿಭಿನ್ನ ದೇಶಗಳಾಗಿ ಮೂಡಿ ಬಂದಿರುವ ಭಾರತ ಮತ್ತು ಪಾಕಿಸ್ಥಾನ ಈ ವರ್ಷಾಂತ್ಯ ಜಂಟಿ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ.
ರಶ್ಯವು ಇದೇ ವರ್ಷ ಸೆಪ್ಟಂಬರ್ನಲ್ಲಿ ನಡೆಸಲಿರುವ ಶಾಂತಿ ಅಭಿಯಾನದ ಭಾಗವಾಗಿ ಈ ಸೇನಾ ಕವಾಯತು ನಡೆಯಲಿದ್ದು ಶಾಂಘೈ ಕೋ-ಅಪರೇಶನ್ ಆರ್ಗನೈಸೇಶನ್ (ಎಸ್ಸಿಓ) ಅಡಿ ಇತರ ಹಲವು ಭಾಗೀದಾರರೊಂದಿಗೆ ಇದು ನಡೆಯಲಿದೆ.
ಭಾರತವು 2018ರ ಶಾಂತಿ ಅಭಿಯಾನದಲ್ಲಿ ಭಾಗವಹಿಸುವುದೆಂದು ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೀಜಿಂಗ್ ನಲ್ಲಿ ನಡೆದಿರುವ 15ನೇ ಎಸ್ಸಿಓ ರಕ್ಷಣಾ ಸಚಿವರ ಸಭೆಯಲ್ಲಿ ಮಾಡಿರುವ ತಮ್ಮ ಭಾಷಣದಲ್ಲಿ ಪ್ರಕಟಿಸಿದ್ದಾರೆ.
ಹಾಗಿದ್ದರೂ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಸೇನಾ ಕವಾಯಿತಿಗೆ ಸಂಬಂಧಿಸಿಯಾಗಲೀ ಭಯೋತ್ಪಾದಕರಿಗೆ ದೊರಕುತ್ತಿರುವ ಮುಂದುವರಿರಿದ ನೆರವಿಗೆ ಸಂಬಂಧಿಸಿಯಾಗಲೀ ನೇರವಾಗಿ ಪಾಕಿಸ್ಥಾನವನ್ನು ಉಲ್ಲೇಖೀಸಿಲ್ಲ.
ಒಟ್ಟಿನಲ್ಲಿ ದಕ್ಷಿಣ ಏಶ್ಯದ ಅಣ್ವಸ್ತ್ರ ಸಜ್ಜಿತ ಎರಡು ದೇಶಗಳಾಗಿರುವ ಭಾರತ ಮತ್ತು ಪಾಕಿಸ್ಥಾನ ಇದೇ ಮೊದಲ ಬಾರಿಗೆ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳುತ್ತವೆ. ಎರಡೂ ದೇಶಗಳು ಕಳೆದ ವರ್ಷ ಎಸ್ಸಿಓ ಪೂರ್ಣ ಪ್ರಮಾಣದ ಸದಸ್ಯ ದೇಶಗಳಾಗಿವೆ. ರಶ್ಯ, ಚೀನ ಸೇರಿದಂತೆ ಎಲ್ಲ ಎಸ್ಸಿಓ ಸದಸ್ಯ ದೇಶಗಳು ಈ ಜಂಟಿ ಸೇನಾ ಕವಾಯತಿನಲ್ಲಿ ಪಾಲ್ಗೊಳ್ಳಲಿವೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ