ರಸ್ತೆ ನಿಯಮ ಉಲ್ಲಂಘಿಸಿದ್ರೆ ಇನ್ನು ವಿಮೆ ಮೊತ್ತ ದುಪ್ಪಟ್ಟು?
ವಿಮೆ ದರವೂ ಹೆಚ್ಚಳ ಮಾಡುವಂತೆ ಐಆರ್ಡಿಎಐ ಮನವಿ
Team Udayavani, Sep 7, 2019, 7:45 PM IST
ಪ್ರಥಮವಾಗಿ ದಿಲ್ಲಿಯಲ್ಲಿ ಜಾರಿಗೊಳಿಸಲು ಯೋಜನೆ
ಹೊಸದಿಲ್ಲಿ: ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಇದೀಗ ಭರ್ಜರಿ ದಂಡ ವಿಧಿಸುವುದು ಗೊತ್ತೇ ಇದೆ. ಇದರಿಂದಾಗಿ ದೇಶಾದ್ಯಂತ ಕಳೆದೆರಡು ದಿನಗಳಲ್ಲಿ ಸಂಗ್ರಹಿಸಿದ ದಂಡದ ಮೊತ್ತ ಕೋಟಿ ರೂ. ದಾಟಿದೆ.
ಇದಷ್ಟೇ ಅಲ್ಲ, ನಿಯಮ ಉಲ್ಲಂಘಿಸಿದರೆ ಇನ್ನು ವಾಹನದ ವಿಮೆ ಮೊತ್ತ ದುಪ್ಪಟ್ಟಾಗುವ ಸಾಧ್ಯತೆ ದಟ್ಟವಾಗಿದೆ. ಇಂಥದ್ದೊಂದು ವಿನೂತನ ಪ್ರಸ್ತಾವನೆಯನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಮಾಡಿದೆ. ದೇಶದಲ್ಲೇ ಮೊದಲ ಬಾರಿಗೆ ದಿಲ್ಲಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲು ವಿಮಾ ಕಂಪೆನಿಗಳು ಉದ್ದೇಶಿಸಿವೆ. ಅದರಂತೆ ಐಆರ್ಡಿಎಐ ಸೆ.6ರಂದು ಘೋಷಣೆಯನ್ನೂ ಹೊರಡಿಸಿದೆ.
ವಿಮೆ ಮೊತ್ತ ಹೆಚ್ಚಳ ಕುರಿತು ಚರ್ಚೆ ನಡೆಸಿದ ಸಮಿತಿ ನಿಯಮ ಉಲ್ಲಂಘನೆ ಮಾಡಿದವರಿಗೆ ದುಪ್ಪಟ್ಟು ವಿಮೆ ವಿಧಿಸಬೇಕೆಂದು ಹೇಳಿದೆ. ಇದರಿಂದ ಅಪಘಾತ ಪ್ರಮಾಣಗಳು ಇಳಿಕೆಯಾಗಲಿವೆ ಎಂದು ಹೇಳಲಾಗಿದೆ. ಯೋಜನೆ ಪ್ರಕಾರ ನಿಯಮ ಉಲ್ಲಂಘನೆ ಮತ್ತು ವಿಮೆಗೆ ನೇರ ಸಂಪರ್ಕ ಇರಲಿದ್ದು, ನಿಯಮ ಉಲ್ಲಂಘಿಸಿದ ತಕ್ಷಣ ಅದು ಕಂಪೆನಿಗಳ ವ್ಯವಸ್ಥೆಗಳಲ್ಲಿ ದಾಖಲಾಗಲಿದೆ. ಅಲ್ಲದೇ ವಿಮೆ ಕಂಪೆನಿಗಳು, ಸಾರಿಗೆ ಇಲಾಖೆಯ ದತ್ತಾಂಶಗಳಲ್ಲೂ ಇದು ದಾಖಲಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ