ಹಲ್ಲೆಗೊಳಗಾದ ವ್ಯಕ್ತಿ ಬಳಿ ಇದ್ದದ್ದು ಗೋಮಾಂಸ
Team Udayavani, Jul 17, 2017, 3:05 AM IST
ನಾಗ್ಪುರ: 4 ದಿನಗಳ ಹಿಂದೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಗೋರಕ್ಷಕರಿಂದ ಥಳಿತಕ್ಕೆ ಒಳಗಾದ ಬಿಜೆಪಿಯ ಕಟೋಲ್ ಘಟಕದ ಸದಸ್ಯ, ಸಲೀಂ ಶಾಹಾ ಅವರ ಬಳಿ ಇದ್ದದ್ದು ಗೋಮಾಂಸ ಎಂದು ಪೊಲೀಸರು ರವಿವಾರ ಸ್ಪಷ್ಟಪಡಿಸಿದ್ದಾರೆ. ಸಲೀಂ ಕೈಯ್ಯಲ್ಲಿದ್ದ ಮಾಂಸವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದು ಗೋಮಾಂಸ ಎಂದು ಲ್ಯಾಬ್ ವರದಿ ನೀಡಿದೆ ಎಂದಿದ್ದಾರೆ.