ನನ್ನ ಕೊಂದುಬಿಡಿ: ಮಾಧ್ಯಮದ ಎದುರು ಕಣ್ಣೀರಿಟ್ಟ ಸ್ವಪ್ನಾ ಸುರೇಶ್
ಚಿನ್ನ ಕಳ್ಳಸಾಗಣೆ ಪ್ರಕರಣ
Team Udayavani, Jun 12, 2022, 10:25 PM IST
ತಿರುವನಂತಪುರಂ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ “ನನ್ನನ್ನು ಕೊಂದುಬಿಡಿ. ಆಗ ಈ ಕಥೆಯೇ ಮುಗಿದುಬಿಡುತ್ತದೆ’ ಎಂದು ಮಾಧ್ಯಮದ ಎದುರು ಕಣ್ಣೀರಿಟ್ಟಿದ್ದಾರೆ.
ಸ್ವಪ್ನಾ ಪರ ವಕೀಲರು ಫೇಸ್ಬುಕ್ನಲ್ಲಿ ಧಾರ್ಮಿಕ ನಿಂದನೆಯ ಪೋಸ್ಟ್ ಮಾಡಿರುವ ಆರೋಪದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, “ನನ್ನ ಜೊತೆಗಿರುವವರೆಲ್ಲರಿಗೂ ನೋಯಿಸಲಾಗುತ್ತಿದೆ. ಹಾಗೆ ಮಾಡಬೇಡಿ. ನನ್ನ ಕೊಂದುಬಿಡಿ’ ಎಂದಿದ್ದಾರೆ.
ಇತ್ತೀಚೆಗೆ ಸ್ವಪ್ನಾ ಅವರು ಸಿಎಂ ಪಿಣರಾಯಿ ವಿಜಯನ್, ಅವರ ಪತ್ನಿ ಮತ್ತು ಮಗಳು ಹಾಗೂ ಮಾಜಿ ಸಚಿವ ಕೆ.ಟಿ.ಜಲೀಲ್ ವಿರುದ್ಧ ಆರೋಪಗಳನ್ನು ಮಾಡಿದ್ದರು.